ತಮಾಷೆಗಾಗಿ ಋಷಿ ಮುನಿಗಳನ್ನು ಅಪಹಾಸ್ಯ ಮಾಡಿದ ಕಾರಣ, ಪುಂಜಿಕಸ್ಥಲ ಮುಂದಿನ ಜನ್ಮದಲ್ಲಿ ವಾನರ ರೂಪದಲ್ಲಿ ಜನಿಸುವ ಶಾಪವನ್ನು ಎದುರಿಸಬೇಕಾಯಿತು. ಋಷಿಯ ಶಾಪಕ್ಕೆ (curse) ಹೆದರಿದ ಪುಂಜಿಕಸ್ಥಲ ತನ್ನ ಅಪರಾಧವನ್ನು ಅರಿತುಕೊಂಡು, ಕ್ಷಮೆಯಾಚಿಸಿದಾಗ, ಋಷಿಗಳು ಕ್ಷಮಿಸಿದರು. ನಂತರ ಋಷಿ ಕೋತಿ ರೂಪದ ನಂತರವೂ, ನೀನು ಅಪ್ರತಿಮ ತೇಜಸ್ವಿನಿ ಆಗುವೆ, ಜೊತೆಗೆ ದೈವಿಕ ಮತ್ತು ಯಶಸ್ವಿ ಮಗನನ್ನು ಪಡೆಯುವೆ ಎಂದು ಹರಸಿದರು.