ಹಣದ ಸಮಸ್ಯೆಯೇ? ಗುರುವಾರ ಹೀಗ್ ಮಾಡಿದ್ರೆ ಆಗುತ್ತೆ ಪರಿಹಾರ!

First Published Aug 3, 2023, 3:23 PM IST

ಧಾರ್ಮಿಕ ಮತ್ತು ಜ್ಯೋತಿಷ್ಯ ವಿಜ್ಞಾನದ ಪ್ರಕಾರ, ಗುರುವಾರವನ್ನು ಭಗವಾನ್ ಶ್ರೀಹರಿಯ ದಿನವೆಂದು ಪರಿಗಣಿಸಲಾಗುತ್ತದೆ.ಅಷ್ಟೇ ಅಲ್ಲ ಗುರುವಾರದಂದು ಕೆಲವೊಂದು ವಸ್ತುಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಅವುಗಳ ಬಗ್ಗೆ ತಿಳಿಯೋಣ.
 

ಸನಾತನ ಧರ್ಮದಲ್ಲಿ ಗುರುವಾರದ (Thursday) ಬಗ್ಗೆ ಅನೇಕ ನಂಬಿಕೆಗಳಿವೆ. ಈ ದಿನವನ್ನು ಭಗವಾನ್ ಶ್ರೀ ಹರಿ ವಿಷ್ಣುವಿಗೆ ಅರ್ಪಿಸಲಾಗಿದೆ. ಜ್ಯೋತಿಷ್ಯದಲ್ಲಿ, ಗುರುವಾರ ಮಾಡಬೇಕಾದ ಕೆಲವು ವಿಷಯಗಳಿವೆ, ಅವುಗಳನ್ನು ಖರೀದಿಸುವುದು ಶುಭ ಮತ್ತು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮಾತ್ರವಲ್ಲ, ಗುರುವಾರ ಮಾಡುವಂತಹ ಕೆಲವು ಕೆಲಸಗಳ ಬಗ್ಗೆ ತಿಳಿಯೋಣ. 
 

ಗುರುವಾರ ಹಳದಿ ಸಿಹಿತಿಂಡಿ ಖರೀದಿಸಿ 
ಹಳದಿ ಸಿಹಿತಿಂಡಿಗಳು ವಿಷ್ಣುವಿಗೆ ತುಂಬಾ ಪ್ರಿಯವಾದವು. ಆದ್ದರಿಂದ, ಈ ದಿನ ನೀವು ಹಳದಿ ಸಿಹಿತಿಂಡಿಗಳನ್ನು (yellow sweets) ಖರೀದಿಸಿ ವಿಷ್ಣುವಿನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡಿ. ಇದರಿಂದ ಬೇಡಿಕೊಂಡ ಪ್ರಾರ್ಥನೆ ಈಡೇರುತ್ತೆ. 

Latest Videos


ಗುರುವಾರ ಹಳದಿ ಬಟ್ಟೆಗಳನ್ನು ಖರೀದಿಸಿ
ನಿಮ್ಮ ಜಾತಕದಲ್ಲಿ ಗುರುವಿನ ಸ್ಥಾನ ದುರ್ಬಲವಾಗಿದ್ದರೆ ಗುರುವಾರ ಹಳದಿ ಬಟ್ಟೆ (yellow cloths) ಖರೀದಿಸಿ. ಇದು ನಿಮ್ಮ ಜಾತಕದಲ್ಲಿ ಗುರು ಸ್ಥಾನವನ್ನು ಬಲಪಡಿಸುತ್ತದೆ. ಇದರಿಂದ ಜೀವನದಲ್ಲಿ ಎಲ್ಲವೂ ಶುಭವಾಗುತ್ತೆ. 

ಗುರುವಾರ ಚಿನ್ನ ಮತ್ತು ಬೆಳ್ಳಿ ಖರೀದಿಸಿ 
ಗುರುವಾರ ಚಿನ್ನ ಮತ್ತು ಬೆಳ್ಳಿ ಆಭರಣ (gold and silver jewellry) ಖರೀದಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ವ್ಯಕ್ತಿಯು ಎಂದಿಗೂ ಹಣದ ಕೊರತೆಯನ್ನು ಹೊಂದಿರುವುದಿಲ್ಲ.

ಗುರುವಾರ ತಾಯಿ ಲಕ್ಷ್ಮಿಗೆ ಕೆಂಪು ಬಟ್ಟೆ ಅರ್ಪಿಸಿ
ಗುರುವಾರ, ಲಕ್ಷ್ಮಿ ದೇವಿ ಮತ್ತು ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ, ನೀವು ಸತ್ಯನಾರಾಯಣ ಪೂಜೆಯನ್ನು ನಿಮ್ಮ ಮನೆಯಲ್ಲಿ ಮಾಡಬೇಕು. ಇದು ಶೀಘ್ರದಲ್ಲೇ ನಿಮಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಮತ್ತು ವೈವಾಹಿಕ ಜೀವನದಲ್ಲಿ (married life) ಸಂತೋಷ ಉಳಿಯುತ್ತದೆ. ಇದರೊಂದಿಗೆ, ಈ ದಿನ ತಾಯಿ ಲಕ್ಷ್ಮಿಗೆ ಕೆಂಪು ಬಟ್ಟೆ ಖರೀದಿಸಿ. ಇದು ತಾಯಿ ಲಕ್ಷ್ಮಿಯೊಂದಿಗೆ ವಿಷ್ಣುವಿನ ಅನುಗ್ರಹವನ್ನು ಸಹ ನೀಡುತ್ತೆ. 

ಗುರುವಾರ ಅರಿಶಿನ ಖರೀದಿಸಿ 
ಅರಿಶಿನವನ್ನು ಹೆಚ್ಚಾಗಿ ಶುಭ ಕಾರ್ಯಗಳಲ್ಲಿ ಬಳಸುತ್ತಾರೆ. ಇದು ಶುಭ ಸಂಕೇತವಾಗಿದೆ. ಹಾಗಾಗಿ ಗುರುವಾರ ಅರಿಶಿನವನ್ನು ಖರೀದಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದು ಜಾತಕದಲ್ಲಿ ಗುರುದೋಷವನ್ನು ತೊಡೆದುಹಾಕಬಹುದು. 

ಗುರುವಾರ ಹಳದಿ ರತ್ನದ ಕಲ್ಲುಗಳನ್ನು ಖರೀದಿಸಿ ಮತ್ತು ಧರಿಸಿ
ಗುರುವಾರ, ಹಳದಿ ನೀಲ ರತ್ನ (yellow gem stone) ಧರಿಸುವ ಮೂಲಕ, ವ್ಯಕ್ತಿಯು ಗುರುದೋಷದಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಹಾಗಾಗಿ ಗುರುವಾರ ದಿನ ಹಳದಿ ಕಲ್ಲು ಖರೀದಿಸಿ. 

ಗುರುವಾರ ಚೆಂಡು ಹೂವಿನ ಹಾರ ಖರೀದಿಸಿ  
ಗುರುವಾರ, ಚೆಂಡು ಹೂವುಗಳನ್ನು ಖರೀದಿಸಿ ಮನೆಯ ಮುಖ್ಯ ಬಾಗಿಲಿಗೆ ಹಾಕುವುದರಿಂದ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.

click me!