ತೆಂಗಿನೆಣ್ಣೆಗೆ ಮರುಳಾದ ಯಾಮಿ; ಮಾನಸಿಕವಾಗಿ ಗಟ್ಟಿಯಾದ್ರೆ ಗೆಲ್ತೀರಿ!

First Published Sep 10, 2020, 1:21 PM IST

ಓಟಿಟಿಯಲ್ಲಿ ತನ್ನ ಹೊಸ ಸಿನಿಮಾ ರಿಲೀಸ್‌ ಮಾಡೋ ಅರ್ಜೆಂಟ್‌ನಲ್ಲೇ, ಯಾಮಿ ಗೌತಮ್‌ ‘ಆರೋಗ್ಯವೇ ಭಾಗ್ಯ’ ಮಂತ್ರ ಜಪಿಸ್ತಿದ್ದಾರೆ. ಕಾರಣ ಕಳೆದ ವರ್ಷ ಈಕೆಯನ್ನು ಕಾಡಿಸಿದ್ದ ಡೆಂಗ್ಯೂ.

ಡೆಂಗ್ಯೂಯಿಂದ ಯಾಮಿಗೆ ರೋಗ ನಿರೋಧಕತೆ ಕಡಿಮೆ ಆಗಿದೆ.
undefined
ಈಗ ಕೋವಿಡ್‌ ಹಬ್ಬುತ್ತಿರೋ ಕಾಲದಲ್ಲಿ ಇಮ್ಯುನಿಟಿ ಹೆಚ್ಚಿಸಿಕೊಳ್ಳಲೇ ಬೇಕಾದ ತುರ್ತಿಗೆ ಬಿದ್ದಿದ್ದಾರೆ.
undefined
ಮನೆಯಲ್ಲಿ ಟೈಮ್‌ ಇದ್ದಾಗಲೆಲ್ಲ ಸ್ವತಃ ಆರೋಗ್ಯಕರ ಅಡುಗೆ ಮಾಡಿ ತಿನ್ನೋ ಅಭ್ಯಾಸ ಮಾಡ್ತಿದ್ದಾರೆ. ಜೊತೆಗೆ ಸ್ವತಃ ತೆಂಗಿನೆಣ್ಣೆ ತಯಾರಿಸುತ್ತಾರೆ, ಇದು ಯಾಮಿ ಚರ್ಮವನ್ನು ಬಹಳ ಆದ್ರ್ರವಾಗಿಟ್ಟಿದೆ.
undefined
ತೆಂಗಿನೆಣ್ಣೆ ಇಮ್ಯುನಿಟಿ ಹೆಚ್ಚಿಸಿಕೊಳ್ಳಲೂ ಉತ್ತಮ ಅನ್ನೋದನ್ನು ಈ ನಟಿ ಕಂಡುಕೊಂಡಿದ್ದಾರೆ.
undefined
ಯಾಮಿ ಇನ್ನೊಂದು ಮುಖ್ಯ ವಿಷಯವನ್ನು ವೆಬ್‌ ಸೈಟ್‌ ಒಂದರಲ್ಲಿ ಹೇಳಿದ್ದಾರೆ - ಆರೋಗ್ಯ ಅಂದಕೂಡಲೇ ದೈಹಿಕ ಆರೋಗ್ಯವನ್ನಷ್ಟೇ ನೋಡುತ್ತೇವೆ. ಇದಕ್ಕಿಂತಲೂ ದೊಡ್ಡದು ಮಾನಸಿಕ ಆರೋಗ್ಯ.
undefined
ನಿಮ್ಮ ದೈಹಿಕತೆ ಎಷ್ಟೇ ದೃಢವಾಗಿದ್ದರೂ ಮಾನಸಿಕವಾಗಿ, ಭಾವನಾತ್ಮಕವಾಗಿ ವೀಕ್‌ ಇದ್ರೆ ಇಂಥಾ ಟೈಮ್‌ನಲ್ಲಿ ಒದ್ದಾಟವೇ ಹೆಚ್ಚು.
undefined
ಹೀಗಾಗಿ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ.
undefined
ನಾನಂತೂ ನಿತ್ಯ ಯೋಗ, ಪ್ರಾಣಾಯಾಮ ಮಾಡ್ತೀನಿ, ಎಲ್ಲರೂ ಇದನ್ನು ಪ್ರಯತ್ನಿಸಿ. ಕೋವಿಡ್‌ ನಿಂದ ಶೀಘ್ರವಾಗಿ ಹೊರಬರೋಣ ಎಂದಿದ್ದಾರೆ.
undefined
click me!