ಮಗ ನಾಗಚೈತನ್ಯ ಮೇಲೆ ಕೋಪಗೊಂಡ ಲಕ್ಷ್ಮೀ ದಗ್ಗುಬಾಟಿ: ಸಮಂತಾ ಜೊತೆಗಿನ ಡಿವೋರ್ಸ್ ಕಾರಣಾನಾ?

Published : Aug 24, 2024, 07:10 PM IST

ನಾಗ ಚೈತನ್ಯ - ಸಮಂತಾ ವಿಚ್ಛೇದನೆ ಪಡೆದು ಬೇರೆಯಾದ ನಂತರ, ಚೈತನ್ಯ ಅವರ ಮೇಲೆ ತಾಯಿ ಲಕ್ಷ್ಮಿಗೆ ಸ್ವಲ್ಪವೂ ಒಲವಿಲ್ಲದಂತಾಗಿದೆ. ಮಾಜಿ ಸೊಸೆ ಮೇಲೆ ಯಾವುದೇ ತಪ್ಪಿಲ್ಲ ಎಂದು ಅರಿತುಕೊಂಡ ಲಕ್ಷ್ಮಿ, ಇದೀಗ ಮಗನ ಮೇಲೆ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.  

PREV
17
ಮಗ ನಾಗಚೈತನ್ಯ ಮೇಲೆ ಕೋಪಗೊಂಡ ಲಕ್ಷ್ಮೀ ದಗ್ಗುಬಾಟಿ: ಸಮಂತಾ ಜೊತೆಗಿನ ಡಿವೋರ್ಸ್ ಕಾರಣಾನಾ?

ನಾಗಾರ್ಜುನ ಮತ್ತು ಅವರ ಮೊದಲ ಪತ್ನಿ ಲಕ್ಷ್ಮೀ ದಗ್ಗುಬಾಟಿ ಅವರ ಮಗ ನಾಗ ಚೈತನ್ಯ. ಈ ಹಿಂದೆ 2017ರಲ್ಲಿ ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

27

ನಾಗ ಚೈತನ್ಯ ಇದೀಗ ಅವರ ಪ್ರೇಯಸಿ ಶೋಭಿತಾ ಧುಲಿಪಾಲ ಜೊತೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಆಗಸ್ಟ್ 8 ರಂದು ನಾಗಾರ್ಜುನ ಅವರ ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೇರಿತು. ಇದನ್ನು ನಾಗಾರ್ಜುನ ಖಚಿತಪಡಿಸಿದ್ದರು.


 

37

ಇವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗಿದೆ. ಇದರಲ್ಲಿ ನಾಗಾರ್ಜುನ, ಅಮಲಾ, ಅಖಿಲ್ ಮತ್ತು ಧುಲಿಪಾಲ ಕುಟುಂಬದವರ ಫೋಟೋಗಳು ಇದ್ದರೂ, ಮಗನ ನಿಶ್ಚಿತಾರ್ಥದಲ್ಲಿಲಕ್ಷ್ಮೀ ದಗ್ಗುಬಾಟಿ ಮತ್ತು ಅವರ ಕುಟುಂಬದ ಯಾರೂ ಭಾಗವಹಿಸಿಲ್ಲ ಎನ್ನಲಾಗಿದೆ.

47

ಲಕ್ಷ್ಮೀ ದಗ್ಗುಬಾಟಿ ನಾಗಾರ್ಜುನ ಅವರನ್ನು ತೆರೆದ ನಂತರ ಅಮೆರಿಕದಲ್ಲಿ ನೆಲೆಸಿದರು. ಜೊತೆಗೆ ಎರಡನೇ ಮದುವೆಯನ್ನೂ ಮಾಡಿಕೊಂಡರು. ಪದವಿ ಮುಗಿಯುವವರೆಗೂ ಚೈತನ್ಯ ತಾಯಿಯೊಂದಿಗೆ ಇದ್ದರು. ನಂತರ ನಟನೆಯಲ್ಲಿ ಆಸಕ್ತಿ ತೋರಿಸಿದ ನಂತರ ನಾಗಾರ್ಜುನರೊಂದಿಗೆ ಬಂದು ಸೇರಿಕೊಂಡರು. ಅಮಲಾ ಯಾವುದೇ ತಾರತಮ್ಯ ಮಾಡದೆ ನಾಗ ಚೈತನ್ಯ ಅವರನ್ನೂ ತನ್ನ ಮಗನಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.


 

57

ಈ ನಡುವೆ ಮಗನ ನಿಶ್ಚಿತಾರ್ಥಕ್ಕೆ ತಾಯಿ ಲಕ್ಷ್ಮಿ ಬಾರದಿರಲು ಬಲವಾದ ಕಾರಣವಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಸಮಂತಾ ಜೊತೆ ನಾಗ ಚೈತನ್ಯ ಬೇರೆಯಾಗಿದ್ದನ್ನು ಲಕ್ಷ್ಮೀ ದಗ್ಗುಬಾಟಿ ನಿಜಕ್ಕೂ ಇಷ್ಟಪಡಲಿಲ್ಲ ಮತ್ತು ಸಮಂತಾಳನ್ನು ತನ್ನ ಸೊಸೆಯಾಗಿ ಸ್ವೀಕರಿಸಿದಂತೆ ಶೋಭಿತಾಳನ್ನು ಸ್ವೀಕರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.  

67

ಅದೇ ರೀತಿ ವಿಚ್ಛೇದನ ಪ್ರಕರಣದಲ್ಲಿ ಸಮಂತಾ ತಪ್ಪೇನೂ ಇಲ್ಲ, ಇದರಲ್ಲಿ ನಾಗ ಚೈತನ್ಯದೇ ತಪ್ಪಿದೆ ಎಂದು ಲಕ್ಷ್ಮಿ ಭಾವಿಸುತ್ತಾರೆ. ಸಮಂತಾ ಪರ ನಿರಂತರವಾಗಿ ಲಕ್ಷ್ಮೀ ದಗ್ಗುಬಾಟಿ ಇರುವುದರಿಂದ ಮಗ ನಾಗ ಚೈತನ್ಯ ಜೊತೆ ಮಾತನಾಡುತ್ತಿಲ್ಲ ಎನ್ನಲಾಗುತ್ತಿದೆ. ಅವರ ಮೇಲೆ ತೀವ್ರ ಸಿಟ್ಟಿನಲ್ಲಿದ್ದಾರೆ ಎನ್ನಲಾಗಿದೆ.


 

77

ಸಮಂತಾ ಮಯೋಸಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾಗ ಸಮಂತಾಳನ್ನು ಲಕ್ಷ್ಮೀ ದಗ್ಗುಬಾಟಿ ಅವರೇ ಕಾಳಜಿಯಿಂದ ವಿಚಾರಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಮಂತಾ ಮೇಲಿನ ಪ್ರೀತಿಯಿಂದಲೋ ಅಥವಾ ನಾಗ ಚೈತನ್ಯ ಮೇಲಿನ ಕೋಪದಿಂದಲೋ ಲಕ್ಷ್ಮೀ ದಗ್ಗುಬಾಟಿ ಚೈತನ್ಯ - ಶೋಭಿತಾ ಮದುವೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories