ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ

Published : Jan 11, 2026, 06:45 PM IST

ಬೆಂಗಳೂರಿನ ಇಸ್ಕಾನ್ ವತಿಯಿಂದ 41ನೇ ವರ್ಷದ  ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯು ಅತ್ಯಂತ ಸಂಭ್ರಮದಿಂದ ನಡೆಯಿತು. ಮಾಧವತೀರ್ಥ ಮಠದ ವಿದ್ಯಾ ವಲ್ಲಭ ಮಾಧವ ತೀರ್ಥ ಶ್ರೀಗಳು ಮತ್ತು ಮಧು ಪಂಡಿತ್ ದಾಸರ ಉಪಸ್ಥಿತಿಯಲ್ಲಿ ನಡೆದ ಈ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.  

PREV
15

ವೈಭವದ ರಥಯಾತ್ರೆಗೆ ಚಾಲನೆ

ಬೆಂಗಳೂರಿನ ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ವತಿಯಿಂದ 41ನೇ ವರ್ಷದ ಶ್ರೀ ಶ್ರೀ ಕೃಷ್ಣ-ಬಲರಾಮ ರಥಯಾತ್ರೆಯು ಅತ್ಯಂತ ಭಕ್ತಿಭಾವದಿಂದ ಜರುಗಿತು. ವೇದಘೋಷಗಳ ನಡುವೆ ರಥದ ಮೇಲೆ ವಿರಾಜಮಾನರಾಗಿದ್ದ ಕೃಷ್ಣ-ಬಲರಾಮರಿಗೆ ವಿಶೇಷ ದರ್ಶನ ಮತ್ತು ಆರತಿ ನೆರವೇರಿಸಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪ್ರದಾಯದಂತೆ ರಸ್ತೆ ಶುದ್ಧೀಕರಣ ಮಾಡಿ, ರಥವನ್ನು ಎಳೆಯುವ ಮೂಲಕ ಈ ಪವಿತ್ರ ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

25

ಪರಮಪೂಜ್ಯ ಶ್ರೀಗಳ ಆಶೀರ್ವಚನ

ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಂಬಿಹಳ್ಳಿಯ ಶ್ರೀ ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ವಲ್ಲಭ ಮಾಧವ ತೀರ್ಥ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಚನ ನೀಡಿದರು. "ಇದು ಕೇವಲ ಬೆಂಗಳೂರಿನ ಬೆಟ್ಟವಲ್ಲ, ಇದು ಸಾಕ್ಷಾತ್ ಮಥುರಾ-ಬೃಂದಾವನದಂತಹ ಪುಣ್ಯಕ್ಷೇತ್ರ. ಇಂತಹ ಉತ್ಸವಗಳು ಜನರ ಮನಸ್ಸಿನಲ್ಲಿ ಭಕ್ತಿ, ಶಾಂತಿ ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ" ಎಂದು ಮಾರ್ಮಿಕವಾಗಿ ನುಡಿದರು.

35

ಮಾನವೀಯ ಮೌಲ್ಯಗಳ ಸಾರಿದ ಮಧು ಪಂಡಿತ್ ದಾಸರು

ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸರು ಈ ಸಂದರ್ಭದಲ್ಲಿ ಮಾತನಾಡಿ, ಶ್ರೀಲ ಪ್ರಭುಪಾದರು ಆರಂಭಿಸಿದ ಈ ರಥಯಾತ್ರೆಯ ಉದ್ದೇಶವನ್ನು ಸ್ಮರಿಸಿದರು. ಭಕ್ತಿ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಇನ್ನಷ್ಟು ಬಲಪಡಿಸಲು ಈ ರಥಯಾತ್ರೆ ಪೂರಕವಾಗಿದೆ ಎಂದು ಅವರು ತಿಳಿಸಿದರು. ಜಾಗತಿಕ ಹರೇ ಕೃಷ್ಣ ಚಳವಳಿಯ ಪ್ರಮುಖರು ಈ ದೈವಿಕ ಸಂಭ್ರಮಕ್ಕೆ ಸಾಕ್ಷಿಯಾದರು.

45

ರಾಜಾಜಿನಗರದ ಬೀದಿಗಳಲ್ಲಿ ಕೃಷ್ಣ-ಬಲರಾಮರ ಸವಾರಿ

ಸುಮಾರು 26 ಅಡಿ ಎತ್ತರದ, ಆಧುನಿಕ ಸುರಕ್ಷಾ ವ್ಯವಸ್ಥೆ ಹೊಂದಿದ ಭವ್ಯ ರಥವು ರಾಜಾಜಿನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಹರೇ ಕೃಷ್ಣ ಕೀರ್ತನೆಗಳು ಮತ್ತು ಭಕ್ತಿಗೀತೆಗಳ ಗಾಯನ ಇಡೀ ಪರಿಸರದಲ್ಲಿ ದೈವಿಕ ಕಳೆಯನ್ನು ಹೆಚ್ಚಿಸಿತ್ತು. ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಸಾಲುಗಟ್ಟಿ ನಿಂತು ಭಗವಂತನ ದರ್ಶನ ಪಡೆದು ಪುನೀತರಾದರು.

55

ನಿರಂತರ ಸೇವೆ ಮತ್ತು ಪ್ರಸಾದ ವಿತರಣೆ

ಈ ಬೃಹತ್ ಉತ್ಸವದ ಯಶಸ್ಸಿಗಾಗಿ ನೂರಾರು ಸ್ವಯಂಸೇವಕರು ಹಗಲಿರುಳು ಶ್ರಮಿಸಿದರು. ರಥಯಾತ್ರೆಯ ಉದ್ದಕ್ಕೂ ವ್ಯವಸ್ಥಿತವಾಗಿ ಭಕ್ತರನ್ನು ನಿರ್ವಹಿಸುವುದರ ಜೊತೆಗೆ, ಬಂದಿದ್ದ ಸಾವಿರಾರು ಜನರಿಗೆ ಉಚಿತವಾಗಿ ಮಹಾಪ್ರಸಾದವನ್ನು ವಿತರಿಸಲಾಯಿತು. ಭಕ್ತರ ಸಂಭ್ರಮ ಮತ್ತು ಸ್ವಯಂಸೇವಕರ ಶ್ರದ್ಧೆ ರಥಯಾತ್ರೆಗೆ ವಿಶೇಷ ಮೆರುಗು ನೀಡಿತು.

Read more Photos on
click me!

Recommended Stories