ಶಿವನನ್ನು(Lord SHiva) ದೇವರ ದೇವರೆಂದು ಪೂಜಿಸಲಾಗುತ್ತೆ ಮತ್ತು ಆತನನ್ನು ಪೂಜಿಸುವ ಮೂಲಕ, ಭಕ್ತರ ಎಲ್ಲಾ ಬಯಕೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಶಿವ ಪೂಜೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಮಾತ್ರ ಅರ್ಪಿಸಬೇಕು, ಆಗ ಮಾತ್ರ ಶಿವನ ಅನುಗ್ರಹಕ್ಕೆ ಪಾತ್ರರಾಗ್ತೇವೆ. ಮುಖ್ಯವಾಗಿ ಶಿವನ ಆರಾಧನೆಯಲ್ಲಿ, ಶ್ರೀಗಂಧ, ಬಿಲ್ವ ಪತ್ರೆ ಮತ್ತು ಅಕ್ಕಿಯನ್ನು ಅರ್ಪಿಸಲಾಗುತ್ತೆ, ಆದರೆ ಅರಿಶಿನ ಮತ್ತು ಕುಂಕುಮ ಅರ್ಪಿಸಬಾರದು ಎನ್ನಲಾಗುತ್ತೆ.. ಕುಂಕುಮವನ್ನು ಯಾವುದೇ ದೇವ ಅಥವಾ ದೇವತೆಯ ಪೂಜೆಯಲ್ಲಿ ಬಳಸಲಾಗುತ್ತೆ, ಆದರೆ ಅದನ್ನು ಶಿವ ಪೂಜೆಯಲ್ಲಿ ಬಳಸೋದನ್ನು ನಿಷೇಧಿಸಲಾಗಿದೆ ಯಾಕೇ?.