ಚಾಣಕ್ಯನು ಸ್ವತಃ ವಿದ್ವಾಂಸ ಮತ್ತು ಮಹಾನ್ ಗುರುವಾಗಿದ್ದ. ಚಾಣಕ್ಯ ನೀತಿಯಲ್ಲಿ (Chanakya Niti) ಅವರು ಹೇಳಿರುವ ಪ್ರಕಾರ, ಗುರುವೇ ನಿಮ್ಮನ್ನು ಗೋವಿಂದನನ್ನು ಭೇಟಿಯಾಗುವಂತೆ ಮಾಡುತ್ತಾರಂತೆ, ಅಂದ್ರೆ ದೇವರನ್ನು ಕಾಣುವಂತೆ ಮಾಡ್ತಾರಂತೆ. ಜೀವನವನ್ನು ಯಶಸ್ವಿಗೊಳಿಸಲು ಗುರುವನ್ನು ಹೊಂದಿರುವುದು ಬಹಳ ಮುಖ್ಯ, ಆದರೆ ನೀವು ಗುರು ಪೂರ್ಣಿಮೆಯಂದು ಗುರುವಾಗಲು ಯೋಚಿಸುತ್ತಿದ್ದರೆ, ಅದಕ್ಕೂ ಮೊದಲು ನೀವು ಚಾಣಕ್ಯನ ಈ ನೀತಿಗಳನ್ನು ಪರಿಗಣಿಸಬೇಕು.