ನಾಗಾರ್ಜುನ ಅವರನ್ನು ಡಿಸ್ಟರ್ಬ್ ಮಾಡಿದವರು ಬೇರೆ ಯಾರೂ ಅಲ್ಲ, ಒಂದು ಕಾಲದ ಸ್ಟಾರ್ ನಟಿ ಶ್ರಿಯಾ ಶರಣ್. ಈಗ ಅವರು ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. ಆದರೆ ಶೂಟಿಂಗ್ಗಳಿಗೆ ತಡವಾಗಿ ಬರುತ್ತಿದ್ದರಂತೆ. ಅನೇಕ ಬಾರಿ ಅವರಿಗಾಗಿ ಕಾಯಬೇಕಾಗಿ ಬಂದಿತ್ತಂತೆ. ನಾಗಾರ್ಜುನ್ ಸ್ವತಃ ಈ ವಿಷಯವನ್ನು ತಿಳಿಸಿದ್ದಾರೆ.
ಜಯಪ್ರದ ನಿರೂಪಣೆ ಮಾಡಿದ್ದ `ಜಯಪ್ರದಂ` ಟಾಕ್ ಶೋನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು ವಿಶೇಷ. ಇದರಲ್ಲಿ ಜಯಪ್ರದ ನಟಿಯರ ಬಗ್ಗೆ ಪ್ರಶ್ನೆ ಕೇಳಿದರು. ಚೆನ್ನಾಗಿ ಮಾತನಾಡುವ ನಟಿ ಯಾರು ಎಂದು ಕೇಳಿದಾಗ, ರಮ್ಯಕೃಷ್ಣ ಹೆಸರು ಹೇಳಿದರು. ಅವರು ಮಾತುಗಾರರು, ತಮ್ಮ ಜೊತೆ ನಟಿಸಿದ ನಟಿ ಆಗಿರುವುದರಿಂದ ಆ ಫ್ರೀನೆಸ್ನಿಂದ ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ ಎಂದರು ನಾಗಾರ್ಜುನ್.