ಬಸಂತ ಪಂಚಮಿ ದಿನ ಸರಸ್ವತಿಗೆ ಪೂಜೆ ಮಾಡುವ ಜೊತೆಗೆ ಆಕೆಯ ನೆಚ್ಚಿನ ಆಹಾರವನ್ನು ನೀವು ನೈವೇದ್ಯವಾಗಿ ನೀಡಬೇಕು. ಸರಸ್ವತಿ ದೇವಿಗೆ ಹಳದಿ ಬಣ್ಣ ತುಂಬಾ ಇಷ್ಟ. ಹಳದಿ ಶುದ್ಧತೆ, ಹೊಸ ಶಕ್ತಿ ಮತ್ತು ಜ್ಞಾನವನ್ನು ಸಂಕೇತಿಸುತ್ತದೆ. ಹಾಗಾಗಿ ನೀವು ಕೇಸರಿ ಸಿಹಿ ಅನ್ನವನ್ನು ಸರಸ್ವತಿಗೆ ಅರ್ಪಿಸಿ. ಬೇಸನ್ ಲಡ್ಡು, ಮಾಲ್ಪುವಾ, ಪ್ಲಮ್, ಹಳದಿ ಹಣ್ಣು ಅಥವಾ ಸಿಹಿ, ಜೇನುತುಪ್ಪ , ಸಕ್ಕರೆ ಮಿಠಾಯಿಯನ್ನು ನೀವು ದೇವಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಬಹುದು.