ಮುಂದಿನ ಐದು ವರ್ಷ ರೈತರಿಗೆ ನಿಶ್ಚಿಂತೆ, ಅನ್ನದಾತರಿಗೆ ಬಿಗ್‌ಗಿಫ್ಟ್‌ ಘೋಷಣೆ ಮಾಡಿದ ಪ್ರಧಾನಿ ಮೋದಿ!

Published : Jul 31, 2026, 08:35 PM IST

ಕೇಂದ್ರದ ನರೇಂದ್ರ ಮೋದಿ ಸರ್ಕಾರವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು 2030-31ರವರೆಗೆ ವಿಸ್ತರಿಸಿ, ಅದಕ್ಕಾಗಿ 3.15 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟಿದೆ.

PREV
16
ಭಾರೀ ಘೋಷಣೆ ಮಾಡಿದ ಮೋದಿ ಸರ್ಕಾರ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಕೋಟ್ಯಂತರ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ದೇಶದ ಕೃಷಿಕರ ಬೃಹತ್ ಆಸರೆಯಾಗಿರುವ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ, ಅಂದರೆ 2030-31ರವರೆಗೆ ವಿಸ್ತರಿಸಿ ಅತಿ ದೊಡ್ಡ ಘೋಷಣೆ ಮಾಡಿದೆ.

26
5 ವರ್ಷಗಳ ಕಾಲ ಪಿಎಂ ಕಿಸಾನ್ ಯೋಜನೆ ವಿಸ್ತರಣೆ

ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಮುಂದಿನ ಐದು ವರ್ಷಗಳ ಕಾಲ ಅಂದರೆ 2030-31ರ ಹಣಕಾಸು ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಲಾಗಿದೆ. ಈ ಬೃಹತ್ ಯೋಜನೆಗಾಗಿ ಕೇಂದ್ರ ಸರ್ಕಾರವು 3.15 ಲಕ್ಷ ಕೋಟಿ ರೂಪಾಯಿಗಳ ಭಾರಿ ನಿಧಿಯನ್ನು ಕಾಯ್ದಿರಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸಚಿವ ಸಂಪುಟದ ಈ ನಿರ್ಧಾರಗಳನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವೇಳೆ 'ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ'ಗೂ (PM-SSY) ಮುಂದುವರಿಕೆ ಮಂಜೂರಾತಿ ನೀಡಲಾಗಿದೆ.

36
24ನೇ ಕಂತಿನ ಹಣ ಬಿಡುಗಡೆ ನಿರೀಕ್ಷೆ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುವ ದೇಶದ ರೈತರು ಪ್ರಸ್ತುತ 24ನೇ ಕಂತಿನ (24th Installment) ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಯೋಜನೆಯನ್ನು ಮುಂದಿನ 5 ವರ್ಷಗಳಿಗೆ ವಿಸ್ತರಿಸಿರುವುದು ರೈತರ ದೊಡ್ಡ ಚಿಂತೆಯನ್ನು ದೂರ ಮಾಡಿದೆ. ಮೂಲಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣವು ಬರುವ ಅಕ್ಟೋಬರ್ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ತಲುಪುವ ನಿರೀಕ್ಷೆಯಿದೆ.

46
ಇದುವರೆಗೆ ನೇರವಾಗಿ ತಲುಪಿದ ಹಣವೆಷ್ಟು?

ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೆ ಒಟ್ಟು 23 ಕಂತುಗಳ ಮೂಲಕ ಬರೋಬ್ಬರಿ 4.47 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಪ್ರಸ್ತುತ 23ನೇ ಕಂತಿನ ಲಾಭವನ್ನು ದೇಶದ 9.49 ಕೋಟಿಗೂ ಹೆಚ್ಚು ರೈತರು ಪಡೆದುಕೊಂಡಿದ್ದಾರೆ.

56
ಯೋಜನೆಯಲ್ಲಿ ಮಹಿಳಾ ರೈತರ ಭಾರಿ ಪಾಲುದಾರಿಕೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿರುವವರಲ್ಲಿ ಮಹಿಳಾ ರೈತರ ಸಂಖ್ಯೆಯೂ ಗಮನಾರ್ಹವಾಗಿದೆ. ಪ್ರಸ್ತುತ ಯೋಜನೆಯ ಪ್ರತಿ ನಾಲ್ಕೂ ಫಲಾನುಭವಿಗಳ ಪೈಕಿ ಒಬ್ಬರು ಮಹಿಳಾ ರೈತರಾಗಿದ್ದು, ದೇಶದ ಗ್ರಾಮೀಣ ಭಾಗದ ಮಹಿಳಾ ಸಬಲೀಕರಣಕ್ಕೂ ಈ ಯೋಜನೆ ದೊಡ್ಡ ಮಟ್ಟದಲ್ಲಿ ನೆರವಾಗಿದೆ.

66
ಮುಂಬರುವ 5 ವರ್ಷಗಳ ಕಾಲ ನಿಶ್ಚಿಂತೆಯಾದ ರೈತರು

ಕೇಂದ್ರ ಸರ್ಕಾರವು ಯೋಜನೆಗೆ 2030-31ರವರೆಗೆ ವಿಸ್ತರಣೆ ನೀಡಿ ₹3.15 ಲಕ್ಷ ಕೋಟಿ ಅನುದಾನ ಕಾಯ್ದಿರಿಸಿರುವುದರಿಂದ ಮುಂದಿನ ಐದು ವರ್ಷಗಳ ಕಾಲ ರೈತರ ಖಾತೆಗೆ ನಿಗದಿತ ಸಮಯದಲ್ಲಿ ನೇರವಾಗಿ ಸಹಾಯಧನದ ಹಣ ತಲುಪಲಿದೆ. ಕೇಂದ್ರದ ಈ ದೀರ್ಘಾವಧಿ ಆರ್ಥಿಕ ಬೆಂಬಲವು ಕಷ್ಟದಲ್ಲಿದ್ದ ರೈತ ಸಮುದಾಯಕ್ಕೆ ದೊಡ್ಡ ಆಸರೆಯಾಗಿ ಪರಿಣಮಿಸಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories