ಆರ್ಥಿಕ ಬಿಕ್ಕಟ್ಟು: ತಂದೆಗೆ ನೆರವಾಗಲು ಕಾಲೇಜು ಬಿಟ್ಟ ಅಭಿಷೇಕ್ ಬಚ್ಚನ್!

First Published Apr 22, 2021, 5:47 PM IST

90ರ ದಶಕದ ಆರಂಭದಲ್ಲಿ, ಅಮಿತಾಬ್ ಬಚ್ಚನ್ ತುಂಬಾ ಕಷ್ಟದಲ್ಲಿದ್ದರು. ಬಿಗ್‌ ಬಿ ಅರ್ಥಿಕ ಸಂಕಷ್ಷದಲ್ಲಿದ್ದರು. ಆ ಸಮಯದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ತಂದೆಯನ್ನು ಬೆಂಬಲಿಸಲು ಕಾಲೇಜು ತೊರೆದರು. ಈ ವಿಷಯವನ್ನು ಸ್ವತಃ ಅಭಿಷೇಕ್‌ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ. 

ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ಜೊತೆಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಕುಟುಂಬದ ಕಷ್ಟದ ಸಮಯದ ಬಗ್ಗೆ ಮಾತಾನಾಡಿದ್ದಾರೆ.
undefined
90ರ ದಶಕದಲ್ಲಿ, ಬಚ್ಚನ್ ಕುಟುಂಬವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತು. ಆ ಸಮಯದಲ್ಲಿ ಅಮಿತಾಬ್ ಬಚ್ಚನ್ ಅವರ ಕಂಪನಿಯ ಎಬಿಸಿಎಲ್ ಭಾರಿ ನಷ್ಟಅನುಭವಿಸುತ್ತಿತ್ತು.
undefined
ಕಾಲೇಜಿನಲ್ಲಿದ್ದ ಅಭಿಷೇಕ್ ಬಿಕ್ಕಟ್ಟಿನ ಸಂದರ್ಭದಲ್ಲಿ ತಂದೆಗೆ ಸಹಾಯ ಮಾಡಲು ಯೂನಿವರ್ಸಿಟಿಯ ಬಿಡಬೇಕಾಯಿತು.
undefined
ಆ ಸಮಯದಲ್ಲಿ ಅಭಿಷೇಕ್ ತಮ್ಮ ತಂದೆಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವಷ್ಟು ಸಮರ್ಪಕ ಅಥವಾ ಅರ್ಹರಲ್ಲದಿದ್ದರೂತನ್ನ ತಂದೆಯ ಜೊತೆ ಇರಬೇಕೆಂದು ಭಾವಿಸಿದರು ಎಂದು ಹೇಳಿಕೊಂಡಿದ್ದಾರೆ ಜ್ಯೂನಿಯರ್‌ ಬಚ್ಚನ್.‌
undefined
'ನಾನು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೆ. ಲಿಬರಲ್ಆರ್ಟ್ಸ್‌ ನಂತರ ಪರ್ಫಾಮಿಂಗ್‌ ಆರ್ಟ್ಸ್‌ನಲ್ಲಿಮೇಜರ್ ಮಾಡಿದ ನಾನು ನನ್ನ ಶಿಕ್ಷಣವನ್ನು ತೊರೆದಿದ್ದೇನೆ. ಏಕೆಂದರೆ ನನ್ನ ತಂದೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರು. ಅವರು ಎಬಿಸಿಎಲ್ ಎಂಬ ಬ್ಯುಸಿನೆಸ್‌ ಪ್ರಾರಂಭಿಸಿ, ಕೈ ಸುಟ್ಟುಕೊಂಡಿದ್ದರು,' ಎಂದು ಅಭಿಷೇಕ್ ಹೇಳಿದರು.
undefined
'ನಾನು ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಅರ್ಹನಾಗಿರಲಿಲ್ಲ. ಆದರೆ ಮಗನಾಗಿತಂದೆಯ ಜೊತೆ ಇರಬೇಕು ಎಂದು ಓದುವುದ ನಿಲ್ಲಿಸಿ ಬಂದೆ.ನಾನು ಅವರಿ ಕಂಪನಿಯ ವ್ಯವಹಾರದಲ್ಲಿಸಹಾಯ ಮಾಡಲು ಪ್ರಾರಂಭಿಸಿದೆ 'ಎಂದ ಅಭಿಷೇಕ್.‌
undefined
'ನನಗೆ ಕೆಲಸವಿಲ್ಲ, ಯಾರೂ ನನಗೆ ಕೆಲಸ ನೀಡುತ್ತಿಲ್ಲ, ನನ್ನ ಸಿನಿಮಾಗಳು ನೆಡೆಯುತ್ತಿಲ್ಲ ಮತ್ತು ದಯವಿಟ್ಟು ಕೆಲಸ ಮಾಡಲು ನನಗೆ ಸಿನಿಮಾ ನೀಡಿ ಎಂದು ಕೇಳಲು ಬಂದಿದ್ದೇನೆ,ಎಂದು ಬಿಗ್‌ ಬಿ ಚೋಪ್ರಾ ಅವರಿಗೆ ಕೇಳಿಕೊಂಡಿದ್ದರು' ಎಂಬ ವಿಷಯವನ್ನು ಅಭಿಷೇಕ್‌ ಬಹಿರಂಗ ಪಡಿಸಿದ್ದರು.
undefined
ಅಮಿತಾಬ್‌ಗೆ ಶಾರುಖ್ ಖಾನ್ ಅವರ ಮೊಹಬ್ಬಾತೆನ್‌ ಸಿನಿಮಾ ನೀಡಲಾಯಿತು. ಕೌನ್ ಬನೇಗಾ ಕರೋಡ್‌ಪತಿ ಹೋಸ್ಟ್‌ ಆಗಿ ಟಿವಿಗೆ ಪಾದಾರ್ಪಣೆ ಮಾಡಿದರು. ಆದರ ನಂತರ ಉಳಿದಿದ್ದು ಇತಿಹಾಸ.
undefined
click me!