ಚಿಕ್ಕಂದಿನಲ್ಲಿ ಮಗನಿಗೆ ಆ ವಿಷಯಕ್ಕೆ ಬ್ರೇಕ್ ಹಾಕಿದ್ರಂತೆ ಮೆಗಾಸ್ಟಾರ್ ಚಿರು: ಆದರೆ ರಾಮ್‌ ಚರಣ್‌ ಮಾಡಿದ್ದೇನು?

Published : Sep 12, 2024, 07:49 PM IST

ಮಗ ರಾಮ್ ಚರಣ್‌ಗೆ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಕಂಡಿಷನ್ ಹಾಕಿದ್ರಂತೆ ಅಪ್ಪ ಚಿರಂಜೀವಿ. ಮನೆಯಲ್ಲಿ ಅದಕ್ಕೆ ಅವಕಾಶವೇ ಇಲ್ಲವಂತೆ. ಆದರೂ ರಾಮ್‌ ಚರಣ್ ಆ ಕಂಡಿಷನ್‌ಗೆ ಬ್ರೇಕ್ ಹಾಕಿದರು.

PREV
15
ಚಿಕ್ಕಂದಿನಲ್ಲಿ ಮಗನಿಗೆ ಆ ವಿಷಯಕ್ಕೆ ಬ್ರೇಕ್ ಹಾಕಿದ್ರಂತೆ ಮೆಗಾಸ್ಟಾರ್ ಚಿರು: ಆದರೆ ರಾಮ್‌ ಚರಣ್‌ ಮಾಡಿದ್ದೇನು?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಪ್ರಸ್ತುತ ಗ್ಲೋಬಲ್ ಸ್ಟಾರ್ ಇಮೇಜ್ ಅನ್ನು ಪಡೆಯಲು ಶ್ರಮಿಸುತ್ತಿದ್ದು, ಈಗಾಗಲೇ ಅಭಿಮಾನಿಗಳು ಅವರನ್ನು ಗ್ಲೋಬಲ್ ಸ್ಟಾರ್ ಎಂದು ಕರೆಯುತ್ತಿದ್ದಾರೆ. ಆರ್‌ಆರ್‌ಆರ್‌ ಚಿತ್ರದ ಮೂಲಕ ರಾಮ್ ಚರಣ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು.ಆಸ್ಕರ್ ಪ್ರಚಾರದ ಭಾಗವಾಗಿ ಅವರು ಅಂತಾರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡಿ ಅವರ ಕ್ರೇಜ್ ಅನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಗವಹಿಸುವ ಮೂಲಕ ಅವರು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

25

ರಾಮ್ ಚರಣ್ ಚಿಕ್ಕವಯಸ್ಸಿನಿಂದಲೂ ಐಷಾರಾಮಿ ಜೀವನ ನಡೆಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾಗಿ ಆ ಐಷಾರಾಮಿ ಜೀವನ ಸಿಗುತ್ತಿದೆ. ಜೊತೆಗೆ ಅವರ ಅವಶ್ಯಕತೆಗಳು ಮತ್ತು ಐಷಾರಾಮಿ ನಿರ್ವಹಣೆಗೆ ಯಾವುದೇ ಮಿತಿಗಳಿಲ್ಲ. ಆದರೆ ಚಿಕ್ಕವಯಸ್ಸಿನಿಂದಲೂ ಕೆಲವು ವಿಷಯಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿದ್ದಾರಂತೆ ಚಿರಂಜೀವಿ. ಅವುಗಳ ಹತ್ತಿರವೂ ಹೋಗಬಾರದಂತೆ. ಇಡೀ ಕುಟುಂಬವು ಈ ವಿಷಯವನ್ನು ಪಾಲಿಸಬೇಕು, ಜೊತೆಗೆ ರಾಮ್ ಚರಣ್ ಅವರನ್ನು ನಿಯಂತ್ರಿಸಬೇಕು. ಅಷ್ಟೇ ಅಲ್ಲ, ಮನೆಯಲ್ಲಿಯೂ ಅವು ಇಲ್ಲದೆ ಮಾಡಿದ್ದರು ಚಿರು.
 

35

ಹಾಗಾದರೆ ರಾಮ್ ಚರಣ್‌ಗೆ ಚಿರಂಜೀವಿ ಹಾಕಿದ ಕಂಡಿಷನ್ ಏನೆಂದರೆ.. ಯಾವುದೇ ಕಾರಣಕ್ಕೂ ಬೈಕ್ ಓಡಿಸಬಾರದು ಎಂದು ಚಿರಂಜೀವಿ ಕಟ್ಟುನಿಟ್ಟಾಗಿ ರಾಮ್‌ ಚರಣ್‌ಗೆ ಹೇಳಿದ್ದಾರಂತೆ. ಇಡೀ ಕುಟುಂಬದಲ್ಲಿ ಎಲ್ಲರಿಗೂ ಈ ಕಂಡಿಷನ್ ಹಾಕಲಾಗಿತ್ತು. ಅಷ್ಟೇ ಅಲ್ಲ, ಮನೆಯಲ್ಲಿ ಬೈಕ್‌ಗಳೂ ಇರಲಿಲ್ಲವಂತೆ. ಹೀಗಾಗಿ ರಾಮ್ ಚರಣ್‌ಗೆ ಕಾಲು ಕಟ್ಟಿ ಕೂರಿಸಿದ ಪರಿಸ್ಥಿತಿ. ಸ್ನೇಹಿತರೆಲ್ಲರೂ ಬೈಕ್‌ಗಳಲ್ಲಿ ಸುತ್ತಾಡಲು ಹೋಗುತ್ತಿದ್ದರೆ ರಾಮ್ ಚರಣ್ ಮಾತ್ರ ಮನೆಯಲ್ಲಿಯೇ ಇರಬೇಕಾಗಿತ್ತಂತೆ. ಆದರೆ ಹೊರಗೆ ಹೋದರೆ ಕಾರನ್ನು ತೆಗೆದುಕೊಂಡು ಹೋಗುವ ಸೌಲಭ್ಯವಿತ್ತು. ಆದರೆ ಬೈಕ್‌ನಲ್ಲಿ ಹೋಗುವ ಖುಷಿ ಕಾರು ನೀಡುವುದಿಲ್ಲ. ಅದಕ್ಕಾಗಿ ರಾಮ್ ಚರಣ್ ಸುಮ್ಮನಿರದೇ ಕಂಡಿಷನ್‌ಗಳನ್ನು ಮುರಿದಿದ್ದರಂತೆ.
 

45

ಮನೆಯಲ್ಲಿ ಬೈಕ್‌ಗಳು ಇಲ್ಲದ ಕಾರಣ ಸ್ನೇಹಿತರ ಬಳಿ ಹೋದಾಗ ಅವರ  ಬೈಕ್‌ಗಳನ್ನು ಮನೆಯಲ್ಲಿ ಯಾರಿಗೂ ತಿಳಿಯದಂತೆ ತೆಗೆದುಕೊಂಡು ಓಡಿಸುತ್ತಿದ್ದೆ ಎಂದು ರಾಮ್‌ಚರಣ್ ತಿಳಿಸಿದ್ದಾರೆ. ಹೌದು! ಈ ವಿಷಯವನ್ನು ಇತ್ತೀಚೆಗೆ ಅವರು ಬಹಿರಂಗಪಡಿಸಿದ್ದಾರೆ. ಜೊತೆಗೆ ಈವರೆಗೆ ನನ್ನ ಬಳಿ ಸ್ವಂತ ಬೈಕ್ ಇಲ್ಲ, ಜೊತೆಗೆ ಈಗ ಹೀರೋ ಬೈಕ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿರುವುದು ತುಂಬಾ ಸಂತೋಷವಾಗಿದೆ ಎಂದು ಹೊಸ ಬೈಕ್ ಲಾಂಚ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆ ಸಖತ್ ವೈರಲ್ ಆಗುತ್ತಿವೆ. 

55

ರಾಮ್ ಚರಣ್ ಆರ್‌ಆರ್‌ಆರ್‌ ನಂತರ ಆಚಾರ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿರಂಜೀವಿ ನಾಯಕರಾಗಿ ನಟಿಸಿದ್ದ ಈ ಚಿತ್ರ ಫ್ಲಾಫ್ ಆಯಿತು. ಸದ್ಯ ರಾಮ್ ಅವರು `ಗೇಮ್ ಚೇಂಜರ್` ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣದ ಹಂತದಲ್ಲಿದ್ದು, ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀಕಾಂತ್, ಎಸ್ ಜೆ ಸೂರ್ಯ, ಅಂಜಲಿ, ಸುನಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಜಕೀಯ ಥ್ರಿಲ್ಲರ್ ಆಗಿ ಈ ಚಿತ್ರ ನಿರ್ಮಾಣವಾಗುತ್ತಿದೆ. ದಿಲ್ ರಾಜು ಸುಮಾರು 350 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಶೇಷ. 
 

Read more Photos on
click me!

Recommended Stories