Published : Aug 14, 2023, 03:32 PM ISTUpdated : Aug 14, 2023, 03:42 PM IST
ಆಗಸ್ಟ್ 14, 2022 ರಂದು ಷೇರು ಮಾರುಕಟ್ಟೆಯ ಬಿಗ್ ಬುಲ್ ಎಂದೇ ಕರೆಯಲಾಗ್ತಿದ್ದ ರಾಕೇಶ್ ಜುಂಜುನ್ವಾಲಾ ಮೃತಪಟ್ಟಿದ್ರು. ಅಂದರೆ, ಇಂದಿಗೆ ಒಂದು ವರ್ಷ. ಇವರು ಭಾರತ ಮತ್ತು ಅದರ ಹೂಡಿಕೆ ತತ್ವದ ಬಗ್ಗೆ ತಮ್ಮ ಬುದ್ಧಿವಂತಿಕೆಯ ಮಾತುಗಳಿಗಾಗಿ ಯಾವಾಗಲೂ ನೆನಪಾಗ್ತಾರೆ. ಭಾರತ, ಭಾರತೀಯ ಆರ್ಥಿಕತೆ ಮತ್ತು ಹೂಡಿಕೆ ತತ್ವಶಾಸ್ತ್ರದ ಕುರಿತ ಅವರ ಟಿಪ್ಸ್ನಿಂದ ನೀವೂ ಶ್ರೀಮಂತರೂ ಆಗ್ಬೋದು. .
ರಾಕೇಶ್ ಜುಂಜುನ್ವಾಲಾ ಅವರು ಭಾರತ ಹೆಚ್ಚು ಬೆಳವಣಿಗೆಯಾಗುವ ಬಗ್ಗೆ ಹೆಚ್ಚು ನಂಬಿಕೆ ಉಳ್ಳವರಾಗಿದ್ರು.. ದೇಶದ ಕಾರ್ಮಿಕ ಶಕ್ತಿಯೇ ಅದರ ದೊಡ್ಡ ಆಸ್ತಿ ಎಂದಿದ್ದರು. ಹಾಗೆ, ಷೇರು ಮಾರುಕಟ್ಟೆ ಬೆಳವಣಿಗೆ, ಹೆಚ್ಚು ಹೂಡಿಕೆಗೆ ಅವಕಾಶವಿದೆ ಎನ್ನುತ್ತಿದ್ದರು.
210
ಐಕಾನಿಕ್ ಹೂಡಿಕೆದಾರರು ದೇಶವು ಸೂಪರ್ ಪವರ್ ಆಗಿ ಹೊರಹೊಮ್ಮುತ್ತದೆ ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದೂ ಹೇಳಿದ್ದರು.
310
ಭಾರತದ ಸಾಮರ್ಥ್ಯವು ಅಪರಿಮಿತವಾಗಿದೆ ಮತ್ತು ಅದು ತನ್ನ ಉತ್ತಮ ದಿನವನ್ನು ಹೊಂದಲಿದೆ ಎಂದೂ ರಾಕೇಶ್ ಜುಂಜುನ್ವಾಲಾ ಹೇಳಿದ್ದರು.
410
ರಾಕೇಶ್ ಜುಂಜುನ್ವಾಲಾ ಅವರು "ಭಾರತದ ಜನಸಂಖ್ಯಾ ಲಾಭಾಂಶ ಮತ್ತು ನಮ್ಮ ಜನರ ಉದ್ಯಮಶೀಲತೆಯ ಮನೋಭಾವದಿಂದಾಗಿ ನಾನು ಭಾರತದಲ್ಲಿ ದೀರ್ಘಕಾಲೀನ ಬಿಗ್ ಬುಲ್ ಆಗಿದ್ದೇನೆ" ಎಂದೂ ಹೇಳ್ತಿದ್ದರು.
510
ಭಾರತೀಯ ಷೇರು ಮಾರುಕಟ್ಟೆಗಳು ಅಸ್ಥಿರವಾಗುತ್ತವೆ. ಆದರೆ, ಅಲ್ಪಾವಧಿಯ ಮೇಲೆ ಹೂಡಿಕೆದಾರರು ಕೇಂದ್ರೀಕರಿಸಬಾರದು. ಭಾರತದ ಬೆಳವಣಿಗೆಯ ಕಥೆ ಅಖಂಡವಾಗಿದೆ ಎಂದು ಹೇಳಿದ್ದರು.
610
ವ್ಯತಿರಿಕ್ತತೆಯಿಂದ ಸಂಪತ್ತು ಸೃಷ್ಟಿಯಾಗುತ್ತದೆ ಮತ್ತು ಭಾರತೀಯ ಷೇರು ಮಾರುಕಟ್ಟೆಗಳು ಅದನ್ನು ಮಾಡಲು ನಿಮಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತವೆ ಎಂಬುದೂ ಬಿಗ್ ಬುಲ್ ನೀಡಿದ್ದ ಟಿಪ್ಸ್.
710
ಗುಂಪನ್ನು ಫಾಲೋ ಮಾಡ್ಬೇಡಿ. ನೀವು ಸಂಪತ್ತನ್ನು ಸೃಷ್ಟಿಸಲು ಹೋದರೆ, ನೀವು ಸ್ವತಂತ್ರ ಚಿಂತಕರಾಗಿರಬೇಕು ಎಂದೂ ಬಿಗ್ ಬುಲ್ ಖ್ಯಾತಿಯ ರಾಖೇಶ್ ಜುಂಜುನ್ವಾಲಾ ತಿಳಿಸಿದ್ದರು.
810
ಮಾರುಕಟ್ಟೆಯನ್ನು ಗೌರವಿಸಿ. ಮುಕ್ತ ಮನಸ್ಸು ಹೊಂದಿರಿ. ನಷ್ಟವಾದ್ರೂ ಯಾವಾಗ ನಷ್ಟವಾಗ್ಬೇಕು ಅನ್ನೋದರ ಬಗ್ಗೆಯೂ ತಿಳಿಯಿರಿ. ಒಟ್ಟಾರೆ ಷೇರು ಮಾರುಕಟ್ಟೆಯಲ್ಲಿ ಜವಾಬ್ದಾರಿಯುತವಾಗಿರಿ ಎಂದು ರಾಕೇಶ್ ಜುಂಜುನ್ವಾಲಾ ಸಲಹೆ ನೀಡುತ್ತಿದ್ರು.
910
ಷೇರು ಮಾರುಕಟ್ಟೆಗಳು ಯಾವಾಗಲೂ ಸರಿ. ಯಾವತ್ತೂ ಮಾರುಕಟ್ಟೆಯ ಸಮಯ ಮೀರಬೇಡಿ ಎಂದೂ ರಾಕೇಶ್ ಜುಂಜುನ್ವಾಲಾ ಹೇಳ್ತಿದ್ರು. "ಮಾರುಕಟ್ಟೆಯಲ್ಲಿ ಸಮಯ" ಎಂದರೆ ಸ್ಟಾಕ್ ಮಾರುಕಟ್ಟೆಯು ಅದರ ಅತ್ಯಂತ ಕಡಿಮೆ ಅಥವಾ ಅತ್ಯುನ್ನತ ಹಂತದಲ್ಲಿದ್ದಾಗ ನೀವು ಊಹಿಸಲು ಪ್ರಯತ್ನಿಸದ ತಂತ್ರದ ಮೇಲೆ ಅವಲಂಬಿತವಾಗಿದೆ.
1010
ಯಶಸ್ವಿ ಹೂಡಿಕೆಗೆ ತಾಳ್ಮೆ ಬಹಳ ಮುಖ್ಯವಾಗಿದೆ. ನಿಮ್ಮ ಹೂಡಿಕೆಗಳನ್ನು ಬೆಳೆಯಲು ಮತ್ತು ಸಂಯೋಜಿಸಲು ನೀವು ಸಮಯವನ್ನು ನೀಡಬೇಕಾಗಿದೆ ಎಂದೂ ರಾಕೇಶ್ ಜುಂಜುನ್ವಾಲಾ ಷೇರು ಮಾರುಕಟ್ಟೆಯ ಬಗ್ಗೆ ಆಗಾಗ ಹೇಳ್ತಿದ್ರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.