ಹಸಿರು ಸೀರೆಯಲ್ಲಿ ಮಲ್ಲಿಗೆ ಮುಡಿದು ಟ್ರೆಡಿಷನಲ್‌ ಲುಕ್‌ನಲ್ಲಿ ದೇವಸ್ಥಾನಕ್ಕೆ ಹೋದ ಕಂಗನಾ!

First Published Dec 29, 2020, 6:00 PM IST

ಬಾಲಿವುಡ್‌ನ ಕ್ವೀನ್‌  ಕಂಗನಾ ರಣಾವತ್‌ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡದ ಫೋಟೋಗಳು ಇಂಟರ್‌‌ನೆಟ್‌ನಲ್ಲಿ ಹರಿದಾಡುತ್ತಿವೆ. ಕಂಗನಾ ಮಂಗಳವಾರ ಮುಂಜಾನೆ ಸಿದ್ಧಿ ವಿನಾಯಕನ ದರ್ಶನ ಪಡೆಯಲು ತೆರೆಳಿದ್ದರು. ನಟಿಯ ಸುತ್ತ ಬಿಗಿ ಭದ್ರತೆ ಇತ್ತು. ಈ ಸಂದರ್ಭದಲ್ಲಿ ಹಸಿರು ಬಣ್ಣಕ್ಕೆ ಗೋಲ್ಡನ್‌ ಬಾರ್ಡರ್‌ ಇರುವ ಸೀರೆಯನ್ನು ಧರಿಸಿದ್ದ ಕಂಗನಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.   

ಸೋಮವಾರ ಮುಂಬೈಗೆ ಆಗಮಿಸಿದ ಕಂಗನಾ ಮಂಗಳವಾರ ನಗರದ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು
undefined
ಈಸಂಧರ್ಭದಲ್ಲಿ ತೆಗೆದನಟಿಯಫೋಟೋಗಳು ಸಖತ್‌ ವೈರಲ್‌ ಆಗಿದೆ.
undefined
ಮೀಡಿಯಾ ಫೋಟೋಗ್ರಾಫರ್ಸ್‌ನೋಡಿದ ತಕ್ಷಣ ಕಂಗನಾ ಕೈ ಬೀಸಿ ವಿಶ್‌ ಮಾಡಿದರು.
undefined
ದೇವರ ದರ್ಶನ ಪಡೆದು ಹೊರ ಬರುವಾಗ ಕೇಸರ ಶಾಲು ಬೇರೆ ಹೊದ್ದಿದ್ದರು ಕಂಗನಾ. ಅಬ್ಬಾ, ಪಕ್ಕಾ ರಾಜಕಾರಣಿಯ ಲುಕ್‌ನಲ್ಲಿ ಕಂಗೊಳಿಸುತ್ತಿದ್ದರು.
undefined
ದೇವಾಲಯಕ್ಕೆ ಭೇಟಿ ನೀಡದಾಗ ಕಂಗನಾ ಜೊತೆ ತಂಗಿ ರಂಗೋಲಿ ಹಾಗೂ ಅವರ ಸೋದರ ಮತ್ತು ಪತ್ನಿ ಇದ್ದರು. ಅತ್ತಿಗೆ ರಿತು ಕೂಡ ಹಸಿರು ಸೀರೆ ಧರಿಸಿದ್ದರು.
undefined
ಸಿದ್ಧಿ ವಿನಾಯಕ ದರ್ಶನ ಪಡೆದ ರಣಾವತ್‌ ತುಂಬಾ ಸಂತೋಷವಾಗಿ ಕಂಡಬಂದರು.
undefined
ನಂತರ ನಟಿ ಮಾಸ್ಕ್‌ ಧರಿಸಿದರು.
undefined
ಇತ್ತೀಚೆಗೆ, ಕಂಗನಾರ ಸಹೋದರಿ ಮತ್ತು ಆಳಿಯ ಪೃಥ್ವಿ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
undefined
ಇದಕ್ಕೂ ಮೊದಲು ಶಿವಸೇನೆಯೊಂದಿಗಿನ ವಿವಾದದಿಂದಾಗಿ ಸೆಪ್ಟೆಂಬರ್ 9 ರಂದು ಮುಂಬೈಗೆ ಬಂದಿದ್ದರು. ಅಕ್ರಮ ಕಟ್ನಿಟ ನಿರ್ಮಾಣದ ಅರೋಪದ ಮೇಲೆ ಶಿವಸೇನೆ ನಟಿಯ ಮುಂಬೈನ ಕಚೇರಿಯನ್ನು ಒಡೆದಿತ್ತು. ಅದರ ನಂತರ ಕಂಗನಾ ಸೆಪ್ಟೆಂಬರ್ 14 ರಂದು ಮನಾಲಿಗೆ ಮರಳಿದ್ದರು.
undefined
ಬಹಳ ಸಮಯದಿಂದ ಕಂಗನಾ ಮನಾಲಿಯ ತನ್ನ ಮನೆಯಲ್ಲಿದ್ದರು. ಅದಕ್ಕೂ ಮೊದಲು ಅವರು ತಲೈವಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಬರುವ ವರ್ಷದಲ್ಲಿ ಕಂಗನಾರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ
undefined
ಇತ್ತೀಚೆಗೆ, ಕಂಗನಾ ಸೋಷಿಯಲ್ ಮೀಡಿಯಾದಲ್ಲಿ 2021 ರ ಜನವರಿಯಲ್ಲಿ ತನ್ನ ಮುಂದಿನ ಸಿನಿಮಾ ಧಕಾಡ್ ಶೂಟಿಂಗ್‌ನಲ್ಲಿ ತೊಡಗುವುದಾಗಿ ತಿಳಿಸಿದ್ದರು. ಈ ಚಿತ್ರದಲ್ಲಿ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ಇವುಗಳಲ್ಲದೆ, ಅವರು ತೇಜಸ್ ಮೇ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ಭಾರತೀಯ ವಾಯುಪಡೆಯ ಪಾತ್ರದಲ್ಲಿ ಮಾಡುತ್ತಿದ್ದಾರೆ.
undefined
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವಇವರು. ಇತ್ತೀಚೆಗೆಹಿಮಪಾತವನ್ನು ಆನಂದಿಸುವ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೊದ ಬ್ಯಾಕ್‌ಗ್ರೌಂಡ್‌ನಲ್ಲಿ ಕಂಗಾನರ ಸುಂದರ ಕವಿತೆ 'ರಾಖ್‌' (ಬೂದಿ) ಕೇಳಿಸುತ್ತದೆ.
undefined
'ನನ್ನ ಚಿತಾಭಸ್ಮವನ್ನು ಗಂಗೆಯಲ್ಲಿ ಎಸೆಯಬೇಡಿ. ಪ್ರತಿಯೊಂದು ನದಿಯೂ ಸಮುದ್ರದ ಜೊತೆಗೆ ಹೋಗುತ್ತದೆ. ನಾನು ಸಮುದ್ರದ ಆಳಕ್ಕೆ ಹೆದರುತ್ತೇನೆ. ನಾನು ಆಕಾಶವನ್ನು ಸ್ಪರ್ಶಿಸಲು ಬಯಸುತ್ತೇನೆ. ನನ್ನ ಚಿತಾಭಸ್ಮವನ್ನು ಪರ್ವತಗಳ ಮೇಲೆ ಹರಡಿ. ಸೂರ್ಯ ಉದಯಿಸಿದಾಗ ನಾನು ಅವನನ್ನು ಸ್ಪರ್ಶಿಸಬಹುದು' - ಕಂಗನಾರ ಕವಿತೆ.
undefined
click me!