ಸಿ.ಜೆ.ರಾಯ್ ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ರಾಯ್ ಅವರು ಹನಿಟ್ರ್ಯಾಪ್ನಿಂದ ಹೇಗೆ ಬಚಾವ್ ಆಗಿದ್ದರು ಮತ್ತು ಅವರು ಕಾಂಗ್ರೆಸ್ ಪಕ್ಷಕ್ಕೆ ಫಂಡರ್ ಆಗಿದ್ದರು ಎಂಬ ವಿಷಯಗಳನ್ನು ಚಂದ್ರಚೂಡ ಬಹಿರಂಗಪಡಿಸಿದ್ದಾರೆ.
ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಹಲವು ಸ್ಪೋಟಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಏಕಕಾಲಕ್ಕೆ 50 ಸಿನಿಮಾಗಳನ್ನು ಮಾಡಲು ರಾಯ್ ಮುಂದಾಗಿದ್ದು, ತಮ್ಮನ್ನು ಸೇರಿದಂತೆ ಸುಮಾರು 25 ನಿರ್ದೇಶಕರಿಗೆ ಮುಂಗಡ ಹಣ ನೀಡಿದ್ದರು ಎಂಬಿತ್ಯಾದಿ ಬಣ್ಣದ ಲೋಕದ ನಂಟಿನ ಮಾಹಿತಿಯನ್ನು ಚಕ್ರವರ್ತಿ ಚಂದ್ರಚೂಡ ರಿವೀಲ್ ಮಾಡಿದ್ದಾರೆ.
25
ಹೇಗೆ ಹನಿಟ್ರ್ಯಾಪ್ನಿಂದ ಬಚಾವ್ ಆದ್ರು?
ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ ಮತ್ತೊಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಸ್ವತಃ ಈ ವಿಷಯವನ್ನು ರಾಯ್ ಅವರೇ ತಮ್ಮೊಂದಿಗೆ ಶೇರ್ ಮಾಡಿಕೊಂಡಿದ್ರು ಅಂತಾನೂ ಹೇಳಿದ್ದಾರೆ. ಇದೇ ವೇಳೆ ರಾಯ್ ಹೇಗೆ ಹನಿಟ್ರ್ಯಾಪ್ನಿಂದ ಬಚಾವ್ ಆದ್ರು ಎಂಬುದನ್ನು ಹೇಳಿದ್ದಾರೆ.
35
ಮಿಡ್ನೈಟ್ ಸೆಷನ್ ಫೋಟೋ
2015-16ರಲ್ಲಿ ರಾಯ್ ಆಗತಾನೇ ಪರಿಚಯವಾಗಿದ್ರು. ಒಮ್ಮೆ ಕಾಲ್ ಮಾಡಿದ್ದ ರಾಯ್, ನಾನು ಮಿಡ್ನೈಟ್ ಸೆಷನ್ ಫೋಟೋ ಅಂತ ಮಾಡಿಸಿದ್ದೆ. ಮಿಡ್ನೈಟ್ ಸೆಷನ್ ಫೋಟೋ ಅಂದ್ರೆ ಎಲ್ಲರಿಗೂ ಅರ್ಥವಾಗುತ್ತದೆ. ಆಗ ಸಿನಿಮಾ ಮಾಡಲು ರಾಯ್ ಮುಂದಾಗಿದ್ದ ಸಮಯ. ರೆಸಾರ್ಟ್ನ ಮ್ಯಾನೇಜರ್ಗಳು ಕೆಲವು ನಟಿಯರನ್ನು ಕರೆಸಿದ್ದರು. ಬಂದಿದ್ದವರು ಪಾರ್ಟಿ ಎಂಜಾಯ್ ಮಾಡಿ ವಸಂತ ಕಾಲ ಕಳೆದು ವೈಶಾಖ ದಿನದಂದು ಹೊರಟು ಹೋಗಿದ್ದರು.
ರೆಸಾರ್ಟ್ನಿಂದ ಹೋದ ಬಳಿಕ ನಟಿಯರು ರಾಯ್ ಜೊತೆಗೆ ನಡೆದುಕೊಳ್ಳುವ ರೀತಿ, ಕಳಿಸುವ ಮಸೇಜ್ ದಾಟಿ ಸಹ ಬದಲಾಗಿತ್ತು. ಅದು ಪೂರ್ಣ ಪ್ರಮಾಣದ ಹನಿಟ್ರ್ಯಾಪ್ ಆಗಿತ್ತು. ಈ ಬಗ್ಗೆ ನನ್ನೊಂದಿಗೆ ಮಾತಾಡಿದಾಗ, ನೀವೇನಾದ್ರೂ ಭಾವನಾತ್ಮಕವಾಗಿ ಅಟ್ಯಾಚ್ ಆಗಿಲ್ಲ ಅಂದ್ರೆ ನಿಮ್ಮದೇ ಶೈಲಿಯಲ್ಲಿ ಹ್ಯಾಂಡಲ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದೆ. ನಂತರ ಅದು ಅಲ್ಲಿಗೆ ಮುಗಿತು ಎಂದು ಚಂದ್ರಚೂಡ ಹೇಳಿದ್ದಾರೆ.
ದುಬೈವರೆಗೆ ಲಿಂಕ್ ಇರೋವಂತಹ ಆಗರ್ಭ ಶ್ರೀಮಂತರೊಂದಿಗೆ ಈ ರೀತಿಯಲ್ಲಿ ನಡೆಯುತ್ತಿರುತ್ತದೆ. ವೀರಪ್ಪ ಮೊಯ್ಲಿ ಅವರ ಕಾಲದಿಂದಲೂ ರಾಯ್ ಕಾಂಗ್ರೆಸ್ ಜೊತೆಯಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ಗೆ ಫಂಡರ್ ಸಹ ಆಗಿದ್ದರು ಎಂಬ ವಿಷಯವನ್ನು ಸಹ ತಿಳಿಸಿದರು.