ಪ್ರಭಾಸ್ ಮತ್ತು ರಾಜಮೌಳಿ ನಡುವಿನ ಬಾಂಧವ್ಯ ಅಪಾರ. ಛತ್ರಪತಿ, ಬಾಹುಬಲಿ 1 & 2 ಚಿತ್ರಗಳು ಈ ಜೋಡಿಯಿಂದ ಬಂದವು. ಬಾಹುಬಲಿ ಚಿತ್ರಗಳು ಭಾರತೀಯ ಮತ್ತು ತೆಲುಗು ಚಿತ್ರರಂಗದ ಮೇಲೆ ದೊಡ್ಡ ಪ್ರಭಾವ ಬೀರಿದವು.
25
ಪ್ರಭಾಸ್ ಹೇಳುತ್ತಾರೆ, ರಾಜಮೌಳಿ ನನಗೆ ಒಮ್ಮೆ ಸಿಂಹಾದ್ರಿ ಕಥೆ ಹೇಳಿದ್ರು. ಆಗ ಅವರು ಸ್ಟೂಡೆಂಟ್ ನಂ.1 ಚಿತ್ರ ಮಾಡಿದ್ದರು. ಅದು ಹಿಟ್ ಆದ್ರೂ ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಸಿಂಹಾದ್ರಿ ರಿಜೆಕ್ಟ್ ಮಾಡಿದೆ. ಆಗ ನನಗೆ ಒಳ್ಳೆಯ ಕಥೆ ಯಾವುದು ಅಂತ ಗೊತ್ತಿರಲಿಲ್ಲ.
35
ಸಿಂಹಾದ್ರಿ ಬಿಡುಗಡೆಗೂ ಮುನ್ನ ಜೂ.ಎನ್.ಟಿ.ಆರ್ ಜೊತೆ ಪ್ರಿವ್ಯೂ ನೋಡಿದೆ. ನೋಡಿ ನನಗೆ ಶಾಕ್ ಆಯ್ತು. ಇಷ್ಟೊಂದು ಒಳ್ಳೆಯ ನಿರ್ದೇಶಕರನ್ನ ರಿಜೆಕ್ಟ್ ಮಾಡಿದ್ನಲ್ಲ ಅಂತ ಬೇಜಾರಾಯ್ತು. ಆಮೇಲೆ ರಾಜಮೌಳಿ ನನ್ನ ಜೊತೆ ಸಿನಿಮಾ ಮಾಡಲ್ಲ ಅಂದ್ಕೊಂಡೆ. ಆದ್ರೆ ಅವರು ಛತ್ರಪತಿ ಮಾಡಿದ್ರು.
ರಾಜಮೌಳಿ ಕೂಡ ತಮ್ಮ ಚಿತ್ರಗಳಲ್ಲಿ ತಮಗೆ ಇಷ್ಟವಿಲ್ಲದ ಚಿತ್ರ ಯಾವುದೆಂದು ಹೇಳಿದ್ದಾರೆ. ಅದು ಸ್ಟೂಡೆಂಟ್ ನಂ.1.
55
ಆ ಚಿತ್ರದಲ್ಲಿ ಪರಿಪಕ್ವತೆ ಇಲ್ಲದ ನಿರ್ದೇಶನ ಇದೆ ಅಂತ ರಾಜಮೌಳಿ ಹೇಳಿದ್ದಾರೆ. ತಮ್ಮ ವೃತ್ತಿಜೀವನದಿಂದ ಒಂದು ಚಿತ್ರವನ್ನು ತೆಗೆದುಹಾಕಬೇಕಾದರೆ, ಅದು ಸ್ಟೂಡೆಂಟ್ ನಂ.1 ಅಂತ ರಾಜಮೌಳಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.