ಪವನ್ ಕಲ್ಯಾಣ್ ಫ್ಲಾಪ್ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ ನಂದಮೂರಿ ಬಾಲಕೃಷ್ಣ!

Published : Nov 01, 2024, 01:36 PM ISTUpdated : Nov 01, 2024, 01:58 PM IST

ನಂದಮೂರಿ ಬಾಲಕೃಷ್ಣ ಅವರ ವೃತ್ತಿ ಜೀವನ ಈಗ ಉತ್ತುಂಗದಲ್ಲಿದೆ. ಸಿನಿಮಾ, ಟಿವಿ ಮತ್ತು ರಾಜಕೀಯ ಎಲ್ಲದರಲ್ಲೂ ಯಶಸ್ಸು ಕಾಣುತ್ತಿದ್ದಾರೆ. ಆದರೆ, ಇದೀಗ ಪವನ್ ಕಲ್ಯಾಣ್ ಅವರು ಆಂಧ್ರದ ಡಿಸಿಎಂ ಆಗುತ್ತಿದ್ದಂತೆ ಪ್ಲಾಫ್ ಸಿನಿಮಾದ ಬಗ್ಗೆ ಬಾಲಕೃಷ್ಣ ಕಾಮೆಂಟ್ ಮಾಡಿದ್ದಾರೆ.

PREV
15
ಪವನ್ ಕಲ್ಯಾಣ್ ಫ್ಲಾಪ್ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ ನಂದಮೂರಿ ಬಾಲಕೃಷ್ಣ!

ನಂದಮೂರಿ ಬಾಲಕೃಷ್ಣ ಈಗ ಫುಲ್ ಫಾರ್ಮ್‌ನಲ್ಲಿದ್ದಾರೆ. ಸಿನಿಮಾಗಳಲ್ಲಿ ಹ್ಯಾಟ್ರಿಕ್ ಹಿಟ್, ಟಿವಿಯಲ್ಲಿ 'ಅನ್‌ಸ್ಟಾಪಬಲ್' ಶೋನೊಂದಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಅದರೊಂದಿಗೆ ರಾಜಕೀಯದಲ್ಲೂ ಬ್ಯುಸಿ ಆಗಿದ್ದಾರೆ. ಆದರೆ, ಇದೀಗ ಪವನ್ ಕಲ್ಯಾಣ್ ಅವರು ಆಂಧ್ರದ ಡಿಸಿಎಂ ಆಗುತ್ತಿದ್ದಂತೆ ಪ್ಲಾಫ್ ಸಿನಿಮಾದ ಬಗ್ಗೆ ಬಾಲಕೃಷ್ಣ ಕಾಮೆಂಟ್ ಮಾಡಿದ್ದಾರೆ.

25

ಬಾಲಕೃಷ್ಣ ಈಗ NBK109 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಅನ್‌ಸ್ಟಾಪಬಲ್' ಸೀಸನ್ 4 ಕೂಡ ಶುರುವಾಗಿದೆ. ಮೊದಲ ಎಪಿಸೋಡ್‌ಗೆ ಚಂದ್ರಬಾಬು ಬಂದಿದ್ದರು. ಈಗ ಲಕ್ಕಿ ಭಾಸ್ಕರ್ ಚಿತ್ರತಂಡ ಬಂದಿತ್ತು. ಹೀಗಾಗಿ, ಬಾಲಕೃಷ್ಣ ಅವರು ಬಹುಬೇಡಿಕೆ ನಟರಾಗಿದ್ದಾರೆ.

35
ಬಾಲಕೃಷ್ಣ

ಹಾರಿಕಾ ಮತ್ತು ಹಾಸಿನಿ ಸಂಸ್ಥೆಯ ಚಿನ್ನಬಾಬು, ನಾಗವಂಶಿ ಅವರ ಮಾವ ಈ ಬಾಲಕೃಷ್ಣ. ಇಬ್ಬರೂ ಸೇರಿ ಸಿತಾರ ಎಂಟರ್‌ಟೈನ್‌ಮೆಂಟ್ಸ್ ಶುರು ಮಾಡಿದ್ದರು. ನಾಗವಂಶಿ ಎರಡೂ ಸಂಸ್ಥೆಗಳನ್ನೂ ನೋಡಿಕೊಳ್ಳುತ್ತಾರೆ. 'ಅನ್‌ಸ್ಟಾಪಬಲ್' ಶೋನಲ್ಲಿ ನಾಗವಂಶಿ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೇಳಿದ್ದರು.

45

2018ರಲ್ಲಿ ನಾವು ದೊಡ್ಡ ಸಿನಿಮಾ ಮಾಡಿದ್ದೆವು. ಆದರೆ, ಅದು ಸೂಪರ್ ಫ್ಲಾಪ್ ಆಯ್ತು. ಏನು ಮಾಡೋದು, ಎಲ್ಲಿಗೆ ಹೋಗೋದು ಅಂತ ಗೊತ್ತಾಗ್ಲಿಲ್ಲ. ತ್ರಿವಿಕ್ರಮ್ ಆಮೇಲೆ ಎರಡು ಸೂಪರ್ ಹಿಟ್ ಸಿನಿಮಾ ಕೊಟ್ಟರು. ಆ ಫ್ಲಾಪ್ ಸಿನಿಮಾ ಯಾವುದು ಅಂತ ನಾಗವಂಶಿ ಹೇಳ್ತಿರೋವಾಗಲೇ, ಬಾಲಕೃಷ್ಣ 'ಅಜ್ಞಾತವಾಸಿ' ಎಂದು ಹೇಳಿಬಿಟ್ಟರು. ಹಾರಿಕಾ ಮತ್ತು ಹಾಸಿನಿಗೆ ಅಜ್ಞಾತವಾಸಿ ದೊಡ್ಡ ಡಿಜಾಸ್ಟರ್ (ಪ್ಲಾಫ್ ಸಿನಿಮಾ). ಆಮೇಲೆ ಅವರು 'ಅರವಿಂದ ಸಮೇತ', 'ಅಲ ವೈಕುಂಠಪುರಂಲೋ' ಹಿಟ್ ಸಿನಿಮಾಗಳನ್ನು ಕೊಟ್ಟರು.

55

ಬಾಲಕೃಷ್ಣಗೆ 'ಅಜ್ಞಾತವಾಸಿ' ಚೆನ್ನಾಗಿ ನೆನಪಿದೆ. ಯಾಕಂದ್ರೆ, 'ಅಜ್ಞಾತವಾಸಿ' ರಿಲೀಸ್ ಆದ ಎರಡು ದಿನಕ್ಕೆ ಬಾಲಕೃಷ್ಣ 'ಜೈ ಸಿಂಹ' ರಿಲೀಸ್ ಆಗಿತ್ತು. 'ಅಜ್ಞಾತವಾಸಿ' ಫ್ಲಾಪ್ ಆದ್ದರಿಂದ 'ಜೈ ಸಿಂಹ'ಗೆ ಒಳ್ಳೆಯದಾಯ್ತು ಎಂದು ಹೇಳಿದರು. 'ಜೈ ಸಿಂಹ'ಗೆ ಒಳ್ಳೆಯ ಟಾಕ್ ಬರಲಿಲ್ಲ. ಆದ್ರೆ 'ಅಜ್ಞಾತವಾಸಿ'ಗಿಂತ ಚೆನ್ನಾಗಿತ್ತು ಅಂತ ಜನ ಹೇಳಿದ್ರು. ಸಂಕ್ರಾಂತಿ ಹಬ್ಬ ಇದ್ದಿದ್ದರಿಂದ, 'ಅಜ್ಞಾತವಾಸಿ' ಫ್ಲಾಪ್ ಆದ್ಮೇಲೆ ಜನ 'ಜೈ ಸಿಂಹ' ನೋಡೋಕೆ ಹೋದ್ರು. ಹೀಗಾಗಿ 'ಜೈ ಸಿಂಹ' ಸೇಫ್ ಆಯ್ತು.

Read more Photos on
click me!

Recommended Stories