Neem Karoli Baba: ಒಳ್ಳೆಯ ದಿನಗಳು ಬರುವ ಮೊದಲು ಈ ಚಿಹ್ನೆಗಳು ಸಿಗುತ್ತವೆ!

First Published Apr 12, 2023, 9:04 AM IST

ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಹೇಳಿ ಕೇಳಿ ಬರುವುದಿಲ್ಲ ಎನ್ನುತ್ತಾರೆ. ಆದರೆ ಅವು ಬರುವ ಮುಂಚಿನ ಕೆಲ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತಾ ಬರಲಿರುವ ದಿನಗಳಲ್ಲಿ ಒಳ್ಳೆಯದಾಗುವುದೇ ಎಂದು ತಿಳಿಯುತ್ತದೆ. ನೀಮ್ ಕರೋಲಿ ಬಾಬಾ ಪ್ರಕಾರ, ಒಳ್ಳೆಯ ದಿನಗಳು ಬರುವ ಮೊದಲು ಈ ಚಿಹ್ನೆಗಳು ಸಿಗುತ್ತವೆ..

ನೀಮ್ ಕರೋಲಿ ಬಾಬಾ ಅವರನ್ನು ಅವರ ಭಕ್ತರು ಭಗವಾನ್ ಹನುಮಂತನ ಅವತಾರವೆಂದು ಪರಿಗಣಿಸುತ್ತಾರೆ. ಆದರೆ ಬಾಬಾ ಮಾತ್ರ ತಮ್ಮನ್ನು ತಾವು ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸಿದ್ದರು. ಯಾರಿಗೂ ತಮ್ಮ ಪಾದ ಮುಟ್ಟಲೂ ಅವಕಾಶ ನೀಡುತ್ತಿರಲಿಲ್ಲ. 

ಇಂದಿಗೂ ಬಾಬಾರ ಪವಾಡಗಳು ಕೇಳಿ ಬರುತ್ತಲೇ ಇರುತ್ತವೆ. ನೀಮ್ ಕರೋಲಿ ಬಾಬಾ ಮತ್ತು ಬಾಬಾ ಅವರ ಆಶ್ರಮ ಕೈಂಚಿ ಧಾಮ್ ಎರಡೂ ಬಹಳ ಪ್ರಸಿದ್ಧವಾಗಿದ್ದು, ದೇಶ-ವಿದೇಶಗಳಲ್ಲಿ ಬಾಬಾನ ಭಕ್ತರು ಅನೇಕರಿದ್ದಾರೆ.

Latest Videos


ಇಂದೂ ಕೂಡ ನೀಮ್ ಕರೋಲಿ ಬಾಬಾ ಅವರ ಆಶ್ರಮ ಕೈಂಚಿ ಧಾಮದಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಭಾರತ ಮತ್ತು ವಿದೇಶಗಳಿಂದ ಜನರು ಅವರ ಆಶ್ರಮಕ್ಕೆ ಬಂದು ಧ್ಯಾನದಲ್ಲಿ ತೊಡಗುತ್ತಾರೆ. ಬಾಬಾ ಅವರ ಮರಣ ಸುಮಾರು 1900ರಲ್ಲಿ ಆಯಿತು ಎಂದು ಹೇಳಲಾಗುತ್ತದೆ. ಆದರೆ ಇಂದಿಗೂ ಸಹ ಭಕ್ತರು ಬಾಬಾ ಮೇಲೆ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. 

ನೀಮ್ ಕರೋಲಿ ಬಾಬಾ ಅವರು ಧರ್ಮ, ಜ್ಞಾನ ಮತ್ತು ಯಶಸ್ವಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಭಕ್ತರಿಗೆ ಹೇಳುತ್ತಿದ್ದರು. ಒಬ್ಬ ವ್ಯಕ್ತಿಗೆ ಒಳ್ಳೆಯ ದಿನಗಳು ಬರಲಿವೆ ಎಂದಾದಲ್ಲಿ ಅದಕ್ಕೂ ಮುನ್ನವೇ ಆತನಿಗೆ ಅದರ ಲಕ್ಷಣಗಳು ಗೋಚರಿಸಲು ಶುರುವಾಗುತ್ತದೆ ಎಂದು ಅವರು ಹೇಳಿದ್ದಾರೆ. ನೀವು ಸಹ ಈ ಚಿಹ್ನೆಗಳನ್ನು ನೋಡಿದರೆ, ನಿಮ್ಮ ಒಳ್ಳೆಯ ದಿನಗಳು ಶೀಘ್ರದಲ್ಲೇ ಬರಲಿವೆ ಎಂದು ಅರ್ಥ ಮಾಡಿಕೊಳ್ಳಿ.

sadhu 001

ಋಷಿ-ಸಂತ: ಇದ್ದಕ್ಕಿದ್ದಂತೆ ನೀವು ಸಾಧು-ಸಂತರನ್ನು ಕಂಡರೆ, ದೇವರ ಆಶೀರ್ವಾದವು ನಿಮ್ಮ ಮೇಲೆ ಬೀಳಲಿದೆ ಮತ್ತು ನಿದ್ರಿಸುತ್ತಿರುವ ಅದೃಷ್ಟವು ಎಚ್ಚರಗೊಳ್ಳಲಿದೆ ಎಂದು ಅರ್ಥ ಮಾಡಿಕೊಳ್ಳಿ. ಋಷಿಮುನಿಗಳು ಮತ್ತು ಸಂತರು ಕಾಣಿಸಿಕೊಳ್ಳುವುದು ಸುಲಭದ ಮಾತಲ್ಲ. 

 ದೇವತೆಗಳು ಅವರ ರೂಪದಲ್ಲಿ ದೇವರ ಸಲಹೆಯಿಂದ ಬಂದಿರುತ್ತಾರೆ ಎಂದು ನೀಮ್ ಕರೋಲಿ ಬಾಬಾ ಹೇಳುತ್ತಾರೆ. ನೀವು ಸಹ ಋಷಿ ಸಂತರನ್ನು ಕಂಡರೆ, ಇದುವರೆಗೆ ನಿಮ್ಮನ್ನು ಸುತ್ತುವರೆದಿರುವ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳಲಿವೆ ಎಂಬುದರ ಸಂಕೇತವಾಗಿದೆ. ಅವರನ್ನು ಆದರ ಗೌರವದಿಂದ ನಡೆಸಿಕೊಳ್ಳಿ.

ಭಕ್ತಿಯಿಂದ ಕಣ್ಣೀರು ಹರಿಯಲು ಪ್ರಾರಂಭಿಸುತ್ತದೆ: ದೇವರನ್ನು ಪೂಜಿಸುವಾಗ ಅಥವಾ ಕೀರ್ತನೆ- ಭಜನೆಯ ಸಮಯದಲ್ಲಿ ನಿಮ್ಮ ಕಣ್ಣುಗಳಿಂದ ಕಣ್ಣೀರು ಹರಿಯಲು ಪ್ರಾರಂಭಿಸಿದರೆ, ಅದು ತುಂಬಾ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮಗೆ ದೇವರು ಒಲಿಯುವ ಸಂದರ್ಭ ಬಂದಿದೆ ಎಂದು. ಅಂತಹ ಪರಿಸ್ಥಿತಿಯಲ್ಲಿ, ನೀವು ದೇವರನ್ನು ಪೂಜಿಸಬೇಕು ಮತ್ತು ಭಕ್ತಿಯಿಂದ ನಮಸ್ಕರಿಸಬೇಕು. ಇದರಿಂದ ಜೀವನದ ಸಮಸ್ಯೆಗಳು ದೂರವಾಗುತ್ತವೆ.

ಪ್ರಾಣಿಗಳು ಮತ್ತು ಪಕ್ಷಿಗಳು: ಅಪರೂಪಕ್ಕೆ ಪ್ರಾಣಿಗಳು ಅಥವಾ ಯಾವುದೇ ಪಕ್ಷಿ ನಿಮ್ಮ ಮನೆಗೆ ಬಂದರೆ, ಅದು ತುಂಬಾ ಒಳ್ಳೆಯದು. ಪಕ್ಷಿಯು ನಿಮ್ಮ ಮನೆಯೊಳಗೆ ಪ್ರವೇಶಿಸಿದರೆ ಅದು ಶುಭ ಸಂಕೇತವಾಗಿದೆ. ಇದು ಜೀವನದಲ್ಲಿ ಇರುವ ನಕಾರಾತ್ಮಕತೆಯನ್ನು ಕೊನೆಗೊಳಿಸುತ್ತದೆ ಮತ್ತು ಲಾಭ ಮತ್ತು ಪ್ರಗತಿಗೆ ಅವಕಾಶಗಳನ್ನು ಒದಗಿಸುತ್ತದೆ.

ಪೂರ್ವಜರ ದೃಷ್ಟಿ: ನಿಮ್ಮ ಕನಸಿನಲ್ಲಿ ಸತ್ತ ಪೂರ್ವಜರನ್ನು ನೀವು ನೋಡಿದರೆ, ಪೂರ್ವಜರು ನಿಮ್ಮನ್ನು ಆಶೀರ್ವದಿಸುತ್ತಿದ್ದಾರೆ ಮತ್ತು ಒಳ್ಳೆಯ ದಿನಗಳು ಬರಲಿವೆ ಎಂದು ಅರ್ಥ ಮಾಡಿಕೊಳ್ಳಿ. ಆದರೆ ಕನಸಿನಲ್ಲಿ ಪೂರ್ವಜರು ದುಃಖದಲ್ಲಿರುವುದನ್ನು ಅಥವಾ ಅಳುವುದನ್ನು ನೋಡಬಾರದು. ಪೂರ್ವಜರನ್ನು ಉತ್ತಮ ಭಂಗಿಯಲ್ಲಿ ಕಂಡರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

click me!