ಬ್ಯುಸಿನೆಸ್‌ಗಾಗಿ ಸಿನಿಮಾ ತೊರೆದು, ಪಾರ್ಶ್ವವಾಯು ಪೀಡಿತರಾದ ರೋಜಾ ಸ್ಟಾರ್‌ ಅರವಿಂದ್ ಸ್ವಾಮಿ

First Published Jul 5, 2023, 5:31 PM IST

ಒಂದು ಕಾಲದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಉತ್ತರಾಧಿಕಾರಿ ಎಂದು ಕರೆಯಲ್ಪಟ್ಟ ಅರವಿಂದ್ ಸ್ವಾಮಿ ಅವರು 3300 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಲು ಚಲನಚಿತ್ರಗಳನ್ನು ತೊರೆದರು ಆದರೆ  ನಂತರ ಪಾರ್ಶ್ವವಾಯುವಿಗೆ ಒಳಗಾದರು ಮತ್ತು ದೀರ್ಘಕಾಲದ ವರೆಗೆ ಕಾಯಿಲೆಯ ವಿರುದ್ಧ ಹೋರಾಡಿದರು.

1991 ರಲ್ಲಿ, 20 ನೇ ವಯಸ್ಸಿನಲ್ಲಿ, ಅರವಿಂದ್ ಸ್ವಾಮಿ ಅವರು ಮಣಿರತ್ನಂ ಅವರ ಥಲಪತಿ ಮೂಲಕ ತಮ್ಮ ಚೊಚ್ಚಲ ಚಲನಚಿತ್ರ ಮಾಡಿದರು, ಅಲ್ಲಿ ಅವರು ಮಹಾಭಾರತದ ಅರ್ಜುನ್‌ನಿಂದ ಪ್ರೇರಿತ ಪಾತ್ರವನ್ನು ನಿರ್ವಹಿಸಿದರು. 

ಅದರ ನಂತರ ಅವರು ಮಣಿರತ್ನಂ ಅವರ 1992 ರಲ್ಲಿ ರೋಜಾ ಮತ್ತು 1995 ರಲ್ಲಿ ಬಾಂಬೆ ಅಂತಹ  ಎರಡು ಬೃಹತ್ ರಾಷ್ಟ್ರೀಯ ಹಿಟ್‌ಗಳಲ್ಲಿ ನಟಿಸಿದರು. ಈ ಚಲನಚಿತ್ರಗಳ ಯಶಸ್ಸು ಅವರನ್ನು ಸ್ಟಾರ್ ಆಗಿ ಸ್ಥಾಪಿಸಿತು. 

Latest Videos


1997 ರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಮಿನ್ಸಾರ ಕನವು ಕಾಜೋಲ್ ಜೊತೆಗೆ ನಟಿಸಿದಾಗ ಅವರ ಸ್ಟಾರ್‌ಡಮ್ ಮತ್ತು ನಟನಾ ಅರ್ಹತೆಗಳು ಮತ್ತಷ್ಟು  ಏರಿಕೆ ಕಂಡವು. ಮುಂದಿನ ವರ್ಷ, ಅವರು ಸಾತ್ ರಂಗ್ ಕೆ ಸಪ್ನೆಯಲ್ಲಿ ಜೂಹಿ ಚಾವ್ಲಾ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 

ಈ ಹೊತ್ತಿಗೆ, ಅರವಿಂದ್‌ ಸ್ವಾಮಿ ಅವರು ಅವರು ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಸಹಜ ಉತ್ತರಾಧಿಕಾರಿ, ತಮಿಳು ಚಿತ್ರರಂಗದಲ್ಲಿ ಮುಂದಿನ ದೊಡ್ಡ  ಸ್ಟಾರ್‌ ಎಂದು ಪರಿಗಣಿಸಲ್ಪಟ್ಟರು. ಆದರೆ ಹಾಗಾಗಲಿಲ್ಲ.

90 ರ ದಶಕದ ಅಂತ್ಯದ ವೇಳೆಗೆ, ಅವರ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಐಶ್ವರ್ಯ ರೈ ಎದುರು ಮಹೇಶ್ ಭಟ್ ಚಿತ್ರ ಮತ್ತು ಅಮಿತಾಬ್ ಬಚ್ಚನ್ ಜೊತೆ ಅನುಪಮ್ ಖೇರ್ ಅವರ ನಿರ್ದೇಶನದ ಚೊಚ್ಚಲ ಯೋಜನೆ ಸೇರಿದಂತೆ ನಾಯಕ ನಟನಾಗಿ ಅವರ ಒಂದೆರಡು ಚಿತ್ರಗಳನ್ನು ಕೈಬಿಡಲಾಯಿತು. 
 

ನಂತರ, ಅವರ ಎರಡು ಚಿತ್ರಗಳು ನಿರ್ಮಾಣದಲ್ಲಿ ವರ್ಷಗಳನ್ನು ಕಳೆದವು. ಅವರ ವೃತ್ತಿಜೀವನದಿಂದ ನಿರುತ್ಸಾಹಗೊಂಡ ಸ್ವಾಮಿ ಅವರು 2000 ರ ನಂತರ ಚಲನಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು. ಅವರು ತಮ್ಮ ತಂದೆಯ ವ್ಯಾಪಾರಗಳನ್ನು ನಿರ್ವಹಿಸುವುದರ ಮೇಲೆ ಕೇಂದ್ರೀಕರಿಸಿದರು, ವಿ ಡಿ ಸ್ವಾಮಿ ಮತ್ತು ಕಂಪನಿಯಲ್ಲಿ ಕೆಲಸ ಮಾಡಿದರು ಮತ್ತು ನಂತರ ಇಂಟರ್‌ಪ್ರೊ ಗ್ಲೋಬಲ್‌ನಲ್ಲಿ ಕೆಲಸ ಮಾಡಿದರು. 

2005 ರಲ್ಲಿ, ಅವರು ಅಪಘಾತಕ್ಕೊಳಗಾದರು, ಇದು ಅವರ ಕಾಲಿನ ಭಾಗಶಃ ಪಾರ್ಶ್ವವಾಯುವಿಗೆ ಕಾರಣವಾಯಿತು. ಚಿಕಿತ್ಸೆಯು ಸುಮಾರು 4-5 ವರ್ಷಗಳನ್ನು ತೆಗೆದುಕೊಂಡಿತು ಮತ್ತು ದೀರ್ಘಕಾಲ ಬಳಲಿದರು.

ಅವರು ಈಗಾಗಲೇ 2000 ರ ದಶಕದ ಆರಂಭದಲ್ಲಿ ಯಶಸ್ವಿ ಉದ್ಯಮಿಯಾಗಿದ್ದರೂ, 2005 ರಲ್ಲಿ, ಟ್ಯಾಲೆಂಟ್ ಮ್ಯಾಕ್ಸಿಮಸ್ ಅನ್ನು ಸ್ಥಾಪಿಸಿದರು.  ವರದಿಗಳ ಪ್ರಕಾರ, 2022 ರಲ್ಲಿ, ಟ್ಯಾಲೆಂಟ್ ಮ್ಯಾಕ್ಸಿಮಸ್‌ನ ಆದಾಯವು $418 ಮಿಲಿಯನ್ (ರೂ. 3300 ಕೋಟಿ) ಆಗಿತ್ತು. 

 2013 ರಲ್ಲಿ,  ವಿಶ್ರಾಂತಿಯ ಒಂದು ದಶಕದ ನಂತರ, ಸ್ವಾಮಿಯನ್ನು ಅವರ ಮಾರ್ಗದರ್ಶಕ ಮಣಿ ರತಂ ಅವರು ತಮ್ಮ ಪ್ರಾಜೆಕ್ಟ್ ಕಡಲ್‌ನೊಂದಿಗೆ ಚಲನಚಿತ್ರಗಳಿಗೆ ಮರಳಲು ಪ್ರೇರೇಪಿಸಿದರು. ಆದರೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ  ಅವರು ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ ಆದರು. 

2021 ರಲ್ಲಿ, ಅವರು ತಮಿಳು-ಹಿಂದಿ ದ್ವಿಭಾಷಾ ತಲೈವಿಯಲ್ಲಿ ಕಂಗನಾ ರಣಾವತ್ ಎದುರು ಎಂಜಿ ರಾಮಚಂದ್ರನ್ ಪಾತ್ರದಲ್ಲಿ ನಟಿಸುವ ಮೂಲಕ ಅವರು ಬಾಲಿವುಡ್‌ಗೆ ಪುನರಾಗಮನ ಮಾಡಿದರು ಜೊತೆಗೆ ಸ್ವಾಮಿ ಅವರು 2021 ರಲ್ಲಿ ನೆಟ್‌ಫ್ಲಿಕ್ಸ್ ಸಂಕಲನ ನವರಸ ಕಥೆಯೊಂದರಲ್ಲಿ ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡಿದರು.

click me!