ಬೆಂಗಳೂರು: ಭಾರತ ಟಿ20 ತಂಡದ ನೂತನ ನಾಯಕರಾಗಿ ಮುಂಬೈ ಮೂಲದ ಶ್ರೇಯಸ್ ಅಯ್ಯರ್ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನ್ನ ಆಟದ ಶೈಲಿಯನ್ನು ಬದಲಿಸಿಕೊಳ್ಳುವುದು ಇಲ್ಲ ಹಾಗೆಯೇ ಯಾರ ನೆರಳಿನಲ್ಲಿಯೂ ಇರಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಮುಂಬರುವ ಐರ್ಲೆಂಡ್ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಬಿಸಿಸಿಐ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ಗೆ ನಾಯಕ ಪಟ್ಟ ಕಟ್ಟಲಾಗಿದೆ. 2023ರ ಡಿಸೆಂಬರ್ ನಂತರ ಇದೇ ಮೊದಲ ಬಾರಿಗೆ ಶ್ರೇಯಸ್ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ.
26
ನಾಯಕರಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ
ಭಾರತ ಟಿ20 ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಒಂದು ಖಡಕ್ ಹೇಳಿಕೆ ನೀಡಿದ್ದಾರೆ. ಕ್ಯಾಪ್ಟನ್ಸಿ ಅನ್ನೋದು ದೊಡ್ಡ ಜವಾಬ್ದಾರಿ, ಆದರೆ ಅದಕ್ಕಾಗಿ ನನ್ನ ವ್ಯಕ್ತಿತ್ವ ಅಥವಾ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧನಿಲ್ಲ ಎಂದು ಮುಂಬೈ ಬ್ಯಾಟರ್ ಸ್ಪಷ್ಟಪಡಿಸಿದ್ದಾರೆ.
36
ಸವಾಲು ಎದುರಿಸೋದು ಅಂದ್ರೆ ಇಷ್ಟ
"ಚಿಕ್ಕ ವಯಸ್ಸಿನಿಂದಲೇ ನನಗೆ ಸವಾಲುಗಳನ್ನು ಎದುರಿಸುವುದು ಅಂದರೆ ಇಷ್ಟ. ಅದರಲ್ಲೂ ಮುಂಬೈ ಕ್ರಿಕೆಟ್ನ ಕಠಿಣ ಸ್ಪರ್ಧೆಯಿಂದ ಬಂದ ಮೇಲೆ ಅದು ಅಭ್ಯಾಸವಾಗಿಬಿಡುತ್ತೆ. ಮುಂಬೈನ ಬೀದಿಗಳಲ್ಲಿರುವ ಪ್ರತಿಯೊಬ್ಬ ಹುಡುಗನೂ ಕ್ರಿಕೆಟ್ನಲ್ಲಿ ಮುಂಬೈಯನ್ನು ಪ್ರತಿನಿಧಿಸಬೇಕು ಎಂದು ಬಯಸುತ್ತಾನೆ. ಹಾಗಾಗಿ, ನನ್ನ ವೃತ್ತಿಜೀವನದ ಎಲ್ಲಾ ಸವಾಲುಗಳನ್ನು ಗೆಲ್ಲಲೇಬೇಕು ಎನ್ನುವ ಮನಸ್ಥಿತಿ ನನ್ನದಾಗಿತ್ತು," ಎಂದು ಹೇಳಿದರು.
"ನಾಯಕನಾಗಿ ಈ ಹೊಸ ಜವಾಬ್ದಾರಿ ಒಂದು ದೊಡ್ಡ ಸವಾಲು. ಆದರೆ ಇದಕ್ಕಾಗಿ ನನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ನಾನು ಮೊದಲು ಹೇಗಿದ್ದೆನೋ, ಮುಂದೆಯೂ ಹಾಗೆಯೇ ಇರುತ್ತೇನೆ. ಬೇರೆಯವರಂತೆ ಆಗಲು ಅಥವಾ ಯಾರೊಬ್ಬರ ನೆರಳಿನ ಕೆಳಗೆ ನಿಲ್ಲಲು ನಾನು ಪ್ರಯತ್ನಿಸುವುದಿಲ್ಲ," ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ
56
ಚರ್ಚೆಗೆ ಗ್ರಾಸವಾದ ಶ್ರೇಯಸ್ ಅಯ್ಯರ್ ಮಾತು
ಇನ್ನು ಇದೇ ವೇಳೆ ಶ್ರೇಯಸ್ ಅಯ್ಯರ್ ನಾನು ಯಾರ ನೆರಳಲ್ಲೂ ಬದುಕಲು ಇಷ್ಟವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. 'ಬೇರೆಯವರ ನೆರಳಲ್ಲಿ ನಿಲ್ಲುವುದಿಲ್ಲ' ಎಂಬ ಶ್ರೇಯಸ್ ಹೇಳಿಕೆ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
66
ಗೌತಮ್ ಗಂಭೀರ್ ವಿರುದ್ಧ ಪರೋಕ್ಷ ಟೀಕೆ?
2024ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಕಪ್ ಗೆದ್ದಾಗ, ಅದರ ಸಂಪೂರ್ಣ ಕ್ರೆಡಿಟ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ಗೆ ಸಿಕ್ಕಿತ್ತು. ಇದರಿಂದ ಶ್ರೇಯಸ್ಗೆ ಅಸಮಾಧಾನವಿತ್ತು, ಇದೇ ಕಾರಣಕ್ಕೆ ಅವರು ಕೆಕೆಆರ್ ತೊರೆದು ಪಂಜಾಬ್ ಕಿಂಗ್ಸ್ಗೆ ಸೇರಿದ್ದಾರೆ ಎಂಬ ವರದಿಗಳೂ ಇದ್ದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.