ಆದರೆ ತನ್ನ ತುಂಟಾಟಕ್ಕೆ ಎಷ್ಟು ಕೋಪ ಮಾಡ್ತಿದ್ದರೋ, ಆ ನಂತರ ಅಷ್ಟೇ ಕೂಲ್ ಆಗ್ತಿದ್ದರಂತೆ. ಅವರ ಹೊಡೆತಕ್ಕೆ ಮದ್ದು ಹಚ್ಚುತ್ತಾ ಅಳುತ್ತಿದ್ದರಂತೆ. ತಾನು ಅಂದ್ರೆ ಅಮ್ಮನಿಗೆ ಪ್ರಾಣ ಅಂತ, ತಾನು ಎಲ್ಲಾದರೂ ಕೆಟ್ಟ ದಾರಿ ಹಿಡಿಯುತ್ತಾನೇನೋ ಅನ್ನೋ ಭಯದಿಂದ ಹಾಗೆ ಮಾಡ್ತಿದ್ದಳು ಅಂತ ಹೇಳಿದ್ದಾರೆ ಜ್ಯೂ.ಎನ್ಟಿಆರ್. ತನ್ನ ವಿಷಯದಲ್ಲಿ ಎಂದೂ ಸುಳ್ಳು ಹೇಳದೇ ನಿಜ ಜೀವನದಲ್ಲಿ ಹೇಗೆ ಬದುಕಬೇಕು ಅಂತ ಅಮ್ಮನೇ ಕಲಿಸಿದ್ದಾರೆ. ತನಗೆ ಅಮ್ಮನೇ ಮೊದಲ ಗುರು ಅಂತ ಹೇಳಿದ್ದಾರೆ.
'ಜೀವನದಲ್ಲಿ ಏನಾದರೂ ಒಂದು ಮಾಡು, ಸಾಧಿಸು, ಇಲ್ಲ ಅಂದ್ರೆ ಬದುಕು ಕಷ್ಟ' ಅಂತ ಹೇಳ್ತಿದ್ದರಂತೆ. ಅಮ್ಮ ತನಗೆ ಅಮ್ಮ ಮಾತ್ರ ಅಲ್ಲ ಅಂತ, ತನ್ನ ಶಕ್ತಿ, ಧೈರ್ಯ ಎಲ್ಲವೂ ಅವಳೇ ಅಂತ ಭಾವುಕವಾಗಿ ಹೇಳಿದ್ದಾರೆ.