ಶೀಘ್ರದಲ್ಲಿಯೇ ಚಿನ್ನದ ಬೆಲೆ ಇಳಿಕೆ; ಬಂಗಾರದಂಥಾ ನ್ಯೂಸ್ ನೀಡಿದ ಆರ್ಥಿಕ ತಜ್ಞ ಆನಂದ್ ಶ್ರೀನಿವಾಸನ್

Published : Dec 05, 2024, 10:39 AM ISTUpdated : Mar 24, 2025, 12:55 PM IST

Economist Anand Srinivasan Prediction: ದಿನಾಲು ಏರುತ್ತಿರುವ ಬಂಗಾರದ ಬೆಲೆ ಬಗ್ಗೆ ಆರ್ಥಿಕ ತಜ್ಞ ಆನಂದ್ ಶ್ರೀನಿವಾಸನ್ ಮಹತ್ವದ  ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿನ್ನದ ಬೆಲೆ ಇಳಿಕೆ ಯಾವಾಗ ಪ್ರಶ್ನೆಗೆ ಉತ್ತರಿಸಿ, ಎಷ್ಟು ಕಡಿಮೆಯಾಗುತ್ತೆ ಎಂಬುದರ ಬಗ್ಗೆಯೂ ಹೇಳಿದ್ದಾರೆ.

PREV
14
ಶೀಘ್ರದಲ್ಲಿಯೇ ಚಿನ್ನದ ಬೆಲೆ ಇಳಿಕೆ; ಬಂಗಾರದಂಥಾ ನ್ಯೂಸ್  ನೀಡಿದ ಆರ್ಥಿಕ ತಜ್ಞ ಆನಂದ್ ಶ್ರೀನಿವಾಸನ್
ಬಂಗಾರದ ಆಭರಣಗಳು

ದಿನಾಲು ಬಂಗಾರದ ಬೆಲೆ ಏರಿಳಿತ ಕಾಣ್ತಿದೆ. ಬಂಗಾರದ ಬೆಲೆ ಬಗ್ಗೆ ಸುದ್ದಿಗಳು ಚುನಾವಣಾ ಫಲಿತಾಂಶದಷ್ಟೇ ಮಹತ್ವ ಪಡೆದುಕೊಳ್ಳುತ್ತಿವೆ. ಯಾಕಂದ್ರೆ ಬಂಗಾರದ ಬೆಲೆ ತಿಳ್ಕೊಳ್ಳೋಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜನರಿಗೆ ಬಂಗಾರದ ಮೇಲಿನ ಆಸಕ್ತಿ ಅಷ್ಟು ಮಹತ್ವದ್ದಾಗಿದೆ.

24
ಬಂಗಾರ

ಭಾರತದಲ್ಲಿ ಹೂಡಿಕೆ ವೇದಿಕೆಗಳು

ಜನ ತಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಆಗಿ, ಅಂಚೆ ಕಚೇರಿ ಯೋಜನೆ, ರಿಯಲ್ ಎಸ್ಟೇಟ್, ಶೇರ್ ಮಾರ್ಕೆಟ್‌ನಂತಹ ವಿವಿಧ ವೇದಿಕೆಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಇವೆಲ್ಲವೂ ಅಲ್ಪಾವಧಿಗೆ ಸೂಕ್ತವಲ್ಲ. ಹೂಡಿಕೆ ಮಾಡಿ ಕೆಲವು ವರ್ಷ ಕಾಯಬೇಕಾಗುತ್ತದೆ. ಇವುಗಳಲ್ಲಿ ಕೆಲವು ಅಪಾಯಕಾರಿ.

34

ಆದರೆ ಬಂಗಾರ ಹಾಗಲ್ಲ. ನಾವು ಕೊಳ್ಳುವ ಬಂಗಾರ ಅಲ್ಪಾವಧಿಯಲ್ಲೇ ಲಾಭ ತರುತ್ತದೆ. ಉದಾಹರಣೆಗೆ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣ ಸುರಕ್ಷಿತ. ಆದರೆ ಬಡ್ಡಿ ಕಡಿಮೆ ಇರುವುದರಿಂದ ಬೆಲೆ ಬೇಗ ಏರುವುದಿಲ್ಲ. ಆದರೆ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಬೆಲೆ ದಿನಾಲು ಏರುತ್ತದೆ, ನಮ್ಮ ಲಾಭವೂ ಹೆಚ್ಚುತ್ತದೆ.

44
ಆರ್ಥಿಕ ತಜ್ಞ ಆನಂದ್ ಶ್ರೀನಿವಾಸನ್ ಸಂದರ್ಶನ

ಆನಂದ್ ಶ್ರೀನಿವಾಸನ್

ಆರ್ಥಿಕ ತಜ್ಞ ಆನಂದ್ ಶ್ರೀನಿವಾಸನ್ ಸಂದರ್ಶನದಲ್ಲಿ, ಮಾರ್ಚ್ ತಿಂಗಳವರೆಗೆ ಬಂಗಾರದ ಬೆಲೆ ₹100, ₹200 ರಷ್ಟು ಏರಿಳಿತ ಕಾಣುತ್ತೆ. ಆದರೆ ಸುಮಾರು ₹2,500 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಆಮೇಲೆ ಬೆಲೆ ಏರುತ್ತದೆ. ಈಗಾಗಲೇ ಹೂಡಿಕೆ ಮಾಡಿರೋರು ಭಯಪಡಬೇಕಾಗಿಲ್ಲ. ಬೆಲೆ ಇಳಿಕೆ ಅಲ್ಪಾವಧಿಗೆ. ಬೇಗನೆ ಒಂದು ಗ್ರಾಂ ಬಂಗಾರ ₹10,000 ತಲುಪಬಹುದು ಎಂದು ಹೇಳಿದ್ದಾರೆ.

Read more Photos on
click me!

Recommended Stories