ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ರಾಯೋಜಕರಾಗಿದ್ದ ಕುಟುಂಬ ತೊರೆದು ಸನ್ಯಾಸಿಯಾದ ಬಿಲಿಯನೇರ್‌ ಉದ್ಯಮಿ ಮಗ!

First Published Apr 15, 2024, 3:37 PM IST

ವಿಶ್ವದ ಶ್ರೀಮಂತರಲ್ಲಿ ಒಬ್ಬನಾಗುವ ಅವಕಾಶ ಇದ್ದರೂ. ಐಷಾರಾಮಿ ಜೀವನವನ್ನು ತ್ಯಜಿಸಿದ ಬಿಲಿಯನೇರ್ ಕುಟುಂಬದ ಈ ಕುಡಿ ಎಲ್ಲವನ್ನು ತೊರೆದು ಸನ್ಯಾಸಿಯಾಗಲು ಬಯಸಿದ. ಅಪ್ಪ ಇಂದಿಗೂ ಫೋಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿರುವ ಏಷ್ಯಾದ ಪ್ರಮುಖ ಶ್ರೀಮಂತರಲ್ಲಿ ಒಬ್ಬ. ಯಾರು ಅವರು ಎಂಬ ಸಂಫೂರ್ಣ ಮಾಹಿತಿ ಇಲ್ಲಿದೆ.

ಅವರೇ ವೆನ್ ಅಜಾನ್ ಸಿರಿಪಾನ್ಯೋ . ಇವರು ಏಷ್ಯಾದ ಬಿಲಿಯನೇರ್ ಉದ್ಯಮಿಯ ಮಗ.  ತಂದೆ ಆನಂದ ಕೃಷ್ಣನ್ ಅವರು ರೂ 40,000 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಎಕೆ ಎಂದು ಕರೆಯಲ್ಪಡುವ ಅವರು ಟೆಲಿಕಾಂ ಉದ್ಯಮದಲ್ಲಿ ಸ್ಟಾರ್‌ ಆಗಿದ್ದರು. ಅವರು ಭಾರತೀಯ ಫೋನ್ ಕಂಪನಿ ಏರ್‌ಸೆಲ್‌ನ ಮಾಲೀಕರಾಗಿದ್ದರು. ಈ ಕಂಪೆನಿ ಹಿಂದೆ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ನೇತೃತ್ವದ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ರಾಯೋಜಕತ್ವ ನೀಡುತ್ತಿತ್ತು.

ಆನಂದ ಕೃಷ್ಣನ್ ಅವರು ಎ.ಕೆ. ಅವರು ಟೆಲಿಕಾಂ ಉದ್ಯಮದಲ್ಲಿ ದೊಡ್ಡ ಹೆಸರು.  ಮಗ ವೆನ್ ಅಜಾನ್ ಸಿರಿಪಾನ್ಯೊ ಅವರನ್ನು ಕೃಷ್ಣನ್ ಅವರ ಮೆಗಾ-ಬಿಲಿಯನ್-ಡಾಲರ್ ಟೆಲಿಕಾಂ ಸಾಮ್ರಾಜ್ಯದ ಉತ್ತರಾಧಿಕಾರಿಯಾಗಲು ಉದ್ದೇಶಿಸಿದ್ದರು ಆದರೆ ಅಜಾನ್  ಬೇರೆ ರೀತಿಯಲ್ಲಿ ಜೀವನ ಆಯ್ಕೆ ಮಾಡಿಕೊಂಡರು.

ಆನಂದ್ ಕೃಷ್ಣನ್ ಅವರ ವ್ಯಾಪಾರ ಸಾಮ್ರಾಜ್ಯವು ಟೆಲಿಕಾಂ, ಮಾಧ್ಯಮ, ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್ ಮತ್ತು ಇತರ ಉದ್ಯಮವನ್ನು ಒಳಗೊಂಡಿದೆ. ಕೃಷ್ಣನ್ ಅವರ ಬೃಹತ್ ಸಂಪತ್ತು ಅವರನ್ನು ಮಲೇಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ.

ಉದ್ಯಮಶೀಲತೆಯ ಜೊತೆಗೆ, ಕೃಷ್ಣನ್ ಪ್ರಮುಖ ಪರೋಪಕಾರಿಗಳಲ್ಲಿ ಒಬ್ಬರು. ಕುಟುಂಬವು ಬೌದ್ಧಧರ್ಮವನ್ನು ಅನುಸರಿಸುತ್ತಾರೆ ಮತ್ತು ಶಿಕ್ಷಣ ಮತ್ತು ಮಾನವೀಯ ಪ್ರಯತ್ನಗಳು ಸೇರಿದಂತೆ ಹಲವಾರು ದೇಣಿಗೆಗಳನ್ನು ನೀಡುತ್ತಾರೆ. ಕೃಷ್ಣನ್ ಅವರ ಮಗ ಸಿರಿಪಾನ್ಯೊ 18 ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸಿಯಾದರು. 

ಸಿರಿಪಾನ್ಯೊ ಅವರ ಸನ್ಯಾಸಿಯ ಜೀವನದ ಬಗ್ಗೆ ಹೆಚ್ಚಾಗಿ ಹೇಳಿಕೊಂಡಿಲ್ಲ. ಆದರೆ ಮೋಜಿಗಾಗಿ ತಪಸ್ವಿ ಜೀವನವನ್ನು ಕೈಗೊಂಡರು. ಸನ್ಯಾಸಿ ತಾತ್ಕಾಲಿಕ ಪ್ರಯತ್ನವಾಗಿ ಪ್ರಾರಂಭವಾದದ್ದು ನಂತರ ಅವರ ಜೀವನಶೈಲಿಗೆ ಶಾಶ್ವತವಾಯ್ತು ಎಂದು ಹೇಳಲಾಗುತ್ತದೆ.
 

ಸಿರಿಪನ್ಯೋ ತನ್ನ ಸಂಪತ್ತನ್ನು ತ್ಯಜಿಸಿ ಸನ್ಯಾಸ ಜೀವನವನ್ನು ಆರಿಸಿಕೊಂಡು ಎರಡು ದಶಕಗಳೇ ಕಳೆದಿವೆ. ಸದ್ಯ ಥಾಯ್ಲೆಂಡ್‌ನ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ. ಸಿರಿಪಾನ್ಯೊ ಸ್ಪಷ್ಟವಾಗಿ 8 ಭಾಷೆಗಳನ್ನು ಮಾತನಾಡಬಲ್ಲರು. 

ಆನಂದ್ ಕೃಷ್ಣನ್ ಅವರ ಮೂಲ ಶ್ರೀಲಂಕಾ, ಆದರೆ ಮಲೇಷ್ಯಾದಲ್ಲಿ ನೆಲೆಯೂರಿರುವ  86 ವರ್ಷದ ಉದ್ಯಮಿ 2024ರಲ್ಲಿ 480 ಕೋಟಿ ನಿಮ್ಮಳ ಮೌಲ್ಯ ಹೊಂದಿದ್ದಾರೆ. ಮೊದಲ ಹೆಂಡತಿಯೊಂದಿಗೆ ಬೇರ್ಪಟ್ಟ ನಂತರ ಫ್ರೆಂಚ್ ಪ್ರಜೆಯನ್ನು ವಿವಾಹವಾದರು. ಅವರ ಕುಟುಂಬದ ಎಲ್ಲಾ ಸದಸ್ಯರು ಕಡಿಮೆ ಪ್ರೊಫೈಲ್ ಅನ್ನು ನಿರ್ವಹಿಸುತ್ತಾರೆ. ಅವರ ಮೂರು ಮಕ್ಕಳಲ್ಲಿ ಇಬ್ಬರು ಅಪ್ಪನ ಆಸ್ತಿಯನ್ನು ಅನುಸರಿಸುತ್ತಿಲ್ಲ. ಒಬ್ಬ ಮಗಳು ವೈದ್ಯಳಾಗಿದ್ದರೆ, ಒಬ್ಬ ಮಗ ಥೈಲ್ಯಾಂಡ್‌ನ ಕಾಡುಗಳಲ್ಲಿ ವಾಸಿಸುತ್ತಿರುವ ಧರ್ಮನಿಷ್ಠ ಸನ್ಯಾಸಿ. ಮತ್ತೊಬ್ಬನ ಬಗ್ಗೆ ಅಷ್ಟಾಗಿ ತಿಳಿದಿಲ್ಲ.

click me!