ಸಿನಿಮಾ ಚಾನ್ಸ್ ಬೇಕಾದರೆ ಮಂಚಕ್ಕೆ ಬರುವಂತೆ ಕರೆದ ನಟ, ನಿರ್ದೇಶಕ; ಆ್ಯಂಕರ್ ಅನಸೂಯ!

Published : Feb 02, 2025, 07:18 PM ISTUpdated : Feb 03, 2025, 10:22 AM IST

ತೆಲುಗು ಚಿತ್ರರಂಗದ ಮತ್ತು ಕಿರುತೆರೆ ಆ್ಯಂಕರ್ ಆಗಿ ಹೆಸರು ಮಾಡಿದ್ದ ಅನಸೂಯ ಈಗ ಪೂರ್ಣ ಪ್ರಮಾಣದ ನಟಿ. ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಆದರೆ, ಇದೀಗ ಚಿತ್ರರಂಗದಲ್ಲಿ ನಡೆದ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

PREV
15
ಸಿನಿಮಾ ಚಾನ್ಸ್ ಬೇಕಾದರೆ ಮಂಚಕ್ಕೆ ಬರುವಂತೆ ಕರೆದ ನಟ, ನಿರ್ದೇಶಕ; ಆ್ಯಂಕರ್ ಅನಸೂಯ!
ಅನಸೂಯ ಭರದ್ವಾಜ್

ತೆಲುಗು ಚಿತ್ರರಂಗದ ಮತ್ತು ಕಿರುತೆರೆ ಆ್ಯಂಕರ್ ಆಗಿ ಹೆಸರು ಮಾಡಿದ್ದ ಅನಸೂಯ ಈಗ ಪೂರ್ಣ ಪ್ರಮಾಣದ ನಟಿ. ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಆದರೆ, ಇದೀಗ ಚಿತ್ರರಂಗದಲ್ಲಿ ನಡೆದ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕ್ಷಣಂ, ರಂಗಸ್ಥಳಂ, ಪುಷ್ಪ ಸಿನಿಮಾಗಳು ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಪುಷ್ಪ 2 ಅವರ ಕೊನೆಯ ಸಿನಿಮಾ.

25

ಇತ್ತೀಚಿನ ಸಂದರ್ಶನದಲ್ಲಿ ಅನಸೂಯ ತಮ್ಮ ಅನಿಸಿಕೆ, ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಟಾಲಿವುಡ್‌ನಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಅವರ ಮಾತುಗಳು ಸಂಚಲನ ಮೂಡಿಸಿವೆ. ಹೊಸಬರಿಗೆ ಸಲಹೆ ನೀಡಿದ್ದಾರೆ. ತಮಗಾದ ಕ್ಯಾಸ್ಟಿಂಗ್ ಕೌಚ್ ಅನುಭವ ಹಂಚಿಕೊಂಡಿದ್ದಾರೆ.

35

ಹುಡುಗಿಯರನ್ನು ದುರ್ಬಳಕೆ ಮಾಡಿಕೊಳ್ಳಲು ನಿರ್ಮಾಪಕರು, ನಟರು ಹಲವು ರೀತಿ ಪ್ರಯತ್ನಿಸುತ್ತಾರೆ. ನನ್ನನ್ನೂ ಒಬ್ಬ ಸ್ಟಾರ್ ನಟ ಕೇಳಿದ್ದರು. ನಾನು ಒಪ್ಪಲಿಲ್ಲ. ಸ್ಟಾರ್ ನಿರ್ದೇಶಕರೊಬ್ಬರೂ ಪ್ರಯತ್ನಿಸಿದ್ದರು. ನಾನು ತಿರಸ್ಕರಿಸಿದೆ. ಹಲವು ಅವಕಾಶಗಳು ಕೈತಪ್ಪಿವೆ.

45

ಹುಡುಗಿಯರು 'ಇಲ್ಲ' ಎನ್ನಬೇಕು, ಸಮಸ್ಯೆ ಎದುರಿಸುವ ಧೈರ್ಯ ಇರಬೇಕು. ಇಂಥ ಪ್ರಸ್ತಾಪಗಳು ಬಂದಿವೆ. ಆದರೆ, ಪ್ರತಿಭೆ ನೋಡಿ ಅವಕಾಶ ನೀಡಬೇಕು. ಕ್ಯಾರೆಕ್ಟರ್ ಚೆನ್ನಾಗಿದೆ ಅಂತ ಅವಕಾಶ ಕೊಡಬೇಕು ಅನ್ನಿಸಬೇಕು.

55

ಕೆಲವು ಹುಡುಗಿಯರು ಸುಲಭ ದಾರಿ ಹಿಡಿಯುತ್ತಾರೆ. ಬೇರೆಯವರು ಮಾಡ್ತಾರೆ ಅಂತ ನೀನೂ ತಪ್ಪು ಮಾಡಬಾರದು. ಕಷ್ಟ, ಪ್ರತಿಭೆ ನಂಬಬೇಕು ಎಂದು ಹೊಸಬರಿಗೆ ಅನಸೂಯ ಸಲಹೆ ನೀಡಿದ್ದಾರೆ. ಅವರ ನಿಜವಾದ ವ್ಯಕ್ತಿತ್ವ ಇದು ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories