ಜನ ನಾಯಗನ್' ಚಿತ್ರದ ಕುರಿತು ಬಿಗ್‌ ಅಪ್ಡೇಟ್‌; ಹೈ ಕೋರ್ಟ್‌ ಹೇಳಿದ್ದಿಷ್ಟೇ!

Published : Jul 02, 2026, 03:23 PM IST

ವಿಜಯ್ ನಟನೆಯ 'ಜನ ನಾಯಗನ್‌' ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ.  ಪೈರಸಿ ಮಾಡಿದ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದು, ತನಿಖೆ ಮುಂದುವರೆದಿದೆ. ಅಷ್ಟಕ್ಕೂ ಕೋರ್ಟ್‌ಹೇಳಿದ್ದೇನು ಗೊತ್ತಾ? 

PREV
16
ವಿಜಯ್‌ ಬೆಂಬಿಡದ ವಿವಾದ

ಜನ ನಾಯಗನ್‌ ಚಿತ್ರಕ್ಕೆ ಹಿಡಿದ ಶನಿ ರೀಲೀಸ್‌ಗೂ ಮುನ್ನವೇ ಪ್ರವೇಶ ಮಾಡಿತ್ತು. ಚುನಾವಣೆಗೂ ಮುಂಚೆ ವಿಜಯ್‌ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ, ಅವರ ಪತ್ನಿ ವಿಚ್ಛೇದನ, ಕೆರೂರು ದುರಂತ ಹಾಗೂ ಜನ ನಾಯಗನ್‌ ವಿವಾದಗಳು ವಿಜಯ್‌ ಅವರನ್ನು ಮಕಾಡೆ ಮಲಗಿಸಲು ತಲೆ ಎತ್ತಿ ನಿಂತಿದ್ದವು ಎನ್ನುವುದು ಮೇಲ್ನೋಟಕ್ಕೆ ಸತ್ಯವಾದರೂ ಅದೇ ಖಚಿತವಾಗಿತ್ತು. ಇದೀಗ ಮದ್ರಾಸ್ ಹೈ ಕೋರ್ಟ್ ಮಹತ್ವದ ಆದೇಶ ಒಂದನ್ನು ಹೊರ ಹಾಕಿದೆ. ಅದೇನು ಅಂತಾ ನೋಡೋಣ ಬನ್ನಿ .

26
ಪೊಲೀಸ್‌ರ ಹೇಳಿಕೆ ಏನು?

ಜನ ನಾಯಗನ್‌ ಚಿತ್ರದ ಕುರಿತು ಚಿತ್ರ ಬಿಡುಗಡೆ ಪ್ರಾರಂಭದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿತು. ಅಲ್ಲದೇ ಈ ಜನ ನಾಯನ್‌ ಚಿತ್ರವನ್ನು ಪೈರಸಿ ಮಾಡಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿರುವ ಇಬ್ಬರ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ, ಅಂತರ್ಜಾಲದಲ್ಲಿ ಅಕ್ರಮವಾಗಿ ಪೋಸ್ಟ್ ಮಾಡಲಾದ ಜನ ನಾಯಗನ್ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ಅಂಗೀಕರಿಸಿದೆ.

36
21 ಜನರ ವಿರುದ್ಧ ಪ್ರಕರಣ ದಾಖಲು!

ಮುಖ್ಯಮಂತ್ರಿ ವಿಜಯ್ ನಟಿಸಿದ ಜನ ನಾಯಗನ್ ಚಿತ್ರ ಅಕ್ರಮವಾಗಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಚಲನಚಿತ್ರ ನಿರ್ಮಾಣ ಕಂಪನಿ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಚೆನ್ನೈ ಸೈಬರ್ ಕ್ರೈಮ್ ಪೊಲೀಸರು 21 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಹಲವರನ್ನು ಬಂಧಿಸಿದ್ದಾರೆ.

46
ಬಂಧಿತರ ಜಾಮೀನು ಅರ್ಜಿ ವಜಾ!

ಈ ಪ್ರಕರಣದಲ್ಲಿ ಬಂಧಿತರಾಗಿರುವ ರಜನಿಕಾಂತ್ ಮತ್ತು ಜಯಪ್ರಕಾಶ್ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಗಳನ್ನು ಹೈ ಕೋರ್ಟ್ ಮುಲಾಜಿಲ್ಲದೇ ತಿರಸ್ಕರಿಸಿದೆ.

56
ತಲೆಮರೆಸಿಕೊಂಡವರು ಎಷ್ಟು ಜನ!

ಈ ಅರ್ಜಿಗಳನ್ನು ನ್ಯಾಯಾಧೀಶ ಸಿ. ಕುಮಾರಪ್ಪನ್ ಅವರ ಮುಂದೆ ವಿಚಾರಣೆಗೆ ಮಂಡಿಸಿದಾಗ, ವೆಬ್‌ಸೈಟ್‌ನಲ್ಲಿ ಕಾನೂನುಬಾಹಿರವಾಗಿ ಪೋಸ್ಟ್ ಮಾಡಲಾದ ಜನ ನಾಯಗನ್ ಚಿತ್ರವನ್ನು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

66
ಇಬ್ಬರಿಗೆ ಇಲ್ಲ ಬಿಡುಗಡೆ ಭಾಗ್ಯ

ಬಂಧಿತ ಇಬ್ಬರು ಶಂಕಿತರಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಪೊಲೀಸರು ವಾದಿಸಿದ್ದಾರೆ. ಈ ವಾದಗಳನ್ನು ಒಪ್ಪಿಕೊಂಡ ನ್ಯಾಯಾಧೀಶರು ಇಬ್ಬರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories