ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ ರಾಜಮೌಳಿ, ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿಲ್ಲ!

Published : Sep 19, 2024, 07:38 PM ISTUpdated : Sep 19, 2024, 07:39 PM IST

ಟಾಲಿವುಡ್‌ನಲ್ಲಿ ಟಾಪ್ ಸ್ಟಾರ್ಸ್‌ಗಳ ಜೊತೆ ಸಿನಿಮಾ ಮಾಡಿರುವ ರಾಜಮೌಳಿ, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡದಿರಲು ಕಾರಣವೇನು..? ಸಿನಿಮಾ ಮಾಡಲು ಪ್ರಯತ್ನವನ್ನೇ ಮಾಡಿಲ್ಲವೇ..?   

PREV
15
ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ ರಾಜಮೌಳಿ, ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿಲ್ಲ!

ಟಾಲಿವುಡ್ ಇಂಡಸ್ಟ್ರಿಯನ್ನೇ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ. ತೆಲುಗು ಸಿನಿಮಾಗೆ ಆಸ್ಕರ್ ಗೌರವ ತಂದುಕೊಟ್ಟ ನಿರ್ದೇಶಕ, ತೆಲುಗು ನಟರನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಂಬರ್ ಒನ್ ಆಗಿ ನಿಲ್ಲಿಸಿದ ನಿರ್ದೇಶಕ ರಾಜಮೌಳಿ. ಟಾಲಿವುಡ್‌ನಲ್ಲಿ ಬಹುತೇಕ ಎಲ್ಲಾ ಸ್ಟಾರ್‌ಗಳ ಜೊತೆ ಸಿನಿಮಾ ಮಾಡಿರುವ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡದಿರಲು ಕಾರಣವೇನು..? 

 

25

ರಾಜಮೌಳಿ ಜೊತೆ ಸಿನಿಮಾ ಮಾಡದ ಸ್ಟಾರ್ ನಟರೆಂದರೆ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಮಾತ್ರ ಬಾಕಿ ಇದ್ದಾರೆ. ಚಿರಂಜೀವಿ ಕೂಡ ಆರ್.ಆರ್.ಆರ್. ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡಲು ಹೋಗಿ ಆ ಬಳಿಕ ವರ್ಕೌಟ್ ಆಗದೆ ಆ ಪ್ರಾಜೆಕ್ಟ್ ನಿಂತು ಹೋಯಿತಂತೆ. ಇನ್ನು ರಾಜಮೌಳಿ ಸಿನಿಮಾ ಮಾಡದ ನಟರಲ್ಲಿ ಅಲ್ಲು ಅರ್ಜುನ್ ಪ್ರಮುಖರು. ಟಾಲಿವುಡ್‌ನಲ್ಲಿ ಅವರು ಎಷ್ಟು ದೊಡ್ಡ ಸ್ಟಾರ್ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಜಕ್ಕಣ್ಣ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ಪ್ರಯತ್ನವನ್ನೇ ಮಾಡಿಲ್ಲವೇ ಎಂಬ ಅನುಮಾನ ಎಲ್ಲರಿಗೂ ಇದೆ. ಆದರೆ ಬನ್ನಿ ಜೊತೆ ರಾಜಮೌಳಿ ಸಿನಿಮಾ ಮಾಡಲು ಪ್ರಯತ್ನ ಮಾಡಿದ್ದರಂತೆ. 

 

35

ರಾಜಮೌಳಿ, ಬಾಹುಬಲಿ ಬಳಿಕ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ಪ್ರಯತ್ನ ಮಾಡಿದ್ದರಂತೆ. ಆದರೆ ಅದು ವರ್ಕೌಟ್ ಆಗಲಿಲ್ಲ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲದೆ ಚಿತ್ರರಂಗದಲ್ಲಿ ಮತ್ತೊಂದು ಮಾತೇನೆಂದರೆ.. ತಮಿಳು ಸ್ಟಾರ್ ನಟ ಅಜಿತ್, ಅಲ್ಲು ಅರ್ಜುನ್ ಜೊತೆ ಸೇರಿ ಒಂದು ಮಲ್ಟಿ ಸ್ಟಾರರ್ ಮಾಡಲು ಪ್ಲ್ಯಾನ್ ಮಾಡಿದ್ದರಂತೆ. ಆದರೆ ಅದು ವರ್ಕೌಟ್ ಆಗದ ಕಾರಣ ಆರ್.ಆರ್.ಆರ್. ಸಿನಿಮಾ ಪ್ಲ್ಯಾನ್ ಮಾಡಿದರಂತೆ ಜಕ್ಕಣ್ಣ. ಆದರೆ ಆ ಬಳಿಕ ಕೂಡ ಬನ್ನಿ ಜೊತೆ ಸಿನಿಮಾ ಮಾಡಬೇಕೆಂದುಕೊಂಡಿದ್ದರಂತೆ ರಾಜಮೌಳಿ. ಆದರೆ ಏನೋ ಒಂದು ಕಾರಣದಿಂದ ಸಿನಿಮಾ ವರ್ಕೌಟ್ ಆಗಲಿಲ್ಲವಂತೆ. ಪ್ರಸ್ತುತ ತೆಲುಗು ಸಿನಿಮಾಗೆ ಪ್ಯಾನ್ ವರ್ಲ್ಡ್ ಗುರುತಿಸುವಂತೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಜಕ್ಕಣ್ಣ. ಅದಕ್ಕಾಗಿಯೇ ಅಮೆಜಾನ್ ಅಡ್ವೆಂಚರ್ ಸಿನಿಮಾ ಮಾಡಲು ಮುಂದಾಗಿದ್ದಾರೆ. 

45

ಮಹೇಶ್ ಬಾಬು ಜೊತೆ ಈ ಸಿನಿಮಾ ಯಶಸ್ವಿಯಾಗಿ ಮಾಡಲು ಸಾಧ್ಯವಾದರೆ ಟಾಲಿವುಡ್ ಹಾಲಿವುಡ್‌ನಲ್ಲಿ ಒಂದು ಭಾಗವಾಗುವ ಅವಕಾಶವಿದೆ. ಈಗಾಗಲೇ ಇಂಡಿಯನ್ ಸಿನಿಮಾ ಅಂದರೆ ಟಾಲಿವುಡ್ ಹೆಸರೇ ಕೇಳಿ ಬರುತ್ತಿದೆ. ಇನ್ನು ಹಾಲಿವುಡ್‌ನಲ್ಲಿ ಕೂಡ ತೆಲುಗು ಸಿನಿಮಾ ಇಂಡಿಯನ್ ಸಿನಿಮಾ ಗುರುತಿನೊಂದಿಗೆ ದೊಡ್ಡ ಸ್ಥಾನವನ್ನು ಪಡೆದುಕೊಳ್ಳುವ ಅವಕಾಶದ ಜೊತೆಗೆ ಪ್ರತಿ ವರ್ಷ ಆಸ್ಕರ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ದಾರಿ ಸಿಗುತ್ತದೆ. ಈ ಮೂಲಕ ಮುಂದೆ ಮಹೇಶ್ ಬಾಬು ಸಿನಿಮಾ ಆ ಸಾಧನೆ ಮಾಡುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಮಹೇಶ್ ಬಾಬು ಮಾತ್ರ ಇತ್ತೀಚೆಗೆ ಸಂಪೂರ್ಣ ವೇಷಭೂಷಣದೊಂದಿಗೆ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

 

55

ಅಲ್ಲು ಅರ್ಜುನ್ ಜೊತೆ ರಾಜಮೌಳಿ ಕಾಂಬಿನೇಷನ್ ಸಿನಿಮಾ ನೋಡಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪ 2 ಸಿನಿಮಾದ ಮೂಲಕ ಅಲ್ಲು ಅರ್ಜುನ್ ಭರ್ಜರಿ ಗೆಲುವು ಸಾಧಿಸಿದರೆ ಈ ಇಮೇಜ್‌ನೊಂದಿಗೆ ರಾಜಮೌಳಿ, ಅಲ್ಲು ಜೊತೆ ಬಿಗ್ ಬಜೆಟ್ ಸಿನಿಮಾ ಪ್ಲ್ಯಾನ್ ಮಾಡುವ ಅವಕಾಶವಿದೆ. ಆದರೆ ಅದು ಇಷ್ಟು ಬೇಗ ಆಗುವ ಸಾಧ್ಯತೆ ಕಾಣುತ್ತಿಲ್ಲ. ಕನಿಷ್ಠ ಐದು ವರ್ಷಗಳ ನಂತರವಾದರೂ ಈ ಕಾಂಬಿನೇಷನ್ ಸೇರಿದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. 

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories