ಮಾನವೀಯ ಮೌಲ್ಯಗಳ ಸಾರಿದ ಮಧು ಪಂಡಿತ್ ದಾಸರು
ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸರು ಈ ಸಂದರ್ಭದಲ್ಲಿ ಮಾತನಾಡಿ, ಶ್ರೀಲ ಪ್ರಭುಪಾದರು ಆರಂಭಿಸಿದ ಈ ರಥಯಾತ್ರೆಯ ಉದ್ದೇಶವನ್ನು ಸ್ಮರಿಸಿದರು. ಭಕ್ತಿ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಇನ್ನಷ್ಟು ಬಲಪಡಿಸಲು ಈ ರಥಯಾತ್ರೆ ಪೂರಕವಾಗಿದೆ ಎಂದು ಅವರು ತಿಳಿಸಿದರು. ಜಾಗತಿಕ ಹರೇ ಕೃಷ್ಣ ಚಳವಳಿಯ ಪ್ರಮುಖರು ಈ ದೈವಿಕ ಸಂಭ್ರಮಕ್ಕೆ ಸಾಕ್ಷಿಯಾದರು.