ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರುಗಳು ಒಂದೇ ದಿನದಲ್ಲಿ ಶೇ. 13 ರಷ್ಟು ಏರಿಕೆ ಕಂಡಿವೆ. ಎನ್. ಚಂದ್ರಶೇಖರನ್ ಅವರ ಮರು ನೇಮಕಾತಿ ಸುದ್ದಿ ಮತ್ತು ಕಂಪನಿಯ ಡಿಸೆಂಬರ್ ತ್ರೈಮಾಸಿಕದಲ್ಲಿನ ಶೇ. 284.45 ರಷ್ಟು ಲಾಭದ ಹೆಚ್ಚಳವು ಈ ಜಿಗಿತಕ್ಕೆ ಪ್ರಮುಖ ಕಾರಣಗಳಾಗಿವೆ.
ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರುಗಳು ಗುರುವಾರ ಮಾರುಕಟ್ಟೆಯಲ್ಲಿ ಶೇ. 13 ರಷ್ಟು ಏರಿಕೆ ಕಂಡಿವೆ. ಇದು ಒಂದು ದಿನದ ಗರಿಷ್ಠ ಮಟ್ಟವಾಗಿದೆ. ಈ ಷೇರು ರೂ. 727.40 ತಲುಪಿದೆ. ಗುರುವಾರ ಮಾರುಕಟ್ಟೆಯಲ್ಲಿ ಹೂಡಿಕೆದಾರರ 7 ಲಕ್ಷ ಕೋಟಿ ರೂಪಾಯಿ ತೊಳೆದು ಹೋದರೂ, ಈ ಕಂಪನಿಯ ಒಂದೇ ಒಂದು ಸುದ್ದಿ ಮಾರುಕಟ್ಟೆಗೆ ಬಂದ ತಕ್ಷಣ ಷೇರುಗಳು ಜಿಗಿದವು. ಈ ಸುದ್ದಿ ಈ ಷೇರುಗಳಲ್ಲಿ ದೊಡ್ಡ ಜಿಗಿತಕ್ಕೆ ಕಾರಣವಾಯಿತು.
26
ಟಾಟಾ ಸನ್ಸ್ ಶೀಘ್ರದಲ್ಲೇ ತನ್ನ ನಿರ್ದೇಶಕರ ಮಂಡಳಿಯ ವಿಶೇಷ ಸಭೆಯನ್ನು ಕರೆಯಲು ಸಜ್ಜಾಗಿದೆ. ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮರು ನೇಮಕ ಮಾಡಬಹುದು ಅನ್ನೋ ಸುದ್ದಿ ವ್ಯಾಪಕವಾಗಿದೆ. 2ನೇ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಅದಕ್ಕೂ ಮುನ್ನವೇ ಅವರನ್ನು ಮೂರನೇ ಬಾರಿಗೆ ಅದೇ ಹುದ್ದೆಯಲ್ಲಿ ಮುಂದುವರಿಸುವುದು ಖಚಿತವಾಗಿದೆ.
36
ಎನ್. ಚಂದ್ರಶೇಖರನ್ ಅವರ ಮರು ನೇಮಕಾತಿ ಆಗುವ ಸುದ್ದಿಯಿಂದ ಹೂಡಿಕೆದಾರರಲ್ಲಿ ಸಂಭ್ರಮ ಮನೆ ಮಾಡಿದೆ. ಷೇರುಪೇಟೆ ಶೇ. 13 ರಷ್ಟು ಏರಿಕೆಯಾಗಿ ಒಂದೇ ದಿನದ ಗರಿಷ್ಠ ಮಟ್ಟವಾದ 727.40 ರೂಪಾಯಿ ತಲುಪಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಹೂಡಿಕೆದಾರರು ಮತ್ತು ಟ್ರೇಡರ್ಗಳು ಈ ಷೇರಿನ ಮೇಲೆ ಕಣ್ಣಿಡುವ ಸಾಧ್ಯತೆ ಇದೆ.
ಅದಲ್ಲದೆ, ಡಿಸೆಂಬರ್ 2025 ರ ತ್ರೈಮಾಸಿಕ ಫಲಿತಾಂಶಗಳು ಹೂಡಿಕೆದಾರರಿಗೆ ಸಂತೋಷ ತಂದಿವೆ. ಕಂಪನಿಯ ಒಟ್ಟು ಲಾಭವು ಶೇಕಡಾ 284.45 ರಷ್ಟು ಹೆಚ್ಚಾಗಿದೆ. ವಾರ್ಷಿಕ ಆಧಾರದ ಮೇಲೆ, ಕಂಪನಿಯ ಲಾಭವು 19.61 ಕೋಟಿ ರೂ.ಗಳಿಂದ 75.39 ಕೋಟಿ ರೂ.ಗಳಿಗೆ ಏರಿದೆ. ಆದಾಯದಲ್ಲಿಯೂ ದೊಡ್ಡ ಏರಿಕೆ ಕಂಡುಬಂದಿದೆ. ಆದಾಯವು ಶೇಕಡಾ 1,461 ರಷ್ಟು ಹೆಚ್ಚಾಗಿ 57.92 ಕೋಟಿ ರೂ.ಗಳಿಗೆ ತಲುಪಿದೆ.
56
ಹಾಗಾಗಿ ಈಗ ಹೂಡಿಕೆದಾರರು ಟಾಟಾ ಕ್ಯಾಪಿಟಲ್ ಐಪಿಒ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಹೂಡಿಕೆದಾರರಲ್ಲಿ ಈ ಐಪಿಒ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ, ಹೂಡಿಕೆದಾರರು ಹೊಸ ಅಪ್ಟೇಟ್ಗಳನ್ನು ನೋಡುತ್ತಿದ್ದಾರೆ.
66
Disclaimer: ಏಷ್ಯಾನೆಟ್ ಸುವರ್ಣ ನ್ಯೂಸ್ ಯಾವುದೇ ಷೇರು, ಮ್ಯೂಚುವಲ್ ಫಂಡ್, ಐಪಿಒಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡುವುದಿಲ್ಲ. ಇಲ್ಲಿ ಮಾಹಿತಿಯನ್ನು ಮಾತ್ರ ಒದಗಿಸಲಾಗಿದೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ತಜ್ಞರು ಅಥವಾ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.