ISL 2019: ಒಡಿಶಾ ಪ್ಲೇ ಆಫ್ ಆಸೆ ಜೀವಂತ!

Published : Dec 11, 2019, 10:28 PM IST
ISL 2019: ಒಡಿಶಾ ಪ್ಲೇ ಆಫ್ ಆಸೆ ಜೀವಂತ!

ಸಾರಾಂಶ

ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಒಡಿಶಾ ಪ್ಲೇ ಆಫ್ ಆಸ ಜೀವಂತವಾಗಿದೆ. ಹೈದರಾಬಾದ್ ವಿರುದ್ಧ ಗೆಲುವಿನ ಕೇಕೆ ಹಾಕಿದ ಒಡಿಶಾ ಇದೀಗ ಅಗ್ರ ಸ್ಥಾನದ ತಂಡಗಳಿಗೆ ಶಾಕ್ ನೀಡಿಲು ಸಜ್ಜಾಗಿದೆ. 

ಪುಣೆ(ಡಿ11): ಕಾರ್ಲೋಸ್ ಡೆಲ್ಗಡೊ (27ನೇ ನಿಮಿಷ), ಕ್ಸಿಸ್ಕೋ ಹೆರ್ನಾಂಡೀಸ್ (41ನೇ ನಿಮಿಷ) ಹಾಗೂ ಪೆರೆಜ್ ಗೆಡೆಸ್ (71ನೇ ನಿಮಿಷ) ಅವರು ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಹೈದರಾಬಾದ್ ಎಫ್ ಸಿ ತಂಡವನ್ನು 3-2 ಗೋಲುಗಳ ಅಂತರದಲ್ಲಿ ಮಣಿಸಿದ ಒಡಿಶಾ ಎಫ್ ಸಿ  ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 

ಇದನ್ನೂ ಓದಿ: ISL 2019: ಕೋಚ್ ಬದಲಾದರೂ ಚೆನ್ನೈ ಹಣೆ ಬರಹ ಬದಲಾಗಲಿಲ್ಲ !..

ಹೈದರಾಬಾದ್ ಪರ ಬೊಬೊ (65ನೇ ನಿಮಿಷ)ಹಾಗೂ ರೋಹಿತ್ ಕುಮಾರ್  (89ನೇ ನಿಮಿಷ ) ಗಳಿಸಿದ ಸೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಒಡಿಶಾದ ವಿನೀತ್ ರಾಯ್ ರೆಡ್ ಕಾರ್ಡ್ ಪಡೆದು ಹೊರನಡೆಯುವ ಮೂಲಕ ತಂಡ ಸುಮಾರು ಮೂವತ್ತು ನಿಮಿಷಗಳ ಕಾಲ ಕೇವಲ ಹತ್ತೇ ಆಟಗಾರರೊಂದಿಗೆ ಆಟ ಮುಂದುವರಿಸಿತ್ತು. ಈ ಜಯದೊಂದಿಗೆ ಒಡಿಶಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ತಲುಪಿತು. 

ಇದನ್ನೂ ಓದಿ: ISL 2019: ಮುತ್ತಿನ ನಗರಿಯಲ್ಲಿ ಮುಗ್ಗರಿಸಿದ ಹೈದರಾಬಾದ್, ಗೋವಾಗೆ ಗೆಲುವು!

ಒಡಿಶಾ ತಂಡ ಪ್ರಥಮಾರ್ಧದಲ್ಲಿ 2-0 ಗೋಲುಗಳಿಂದ ಮೇಲುಗೈ ಸಾಧಿಸಿತು, ಇರೋಂದಿಗೆ ಹೈದರಾಬಾದ್ ಗೆ ಕೊನೆಯ ಸ್ಥಾನದಲ್ಲೇ ಇರಿ ಎಂಬ ಸಂದೇಶ ನೀಡಿತು. ಪ್ರಥಮಾರ್ಧ ಒಡಿಶಾ ತಂಡಕ್ಕೆ ಪಂದ್ಯ ಗೆದ್ದಷ್ಟೇ ಸಂಭ್ರಮ. ಇದು ಒಡಿಶಾ ತಂಡ ಇದುವರೆಗೂ ಆಡಿದ ಪ್ರಥಮಾರ್ಧಗಳಲ್ಲೇ ಉತ್ತಮವಾದುದು. ಏಕೆಂದರೆ ಇದುವರೆಗೂ ಎರಡು ಗೋಲುಗಳನ್ನು ತಂಡ ಪ್ರಥಮಾರ್ಧದಲ್ಲಿ ಗಳಿಸಿಲ್ಲ.  

ಆರಂಭದಿಂದಲೂ ಒಡಿಶಾ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತ್ತು, ಆದರೆ ಅವಕಾಶಗಳನ್ನು ನಿರ್ಮಿಸುವಲ್ಲಿ ವಿಫಲವಾಗಿತ್ತು. ಅರ್ಧ ಗಂಟೆಯ ಪಂದ್ಯ ಮುಗಿಯಲು ಮೂರು ನಿಮಿಷ ಬಾಕಿ ಇರುವಾಗ ಪ್ರವಾಸಿ ತಂಡ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು.  3-2 ಅಂತರದಲ್ಲಿ ಗೆಲುವು ಸಾಧಿಸಿದ ಒಡಿಶಾ ಸಂಭ್ರಮ ಆಚರಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?