ಶಾರುಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ್ದರಂತೆ ನಯನತಾರಾ!

First Published Jul 27, 2020, 3:40 PM IST

ಶಾರುಖ್‌ ಖಾನ್‌ ಬಾಲಿವುಡ್‌ನ ಸೂಪರ್‌ ಸ್ಟಾರ್‌. ಕಿಂಗ್‌ ಖಾನ್‌ ಎಂದೇ ಕರೆಯಲ್ಪಡುವ ಶಾರುಖ್‌ ಜೊತೆ ನಟಿಸಲು ನಟಿಯರು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗೆ ನಯನತಾರಾ ದಕ್ಷಿಣದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಮತ್ತು ಅವರನ್ನು ಲೇಡಿ ಸೂಪರ್‌ಸ್ಟಾರ್‌ ಎಂದೂ ಕರೆಯಲಾಗುತ್ತದೆ. ಆದರೆ ನಯನತಾರ ಒಮ್ಮೆ ಖಾನ್‌ ಜೊತೆ ನಟಿಸಲು ನೋ ಅಂದಿದ್ದರಂತೆ. ಏಕೆ?  

ನಯನತಾರಾ ದಕ್ಷಿಣದ ಅಗ್ರ ನಟಿಗಳಲ್ಲಿ ಒಬ್ಬರು ಎಂದು ನಮಗೆಲ್ಲರಿಗೂ ತಿಳಿದಿದೆ. ಇತ್ತೀಚೆಗೆ, ಅವರು ಕಾತು ವಾಕುಲಾ ರೆಂಡು ಕಡಲ್‌ ಸಿನಿಮಾಕ್ಕೆ ಸೈನ್‌ ಮಾಡಿದರು.
undefined
ವಿಜಯ್ ಸೇತುಪತಿ ಮತ್ತು ಸಮಂತಾ ಅಕ್ಕಿನೇನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಯನತಾರಾ ಅವರ ಬಾಯ್‌ ಫ್ರೆಂಡ್‌ ವಿಘ್ನೇಶ್ ಶಿವನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
undefined
ನಯನತಾರಾ ಅಪರೂಪದ ಮಹಿಳಾ ನಟಿ, ಆಕೆಯ ಬ್ಯೂಟಿಫುಲ್‌ ಲುಕ್‌, ಅತ್ಯುತ್ತಮ ನಟನಾ ಕೌಶಲ್ಯ ಮತ್ತು ಜನರನ್ನು ಸೆಳೆಯುವ ಅನನ್ಯ ಕಾಂಬೊ ಹೊಂದಿದ್ದಾರೆ ಎಂಬುದು ಚಲನಚಿತ್ರ ಪ್ರೇಕ್ಷಕರ ಅಭಿಪ್ರಾಯ.
undefined
ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ನಟಿಸಲು ಅವರನ್ನುಒಮ್ಮೆ ಸಂಪರ್ಕಿಸಲಾಗಿತ್ತಂತೆ.
undefined
ದೀಪಿಕಾ ಪಡುಕೋಣೆಯ ಪಾತ್ರಕ್ಕಾಗಿ ಅಲ್ಲ. ಅದು ‘ಒನ್ ಟೂ ಥ್ರೀ ಫೋರ್' ಐಟಂ ಸಾಂಗ್‌ಗಾಗಿ. ನಂತರ ಅದನ್ನು ದಕ್ಷಿಣದ ಮತ್ತೊಬ್ಬ ನಟಿ ಪ್ರಿಯಮಣಿ ಒಪ್ಪಿಕೊಂಡರು.
undefined
ನಯನಾ ಈ ಆಫರ್‌ ನಯವಾಗಿ ತಿರಸ್ಕರಿಸಿದ್ದರು. ಅದರ ಹಿಂದಿನ ಕಾರಣವನ್ನು ಮಾತ್ರ ಬಹಿರಂಗಪಡಿಸಿಲ್ಲ.
undefined
ನಂತರ, ಚೆನ್ನೈ ಎಕ್ಸ್ ಪ್ರೆಸ್ ಚಲನಚಿತ್ರವು ಬ್ಲಾಕ್ ಬಸ್ಟರ್ ಆಗಿ ಮಾರ್ಪಟ್ಟಿತು. ಇದು ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಈ ಸಿನಿಮಾ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ.
undefined
ಅಷ್ಟೇ ಅಲ್ಲ, ಪ್ರಿಯಾಮಣಿ ಉತ್ತರ ಭಾರತದಲ್ಲಿ ಕೂಡ ಫೇಮಸ್‌ ಆದರು.
undefined
ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸತ್ಯರಾಜ್, ನಿಕಿಟಿನ್ ಧೀರ್ ಮತ್ತು ಕಾಮಿನಿ ಕೌಶಲ್ ಅವರಂತಹ ದಕ್ಷಿಣದ ಅನೇಕ ನಟರು ಪ್ರಮುಖ ಪಾತ್ರಗಳಲ್ಲಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರವು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ರೂ ಸಂಪಾದಿಸಿತು.
undefined
ಶಾರುಖ್‌ ಕಳೆದ ಸುಮಾರು ಒಂದುವರೆ ವರ್ಷಗಳಿಂದ ಯಾವುದೇ ಸಿನಿಮಾ ಮಾಡಿಲ್ಲ. ಅವರ ಕೊನೆ ಚಿತ್ರ ಜೀರೋ ಆಗಿತ್ತು.
undefined
click me!