ದರ್ಶನ್ ಪ್ರಕರಣಕ್ಕೆ ಬಿಗ್‌ಟರ್ನ್, ಮಾಫಿ ಸಾಕ್ಷಿ ಹೇಳಲು ಬಂದ ಪ್ರದೂಷ್ ನಗು ನಗುತ್ತಾ ಹೇಳಿದ್ದು ಇದೊಂದೇ ಮಾತು!

Published : Sep 02, 2026, 03:13 PM IST

ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿರುವ ಪ್ರದೂಷ್ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ಸೆಷನ್ಸ್ ನ್ಯಾಯಾಲಯ ಮುಂದೂಡಿದೆ. ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

PREV
16
ರೇಣುಕಾಸ್ವಾಮಿ ಕೇಸ್, ಮಾಫಿ ಸಾಕ್ಷಿ ಹೇಳಿಕೆಗೆ ಮತ್ತೆ ಅಡ್ಡಿ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮುಂದೂಡಿಕೆ ಆಗಿದೆ. ಹೈಕೋರ್ಟ್ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ, ಸೆಷನ್ಸ್ ಕೋರ್ಟ್ ಮಾಫಿ ಸಾಕ್ಷಿ ದಾಖಲು ಮಾಡಿಕೊಳ್ಳುವುದನ್ನು ಮುಂದೂಡಿಕೆ ಮಾಡಿದೆ.

26
ಹೇಳಿಕೆ ದಾಖಲು ಮುಂದೂಡಿಕೆ

ಹೈಕೋರ್ಟ್ನಲ್ಲಿ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರದೂಷ್ ಹೇಳಿಕೆ ದಾಖಲಿಗೆ ಸಮಯ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಮನವಿ ಮಾಡಿದ್ದರು. ಇದರಂತೆ ಸದ್ಯ ನ್ಯಾಯಾಲಯ ಸೋಮವಾರಕ್ಕೆ ಪ್ರದೂಷ್ ಹೇಳಿಕೆ ದಾಖಲನ್ನು ಸೆಕ್ಷನ್ ಕೋರ್ಟ್ ಮುಂದೂಡಿಕೆ ಮಾಡಿದೆ.

36
ನ್ಯಾಯಾಲಕ್ಕೆ ಆಗಮಿಸಿದ್ದ ಪ್ರದೂಷ್

ಇಂದು ಕೋರ್ಟ್‌ಗೆ ಹಾಜರಾಗಿದ್ದ ಪ್ರದೂಷ್‌, ಸಹಿ ಮಾಡಿ ಮತ್ತೆ ಜೈಲಿಗೆ ವಾಪಸ್ ಆಗಿದ್ದಾರೆ. ಇನ್ನು ಹೇಳಿಕೆ ದಾಖಲಿಸಲು ಪೊಲೀಸರು ಪ್ರದೂಷ್‌ನನ್ನೂ ನ್ಯಾಯಾಲಯಕ್ಕೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಪ್ರದೂಷ್, ಕ್ಯಾಮೆರಾ ಆನ್ ಮಾಡಿಕೊಂಡು ಮಾತನಾಡಿ ಎಂದರೆ ಹೇಗೆ. ಮಾತನಾಡಲು ಏನಿದೆ, ಮಾತನಾಡುತ್ತೇನೆ ಬಿಡಿ ಎಂದಷ್ಟೇ ನಕ್ಕು ಸುಮ್ಮನಾದರು.

46
ಬೇರೆ ಏನನ್ನೂ ಹೇಳದ ಪ್ರದೂಷ್

ಪ್ರದೂಷ್ ಬೇರೆ ಯಾವ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ. ಮುಂದೇ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು. ಇನ್ನು, ಕೋರ್ಟ್ ಹೇಳಿಕೆ ದಾಖಲು ಮಾಡುವುದನ್ನು ಮುಂದೂಡಿಕೆ ಮಾಡಿರುವ ಕಾರಣ ಜೈಲು ಸಿಬ್ಬಂದಿ ಮತ್ತೆ ಪ್ರದೂಷ್‌ನನ್ನು ಜೈಲಿಗೆ ಕರೆದುಕೊಂಡು ಹೋದರು.

56
ರೇಣುಕಸ್ವಾಮಿ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್

ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಒಂದು ಪ್ರಮುಖ ಹಂತ ಎಂದು ಹೇಳಬಹುದು. ಈ ಕಾರಣದಿಂದಲೇ ದರ್ಶನ್ ಪರ ವಕೀಲರು ಈ ಸಂಬಂಧ ಹೈಕೋರ್ಟ್‌ಗೆ ಹೋಗಿದ್ದು, ಹೈಕೋರ್ಟ್ ಆದೇಶದ ಬಳಿಕ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಿಕೊಳ್ಳುವ ಸಾಧ್ಯತೆ ಇದೆ.

66
ದರ್ಶನ ಪರ ವಕೀಲರಿಂದ ಹೈಕೋರ್ಟ್‌ಗೆ ಅರ್ಜಿ

ಸೆಕ್ಷನ್ ಕೋರ್ಟ್ ಮಾಫಿ ಸಾಕ್ಷಿ ಹೇಳಿಕೆ ಪಡೆದುಕೊಳ್ಳುವುದು ಮಹತ್ವ ನಡೆಯಾಗಿದ್ದು, ಪ್ರದೂಪ್ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆಯಾ? ಮತ್ತು ಜೈಲಿನಲ್ಲಿ ನಡವಳಿಕೆ ಹೇಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿತ್ತು. ಈ ಅಂಶ ಮೇರೆಗೆ ಈಗ ದರ್ಶನ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ವಕೀಲರ ವಾದ ಕೇಳಿ ಆದೇಶವನ್ನು ಮುಂದೂಡಿಕೆ ಮಾಡಿತ್ತು. ಇದರಂತೆ ಈ ವಿಚಾರವನ್ನು ಎಸ್‌ಪಿಪಿ ಅವರು ಸೆಕ್ಷನ್ ಕೋರ್ಟ್ ಗಮನಕ್ಕೆ ತಂದು, ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಿಕೆ ಮಾಡಲು ಮನವಿ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories