ಮೂರನೇ ದಿನ ದೀಪಾವಳಿ ಅಮವಾಸ್ಯೆ, ಅಂದು ಯಮತರ್ಪಣ, ಪಿತೃ ತರ್ಪಣ ಆಚರಣೆ ಉಂಟು. ಕುಲದಲ್ಲಿ ನಾನಾ ಬಗೆಯ ಅಪಮೃತ್ಯುಗಳಿಂದ ತೀರಿಕೊಂಡವರಿಗೆ ಸದ್ಗತಿಯಾಗಲೂ ಯಮತರ್ಪಣ ವಿಧಿ ಹೇಳಲಾಗಿದೆ. ಅಂದು ಸಂಜೆ ಬಲೀಂದ್ರ ಪೂಜಾ ಆರಂಭವಾಗಿ ಮಾರನೆಯ ದಿನ ಬಲಿಪಾಡ್ಯಮಿ ಹಬ್ಬ ಎರ್ಪಡುವುದು.
ಶ್ರೀ ರಾಮನ ರೂಪಿ ಮಹಾವಿಷ್ಣುವಿನ ಅವತಾರ ದಿನವೇ ಬಲಿಂದ್ರ ಪೂಜೆ, ಇದರ ಕಥನವನ್ನು ಓದಿ. ಮಹಾಭಕ್ತ ಪ್ರಹ್ಲಾದನ ವಂಶ ದೀಪಕನಾದ ಬಲಿರಾಜನೇ ಭವಿಷ್ಯದ ಇಂದ್ರನಾಗುವನು. ಈಗಿನಿಂದಲೇ ಬಲಿಪಾಡ್ಯಗಳಿಂದ ಶ್ರೀ ಹರಿಯ ಪೂಜಿಸುತ್ತಾ ನಮ್ಮ ಭವಿಷ್ಯದ ಹುಟ್ಟುಗಳಲ್ಲಿ ಹರಿ ಭಕ್ತ ನಮಗೆ ಉಂಟಾಗಲಿ ಎಂದೇ ಬಲಿರಾಜನಲ್ಲಿ ಪ್ರಾರ್ಥಿಸುವುದು ಬಲಿಪೂಜೆಯ ಹಿನ್ನೆಲೆ.