ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಐಪಿಎಲ್ ಫೈನಲ್ ವೇಳೆ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೆ ಹೇಳಿದ ಮಾತೊಂದು ಇದೀಗ ವೈರಲ್ ಆಗಿದೆ.
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್ಸಿಬಿ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಆರ್ಸಿಬಿ ಗೆಲುವಿನಲ್ಲಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. 19ನೇ ಸೀಸನ್ ಐಪಿಎಲ್ನಲ್ಲಿ ಕೊಹ್ಲಿ ಆರ್ಸಿಬಿ ಪರ 16 ಪಂದ್ಯಗಳನ್ನಾಡಿ 675 ರನ್ ಸಿಡಿಸಿದ್ದರು.
26
ಐಪಿಎಲ್ ಫೈನಲ್ ವೇಳೆ ಒತ್ತಡಕ್ಕೆ ಒಳಗಾಗಿದ್ದ ಆರ್ಸಿಬಿ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 155 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆರ್ಸಿಬಿ ತಂಡವು ಸ್ಪೋಟಕ ಆರಂಭ ಪಡೆಯಿತಾದರೂ, ಒಂದು ಹಂತದಲ್ಲಿ 29 ರನ್ಗಳ ಅಂತರದಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಆತಂಕ್ಕೆ ಒಳಗಾಗಿತ್ತು.
36
ಐಪಿಎಲ್ ಫೈನಲ್ ಟೈಮ್ ಔಟ್ ವೇಳೆ ಡಿಕೆಗೆ ಕೊಹ್ಲಿ ಹೇಳಿದ್ದೇನು?
ಈ ಸಂದರ್ಭದಲ್ಲಿ ಟೈಮ್ ಔಟ್ ತೆಗೆದುಕೊಂಡಾಗ ದಿನೇಶ್ ಕಾರ್ತಿಕ್ ಬಳಿ, ಉಳಿದ ಬ್ಯಾಟರ್ಗಳು ಅವರ ಪಾಡಿಗೆ ಅವರು ಬ್ಯಾಟ್ ಮಾಡಲು ಹೇಳಿ. ನಾನು ಕೊನೆಯವರೆಗೂ ನಾಟೌಟ್ ಆಗದೇ ಆಡುತ್ತೇನೆ. ಹೀಗಾಗಿ ಸಹ ಆಟಗಾರರು ತಮ್ಮ ಪಾಡಿಗೆ ತಾವು ನಿರ್ಭಯವಾಗಿ ಆಡಲು ಹೇಳಿ ಎಂದು ವಿರಾಟ್ ಕೊಹ್ಲಿ ಹೇಳಿದ್ದರು ಎಂದು ಆ ಘಟನೆಯನ್ನು ಡಿಕೆ ಮೆಲುಕು ಹಾಕಿದ್ದಾರೆ.
2026ರ ಐಪಿಎಲ್ ಫೈನಲ್ನಲ್ಲಿ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 75 ರನ್ ಸಿಡಿಸಿದರು. ಈ ಮೂಲಕ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಆರ್ಸಿಬಿ ತಂಡವನ್ನು ಅನಾಯಾಸವಾಗಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು.
56
ಕೆಕೆಆರ್ ಎದುರು ಆತ್ಮವಿಶ್ವಾಸ ತುಂಬಿದ್ದ ಕೊಹ್ಲಿ
ಇನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದ ವೇಳೆಯಲ್ಲಿಯೂ ಕೊಹ್ಲಿ ಹೀಗೆಯೇ ಹೇಳಿದ್ದರು ಎಂದು ಡಿಕೆ ಸ್ಮರಿಸಿಕೊಂಡಿದ್ದಾರೆ. ನಾವು ಟಾರ್ಗೆಟ್ ಬೆನ್ನತ್ತಿದ್ದೆವು, ಮೊದಲ ಟೈಮ್ ಔಟ್ ವೇಳೆ ವಿರಾಟ್ ಕೊಹ್ಲಿ ನನ್ನ ಬಳಿ, 'ಡೋಂಟ್ ವರಿ ಡಿಕೆ, ನಾನು ನನ್ನ ಕೆಲಸವನ್ನು ಮಾಡುತ್ತೇನೆ' ಎಂದು ಹೇಳಿದ್ದರು ಎಂದು ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
66
ಕೊಹ್ಲಿಯನ್ನು GOAT ಅನ್ನೋದೇಕೆ?
ಐಪಿಎಲ್ನಲ್ಲಿ ಕೊಹ್ಲಿ ಈ ರೀತಿಯ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತಿದ್ದರು. ಅವರ ಮೈಂಡ್ಸೆಟ್ ಹಾಗಿತ್ತು. ಇದಷ್ಟೇ ಅಲ್ಲದೇ ಅವರು ಏನು ಪ್ರಾಮೀಸ್ ಮಾಡುತ್ತಿದ್ದರೋ, ಅದನ್ನು ತಪ್ಪದೇ ಸಾಕಾರ ಮಾಡುತ್ತಿದ್ದರು. ಹೀಗಾಗಿಯೇ ಅವರನ್ನು GOAT ಅನ್ನೋದು ಎಂದು ಡಿಕೆ ಹೇಳಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಪರ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದರು. ಕಳೆದೆರಡು ಸೀಸನ್ನಲ್ಲಿ ಆರ್ಸಿಬಿ ಚಾಂಪಿಯನ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.