ISL 2019: ಕೋಚ್ ಬದಲಾದರೂ ಚೆನ್ನೈ ಹಣೆ ಬರಹ ಬದಲಾಗಲಿಲ್ಲ !

Published : Dec 09, 2019, 09:50 PM ISTUpdated : Dec 09, 2019, 09:51 PM IST
ISL 2019: ಕೋಚ್ ಬದಲಾದರೂ ಚೆನ್ನೈ ಹಣೆ ಬರಹ ಬದಲಾಗಲಿಲ್ಲ !

ಸಾರಾಂಶ

ಚೆನ್ನೈಯನ್ ಎಫ್‌ಸಿ ತಂಡ ಪ್ರಸಕ್ತ ವರ್ಷದಲ್ಲೂ ನಿರೀಕ್ಷಿತ ಹೋರಾಟ ನೀಡಲು ಎಡವುತ್ತಿದೆ. ತಂಡಕ್ಕೆ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟಿದ್ದ ಕೋಚ್ ಜಾನ್ ಗ್ರೆಗೋರಿ ಬದಲು ಮಾಡಿ ಚೆನ್ನೈಗೆ ಫಲಿತಾಂಶ ಬದಲಿಸಲು ಸಾಧ್ಯವಾಗಲಿಲ್ಲ.

ಜೆಮ್‌ಶೆಡ್‌ಪುರ(ಡಿ.09) :  ಚೆನ್ನೈಯಿನ್ ಎಫ್ ಸಿ ಪರ ನಿರೀಜುಸ್ ವಾಲ್ಸ್ಕಿಸ್ (26ನೇ ನಿಮಿಷ) ಹಾಗೂ ಜೆಮ್ಶೆಡ್ಪುರ ಎಫ್ ಸಿ ಪರ ಐಸಾಕ್  ವಾನ್ಮಲ್ಸೌಮಾ (89ನೇ ನಿಮಿಷ) ಗೋಲು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನ 35ನೇ ಪಂದ್ಯ1-1 ಗೋಲಿನಿಂದ ಡ್ರಾ ಗೊಂಡಿತು. 

ಇದನ್ನೂ ಓದಿ: ISL 2019: ಮುತ್ತಿನ ನಗರಿಯಲ್ಲಿ ಮುಗ್ಗರಿಸಿದ ಹೈದರಾಬಾದ್

ಪ್ರಧಾನ ಕೋಚ್ ಬದಲಾವಣೆ ಮಾಡಿದರೂ ಚೆನ್ನೈ ತಂಡಕ್ಕೆ ಗೆಲುವು ಸಿಗಲಿಲ್ಲ.  ಜಾನ್ ಗ್ರೆಗೊರಿ ಬದಲಿಗೆ ಓವೆನ್ ಕೊಯ್ಲ್ ಚೆನ್ನೈ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೊಸ ಕೋಚ್ ಬಂದ ಮೊದಲ ಪಂದ್ಯದಲ್ಲಿ ಗೆಲುವು ಕಾಣಲಿಲ್ಲ.  ಟಾಟಾ ಪಡೆಯನ್ನು  ಮನೆಯಂಗಣದಲ್ಲಿ ಮತ್ತೊಮ್ಮೆ ಸೋಲಿಸಲಾಗಲಿಲ್ಲ. 

ಇದನ್ನೂ ಓದಿ: ISL 2019: ನಾರ್ತ್ ಈಸ್ಟ್ ವಿರುದ್ಧ ಎಟಿಕೆಗೆ ಭರ್ಜರಿ ಗೆಲುವು; ಅಗ್ರಸ್ಥಾನಕ್ಕೆ ಲಗ್ಗೆ!.

26ನೇ ನಿಮಿಷದಲ್ಲಿ ನೆರಿಜುಸ್ ವಾಲ್ಸ್ಕಿಸ್  ಗಳಿಸಿದ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡ ಜೆಮ್ಶೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಟಾಟಾ ಪಡೆ ಈ ಬಾರಿ ಉತ್ತಮ ರೀತಿಯಲ್ಲಿ ಪೈಪೋಟಿ ನೀಡುವಲ್ಲಿ ವಿಫಲವಾಯಿತು. ಆ ನಂತರ ಪಂದ್ಯ ಹೆಚ್ಚು ಪೈಪೋಟಿಯಿಂದ ನಡೆಯಲಿಲ್ಲ. 

ಜೆಮ್ಶೆಡ್ಪುರ ತಂಡ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿದರೂ ಅಲ್ಲಿ ಸಮಬಲಕ್ಕೆ ಅವಕಾಶ ಇರಲಿಲ್ಲ. ಹೊಸ ಕೋಚ್ ಅವರ ಸ್ಪೂರ್ತಿಯ ಮಾತು ಹಾಗೂ ಸಲಹೆಗೆ ತಕ್ಕ ಬೆಲೆ ನೀಡಿದ ಚೆನ್ನೈಯಿನ್ ತಂಡಕ್ಕೆ ಯಶಸ್ಸು.  ರಫಾಯೆಲ್ ಕ್ರಿವೆಲ್ಲರೋ ನೀಡಿದ ಉತ್ತಮ ಪಾಸ್ ತಂಡಕ್ಕೆ ಮುನ್ನಡೆಗೆ ಬೇಕಾಗಿರುವ ಗೋಲನ್ನು ನೀಡಿತು.  ಅಂತಿಮ ಹಂತದಲ್ಲಿ ಟಾಟಾ ಪಡೆ ಸಿಡಿದ ಗೋಲಿನಿಂದ 1-1 ಅಂತರದಲ್ಲಿ ಪಂದ್ಯ ಡ್ರಾಗೊಂಡಿತು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?