ದೇಶಾದ್ಯಂತ ಮಹಾಶಿವರಾತ್ರಿ ಭಜನೆ ನಡೆಯುತ್ತಿದೆ. ಶಿವನ ಧ್ಯಾನ, ಶಿವ ಕ್ಷೇತ್ರಗಳಿಗೆ ಪಾದಯಾತ್ರೆ ಸೇರಿದಂತೆ ಪೂಜೆಗಳು ನಡೆಯುತ್ತಿದೆ. ಇದರ ನಡುವೆ ಮಹಾಶಿವರಾತ್ರಿಗೆ ರಜೆ ಯಾವಾಗ ಅನ್ನೋ ಚರ್ಚೆಗಳು ಶುರುವಾಗಿದೆ. ಕರ್ನಾಟಕದಲ್ಲಿ ಫೆ.26ಕ್ಕೆ ಮಹಾಶಿವರಾತ್ರಿ ರಜೆ ನೀಡಲಾಗಿದೆ. ಕರ್ನಾಟಕದಂತೆ ಹಲವು ರಾಜ್ಯಗಳಲ್ಲಿ ನಾಳೆ ಶಿವರಾತ್ರಿ ರಜೆ ನೀಡಲಾಗಿದೆ. ನಾಳೆ ಬ್ಯಾಂಕ್ ರಜೆ. ಮಹಾಶಿವರಾತ್ರಿಯನ್ನು ದೇಶಾದ್ಯಂತ ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಛತ್ತೀಸ್ಗಢ, ಜಾರ್ಖಂಡ್, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.