ಭಾರತದ ಕೊಡುಗೈ ದಾನಿ ಬಿಲಿಯನೇರ್‌ ಅಂಬಾನಿ, ಟಾಟಾ ಅಲ್ವೇ ಅಲ್ಲ..ಮತ್ಯಾರು?

Published : Aug 12, 2023, 10:11 AM IST

ಭಾರತದಲ್ಲಿ ಮುಕೇಶ್ ಅಂಬಾನಿ, ರತನ್‌ ಟಾಟಾ, ಅಜೀಂ ಪ್ರೇಮ್ ಜಿ, ಅದಾನಿ ಇವರೆಲ್ಲರೂ ಆಗರ್ಭ ಶ್ರೀಮಂತರು. ಆದರೆ ಇವರ್ಯಾರು ಭಾರತದ ಅತೀ ಹೆಚ್ಚು ದಾನ ಮಾಡುವ ವ್ಯಕ್ತಿಗಳಲ್ಲ. ಹಾಗಿದ್ರೆ ಭಾರತದ ಕೊಡುಗೈ ದಾನಿ ಯಾರು?

PREV
16
ಭಾರತದ ಕೊಡುಗೈ ದಾನಿ ಬಿಲಿಯನೇರ್‌ ಅಂಬಾನಿ, ಟಾಟಾ ಅಲ್ವೇ ಅಲ್ಲ..ಮತ್ಯಾರು?

ಖ್ಯಾತ ಉದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ಆದಾಯದ 60 ಪ್ರತಿಶತವನ್ನು ಬಡವರಿಗೆ ಸಹಾಯ ಮಾಡಲು ಖರ್ಚು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗೆಯೇ ಅಂಬಾನಿ ಗ್ರೂಪ್‌ನ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಸಹ ಕೋಟಿ ಕೋಟಿ ಆಸ್ತಿಯ ಒಡೆಯರು. ಆಗಾಗ ಟ್ರಸ್ಟ್‌ಗಳಿಗೆ ಉದಾರವಾಗಿ ದಾನ ಮಾಡುತ್ತಲೇ ಇರುತ್ತಾರೆ. ಆದರೆ ಅಚ್ಚರಿಯ ವಿಚಾರವೆಂದರೆ ಇವರಿಬ್ಬರೂ ಭಾರತದ ಕೊಡುಗೈ ದಾನಿಗಳಲ್ಲ

26

ಹರಿಯಾಣದ ಕೈತಾಲ್‌ನಲ್ಲಿರುವ ವ್ಯಕ್ತಿಯೊಬ್ಬರು ಭಾರತದ ಅತೀ ಹೆಚ್ಚು ದಾನ ಮಾಡುವ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಅವರು ಹೆಚ್ಚು ಶ್ರೀಮಂತರಲ್ಲದಿದ್ದರೂ, ಉದಾರ ಮನಸ್ಸನ್ನು ಹೊಂದಿದ್ದಾರೆ. ಈ ವ್ಯಕ್ತಿಯ ಹೆಸರು ಫಕೀರ್ ಚಂದ್.

36

ಹರಿಯಾಣದ ಫಕೀರ್ ಚಂದ್‌ ತಮ್ಮ ಸಂಪಾದನೆಯ 90 ಪ್ರತಿಶತವನ್ನು ಬಡವರಿಗೆ ದಾನ ಮಾಡುತ್ತಾರೆ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಫಕೀರ್ ಚಂದ್ ತಮ್ಮ ಗಳಿಕೆಯ 90 ಪ್ರತಿಶತವನ್ನು ದೇಣಿಗೆ ನೀಡುತ್ತಾರೆ ಮತ್ತು ಕೇವಲ 10 ಪ್ರತಿಶತವನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ ಎಂದು ವರದಿಗಳು ತಿಳಿಸಿವೆ.

46

ಫಕೀರ್ ಚಂದ್ ಹರಿಯಾಣದ ಕೈತಾಲ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ 53 ವರ್ಷ. ಫಕೀರ್ ಚಂದ್ ಹೇಳುವಂತೆ ಅವರಿಗೆ ಐದು ಒಡಹುಟ್ಟಿದವರಿದ್ದರು ಮತ್ತು ಅವರಲ್ಲಿ ಯಾರೂ ಮದುವೆಯಾಗಲಿಲ್ಲ. ಆದರೆ ಈಗ ಎಲ್ಲರೂ ಮೃತಪಟ್ಟಿದ್ದಾರೆ. ಫಕೀರ್‌ ಚಂದ್‌ ಕುಟುಂಬದ ಏಕೈಕ ಸದಸ್ಯರಾಗಿದ್ದಾರೆ. ಫಕೀರ್ ಚಂದ್ ತನ್ನ ಸಹೋದರ ಸಹೋದರಿಯರಿಗೆ ಸೇರಿದ ಸ್ವಲ್ಪ ಹಣವನ್ನು ಪಡೆದುಕೊಂಡರು. ಮತ್ತು ಈ ಹಣವು ನೆಮ್ಮದಿಯ ಜೀವನಕ್ಕೆ ಸಹಾಯ ಮಾಡಿತು ಎಂದು ಹೇಳುತ್ತಾರೆ.

56

ಫಕೀರ್ ಚಂದ್ ಸ್ಕ್ರ್ಯಾಪ್‌ಗಳಲ್ಲಿ ವ್ಯವಹರಿಸುತ್ತಾರೆ ಅವನು ಕಷ್ಟಪಟ್ಟು ದುಡಿಯುವ ವ್ಯಕ್ತಿ. ಫಕೀರ್ ಚಂದ್ ಅವರು ಮಾಡಿದ ಒಳ್ಳೆಯ ಕಾರ್ಯಗಳು ಮುಂದಿನ ಜನ್ಮದಲ್ಲಿ ಫಲ ನೀಡಬಹುದು ಎಂದು ನಂಬುತ್ತಾರೆ. ಫಕೀರ್ ಚಂದ್ ಅವರು ಕಳೆದ 25 ವರ್ಷಗಳಿಂದ ರಟ್ಟು ಮತ್ತು ಜಂಕ್‌ಗಳನ್ನು ಕೀಳುವ ಕೆಲಸ ಮಾಡುತ್ತಿದ್ದಾರೆ. ಅವರು ಅಂಗಡಿಗಳಿಂದ ರಟ್ಟಿನ ಖರೀದಿಸಿ ನಂತರ ಅದನ್ನು ಸ್ಕ್ರ್ಯಾಪ್ ಡೀಲರ್‌ಗಳಿಗೆ ಮಾರಾಟ ಮಾಡುತ್ತಾರೆ.

66

ಐವರು ಬಡ ಹುಡುಗಿಯರ ಮದುವೆಯಲ್ಲೂ ಫಕೀರ್ ಚಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮದುವೆಯಲ್ಲಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ 75000 ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ನೀಡಿದ್ದಾರೆ. ವರದಿಗಳ ಪ್ರಕಾರ, ಫಕೀರ್ ಚಂದ್ ಇದುವರೆಗೆ 35 ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿದ್ದಾರೆ. ಫಕೀರ್ ಚಂದ್ ನಿಸ್ಸಂದೇಹವಾಗಿ ಭಾರತದ ಅತ್ಯುತ್ತಮ ದಾನಿಗಳೆಂದು ಗುರುತಿಸಿಕೊಂಡಿದ್ದಾರೆ. ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಮರಳಿ ನೀಡುವ ಅವರ ಬದ್ಧತೆ ಶ್ಲಾಘನೀಯ.

Read more Photos on
click me!

Recommended Stories