Published : Oct 13, 2024, 02:55 PM ISTUpdated : Oct 13, 2024, 03:00 PM IST
ಭಾರತೀಯ ಕ್ರಿಕೆಟ್ ಆಟಗಾರರು ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಿದ ನಂತರ, ಅವರಿಗೆ ಅವರ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಇದೀಗ ವೇಗಿ ಸಿರಾಜ್ ತೆಲಂಗಾಣದ ಡಿಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಭಾರತೀಯ ಕ್ರಿಕೆಟ್ ಆಟಗಾರರು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕ್ರಿಕೆಟ್ ಜೀವನದ ಹೊರತಾಗಿ ವೃತ್ತಿ ಜೀವನ. ಯಾಕಂದ್ರೆ, ಕ್ರಿಕೆಟ್ನಲ್ಲಿ ಚೆನ್ನಾಗಿ ಆಡಿದ್ದಕ್ಕೆ ಅವರಿಗೆ ಅವರ ರಾಜ್ಯದಲ್ಲಿ ಸರ್ಕಾರಿ ಕೆಲಸ ಕೊಡ್ತಾರೆ. ಹಲವು ಪ್ರತಿಭಾವಂತ ಕ್ರಿಕೆಟಿಗರಿಗೆ ಸರ್ಕಾರ ಮೌಲ್ಯಯುತ ಹುದ್ದೆಗಳನ್ನು ನೀಡಿ ಗೌರವಿಸಿದೆ. ಅಂಥ ಸರ್ಕಾರಿ ಅಧಿಕಾರಿಗಳಾದ ಕ್ರಿಕೆಟಿಗರು ಯಾರ್ಯಾರು ಅಂತ ನೋಡೋಣ.
26
ಜೋಗಿಂದರ್ ಶರ್ಮಾ, ಉಪ ಪೊಲೀಸ್ ಅಧೀಕ್ಷಕರು, ಹರಿಯಾಣ
ಭಾರತ ಕ್ರಿಕೆಟ್ ತಂಡವನ್ನು ಸೇರಿದ ಬಹುತೇಕ ಆಟಗಾರರಿಗೆ ರಾಜ್ಯ ಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದ ಉದ್ಯೋಗ ದೊರೆಯುವುದನ್ನು ನಾವೆಲ್ಲರೂ ನೋಡಿದ್ದೇವೆ. ಕೆಲವರೂ ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಗಳಿಸಿಕೊಂಡರೆ, ಮತ್ತೆ ಕೆಲವರು ಬ್ಯಾಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಕೆಲವು ಆಟಗಾರರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಹಲವು ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ
36
ಜೋಗಿಂದರ್ ಶರ್ಮಾ, ಹರಿಯಾಣ ಪೊಲೀಸ್
ಜೋಗಿಂದರ್ ಶರ್ಮಾ: ಭಾರತ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲಲು ಮುಖ್ಯ ಕಾರಣ ಜೋಗಿಂದರ್ ಶರ್ಮಾ. 2007ರಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಫೈನಲ್ನಲ್ಲಿ ಕೊನೆಯ ಓವರ್ ಎಸೆದಿದ್ದು ಜೋಗಿಂದರ್ ಶರ್ಮಾ. ಕೊನೆಯಲ್ಲಿ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾದರು. ಇದರಿಂದ ಭಾರತ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. ಇದಲ್ಲದೆ, 24 ವರ್ಷಗಳ ನಂತರ ಭಾರತ ತಂಡ ಮೊದಲ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿತು. ಇದಕ್ಕೂ ಮೊದಲು 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು.
46
ಜೋಗಿಂದರ್ ಶರ್ಮಾ, ಹರಿಯಾಣ ಪೊಲೀಸ್
ಟಿ20 ವಿಶ್ವಕಪ್ನಲ್ಲಿ ಅವರ ಸಾಧನೆಗಾಗಿ ಹರಿಯಾಣ ಪೊಲೀಸ್ ಇಲಾಖೆ ಜೋಗಿಂದರ್ ಶರ್ಮಾ ಅವರನ್ನು ಗೌರವಿಸಿ ಉಪ ಪೊಲೀಸ್ ಅಧೀಕ್ಷಕ ಹುದ್ದೆ ನೀಡಿತು. ಈಗ ಉಪ ಪೊಲೀಸ್ ಅಧೀಕ್ಷಕರಾಗಿ ಕೆಲಸ ಮಾಡ್ತಿದ್ದಾರೆ.
56
ಹರ್ಭಜನ್ ಸಿಂಗ್, ಪಂಜಾಬ್ ಪೊಲೀಸ್
ಹರ್ಭಜನ್ ಸಿಂಗ್: ಭಾರತ ತಂಡದ ಉತ್ತಮ ಆಫ್ ಸ್ಪಿನ್ನರ್ಗಳಲ್ಲಿ ಒಬ್ಬರು ಹರ್ಭಜನ್ ಸಿಂಗ್. ಅನುಭವಿ ಆಫ್ಸ್ಪಿನ್ನರ್ ಭಜ್ಜಿ ಭಾರತ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿ 417 ವಿಕೆಟ್ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 236 ಪಂದ್ಯಗಳನ್ನು ಆಡಿ 269 ವಿಕೆಟ್ಗಳನ್ನು ಪಡೆದಿದ್ದಾರೆ. ಕೊನೆಯದಾಗಿ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಂತರ ಐಪಿಎಲ್ನಲ್ಲಿ ಆಡಿದರು. 2018ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಉತ್ತಮ ಕೊಡುಗೆ ನೀಡಿದರು. ಆ ಟೂರ್ನಿಯಲ್ಲಿ ಸಿಎಸ್ಕೆ ಟ್ರೋಫಿ ಗೆದ್ದಿತು. ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಪಂಜಾಬ್ನಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿ ಕೆಲಸ ಮಾಡ್ತಿದ್ದಾರೆ.
66
ಮೊಹಮ್ಮದ್ ಸಿರಾಜ್, ತೆಲಂಗಾಣ ಪೊಲೀಸ್
ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತೆಲಂಗಾಣದಲ್ಲಿ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಮುಂದೆ ಇದೀಗ ಅಧಿಕೃತವಾಗಿ ಉಪ ಪೊಲೀಸ್ ಅಧೀಕ್ಷಕರಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡರು. ಇಂದು ಅಧಿಕೃತವಾಗಿ ಖಾಕಿ ಧರಿಸಿ ಉಪ ಪೊಲೀಸ್ ಅಧೀಕ್ಷಕರಾಗಿ ಕೆಲಸ ಆರಂಭಿಸಿದರು. ಇದಕ್ಕೂ ಮೊದಲು ಉಪ ಪೊಲೀಸ್ ಅಧೀಕ್ಷಕರಾದ ಜೋಗಿಂದರ್ ಶರ್ಮಾ ಮತ್ತು ಹರ್ಭಜನ್ ಸಿಂಗ್ ಅವರ ಸಾಲಿಗೆ ಮೂರನೇ ಭಾರತೀಯ ಆಟಗಾರರಾಗಿ ಮೊಹಮ್ಮದ್ ಸಿರಾಜ್ ಉಪ ಪೊಲೀಸ್ ಅಧೀಕ್ಷಕರಾಗಿ ಸೇರಿದ್ದಾರೆ. ಮೊಹಮ್ಮದ್ ಸಿರಾಜ್ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್, ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ಶಿಪ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.