ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಿತಿಯು ಪ್ರತಿಯೊಬ್ಬ ವ್ಯಕ್ತಿ ಮೇಲೂ ಪರಿಣಾಮ ಬೀರುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ಅನೇಕ ಪರಿಹಾರಗಳಿವೆ. ಅವುಗಳನ್ನು ಗ್ರಹಗಳನ್ನು ಶಾಂತಗೊಳಿಸಲು ಮತ್ತು ಬಲಪಡಿಸಲು ಬಳಸಲಾಗುತ್ತೆ. ಅಂತಹ ಪರಿಹಾರ ಮಾರ್ಗಗಳಲ್ಲಿ ಉದ್ದಿನ ಬೇಳೆಯೂ ಒಂದು. ಉದ್ದಿನ ಬೇಳೆಯನ್ನು ಆಹಾರದಲ್ಲಿ ಮಾತ್ರವಲ್ಲದೆ ಅದಕ್ಕೆ ಸಂಬಂಧಿಸಿದ ಟ್ರಿಕ್ಸ್ ಮತ್ತು ಜ್ಯೋತಿಷ್ಯ ಪರಿಹಾರಗಳನ್ನು ಸಹ ವಿಶೇಷ ಪ್ರಯೋಜನಗಳನ್ನು ನೀಡುತ್ತೆ.
ಪೌರಾಣಿಕ ನಂಬಿಕೆಯ ಪ್ರಕಾರ, ಕಪ್ಪು ಉದ್ದಿನ ಬೇಳೆ (Urad dal) ತಂತ್ರಗಳನ್ನು ಸಮಸ್ಯೆಗಳನ್ನು ನಿವಾರಿಸಲು ಮತ್ತು ಅದೃಷ್ಟ ಹೆಚ್ಚಿಸಲು ಪರಿಣಾಮಕಾರಿ. ಇದರ ತಂತ್ರಗಳು ಹಣದ ಲಾಭ ಮತ್ತು ಅದೃಷ್ಟ ಬಲಪಡಿಸಲು ಬಹಳ ಉಪಯುಕ್ತ. ಉದ್ದಿನ ಬೇಳೆ ತಂತ್ರಗಳು ಶನಿವಾರ ಹೆಚ್ಚು ಫಲಪ್ರದವಾಗಿವೆ. ಉದ್ದಿನ ಬೇಳೆಗೆ ಸಂಬಂಧಿಸಿದ ಕೆಲವು ವಿಶೇಷ ತಂತ್ರಗಳು ಮತ್ತು ಪರಿಹಾರಗಳ ಬಗ್ಗೆ ತಿಳಿಯೋಣ.
26
ಉದ್ದಿನ ಬೇಳೆ ಟ್ರಿಕ್ಸ್
ಶನಿವಾರ ಸಂಜೆ, ಉದ್ದಿನ ಎರಡು ಕಾಳುಗಳಿಗೆ ಸ್ವಲ್ಪ ಮೊಸರು(Curd) ಮತ್ತು ಕುಂಕುಮವನ್ನು ಸೇರಿಸಿ. ಅದನ್ನು ಸತತ 21 ದಿನಗಳ ಕಾಲ ಅರಳಿ ಮರದ ಕೆಳಗೆ ಇರಿಸಿ. ಹಿಂತಿರುಗಿ ಬರುವಾಗ, ಮರೆತೂ ಕೂಡ ಹಿಂದಿರುಗಿ ನೋಡಬೇಡಿ. ಈ ತಂತ್ರವು ಹಣಕಾಸಿನ ಸಮಸ್ಯೆಯನ್ನು ದೂರ ಮಾಡುತ್ತೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.
36
ಶನಿ ದೋಷಗಳಿಂದ ಬಳಲುತ್ತಿದ್ದರೆ, ಉದ್ದಿನ ಬೇಳೆಯ ಈ ಟ್ರಿಕ್ ನಿಮಗೆ ತುಂಬಾ ಪರಿಣಾಮಕಾರಿ. ಶನಿವಾರ, ಉದ್ದಿನ ಬೇಳೆಯನ್ನು ನಿಮ್ಮ ತಲೆಗೆ 3 ಬಾರಿ ಸುತ್ತಿಸಿ, ಅದನ್ನು ಕಾಗೆಗಳಿಗೆ(Crow) ತಿನ್ನಿಸಿ. ಇದನ್ನು ಸತತವಾಗಿ ಏಳು ಶನಿವಾರ ಮಾಡುವ ಮೂಲಕ, ಶನಿ ದೋಷವನ್ನು ನಿವಾರಿಸಬಹುದು.
46
ಶನಿವಾರ, ಸಾಸಿವೆ ಎಣ್ಣೆಯನ್ನು(Mustard oil) ಪಾತ್ರೆಯಲ್ಲಿ ಹಾಕಿ ಮತ್ತು ಅದನ್ನು ಹಾಸಿಗೆ ಕೆಳಗೆ ಇರಿಸಿ. ಮರುದಿನ, ಈ ಎಣ್ಣೆಯಲ್ಲಿ ಉದ್ದಿನ ಬೇಳೆ ಡಂಪ್ಲಿಂಗ್ ತಯಾರಿಸಿ ಮತ್ತು ಅದನ್ನು ನಾಯಿ ಮತ್ತು ಬಡವರಿಗೆ ತಿನ್ನಿಸಿ. ಇದನ್ನು ಮಾಡೋದರಿಂದ, ಬಡತನ ದೂರವಾಗುತ್ತದೆ.
56
ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತಿದ್ದರೆ, ಖಂಡಿತವಾಗಿಯೂ ಕಪ್ಪು ಉದ್ದಿನ ಬೇಳೆ ಈ ಪರಿಹಾರ ಪ್ರಯತ್ನಿಸಿ. ಯಾವುದೇ ಕಬ್ಬಿಣದ (Iron) ವಸ್ತುವನ್ನು ತನ್ನಿ ಮತ್ತು ಅದನ್ನು ನಿಮ್ಮ ಹೊಸ ಕಚೇರಿಯಲ್ಲಿ ಇರಿಸಿ. ಇದರಿಂದ ಹೇಗೆ ವ್ಯವಹಾರ ವೃದ್ಧಿಯಾಗುತ್ತೆ ಅಂದುಕೊಂಡಿರೆ? ಮುಂದೆ ಓದಿ..
66
ಕಬ್ಬಿಣದ ವಸ್ತು ಇಡಬೇಕಾದಲ್ಲಿ ಮೊದಲಿಗೆ ಸ್ವಸ್ತಿಕವನ್ನು(Swastik) ತಯಾರಿಸಿ ಮತ್ತು ಅದರ ಮೇಲೆ ಸ್ವಲ್ಪ ಕಪ್ಪು ಉದ್ದನ್ನು ಇರಿಸಿ. ಈಗ ಆ ಕಬ್ಬಿಣದ ವಸ್ತುವನ್ನು ಅದರ ಮೇಲೆ ಇರಿಸಿ. ಇದನ್ನು ಮಾಡೋದರಿಂದ, ನೀವು ವ್ಯವಹಾರದಲ್ಲಿ ಬೇಗ ಪ್ರಗತಿಯನ್ನು ಪಡೆಯುತ್ತೀರಿ. ಅಭಿವೃದ್ಧಿ ಸಾಧ್ಯವಾಗುತ್ತೆ ಎಂದು ನಂಬಲಾಗಿದೆ.