ಬೆಂಗಳೂರು FC‌ಗೆ ಮಾಡು ಇಲ್ಲವೆ ಮಡಿ ಪಂದ್ಯ, ಗೋವಾಗೆ ಸೋಲುಣಿಸಲು ರೆಡಿ!

Published : Feb 20, 2021, 06:55 PM ISTUpdated : Feb 20, 2021, 06:56 PM IST
ಬೆಂಗಳೂರು FC‌ಗೆ ಮಾಡು ಇಲ್ಲವೆ ಮಡಿ ಪಂದ್ಯ, ಗೋವಾಗೆ ಸೋಲುಣಿಸಲು ರೆಡಿ!

ಸಾರಾಂಶ

ಪ್ಲೇ ಆಫ್ ಸ್ಥಾನಕ್ಕೇರಲು ಬೆಂಗಳೂರು ತಂಡಕ್ಕೆ ಕೊನೆಯ ಅವಕಾಶವೊಂದು ಎದುರಿಗಿದೆ. ಆದರೆ ಈ ಅವಕಾಶ ಬಳಿಸಿಕೊಂಡರೂ ಅದೃಷ್ಠ ಕೈಡಿಯಬೇಕು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಗೋವಾ(ಫೆ.20):   ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೆಚ್ಚಿನ ತಂಡಗಳಿಗೆ ಉಳಿದಿರುವುದು ಎರಡು ಪಂದ್ಯಗಳು ಮಾತ್ರ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಬೆಂಗಳೂರು ಎಫ್ ಸಿ, ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಎಫ್ ಸಿ ಗೋವಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕೇವಲ ಜಯ ಗಳಿಸಿದರೆ ಸಾಲದು ಸ್ಪರ್ಧೆಯಲ್ಲಿರುವ ಇತರ ತಂಡಗಳ ಅಂಕವೂ ಕುಸಿದರೆ ಮಾತ್ರ ಬೆಂಗಳೂರಿನ ಸುಗಮವಾಗಬಹುದು.

ಐಎಸ್‌ಎಲ್‌: ಮುಂಬೈ ವಿರುದ್ದ ಬಿಎಫ್‌ಸಿಗೆ ಭರ್ಜರಿ ಗೆಲುವು, ಸೆಮೀಸ್ ಕನಸು ಜೀವಂತ.

ಬೆಂಗಳೂರು ತಂಡದ ಕೋಚ್ ನೌಷಾದ್ ಮೂಸಾ ತಮ್ಮ ತಂಡ ಗೋವಾದ ವಿರುದ್ಧದ ಪಂದ್ಯದ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಸಿಲುಕಿಲ್ಲ ಎಂದಿದ್ದಾರೆ. ನಾವು ಪ್ಲೇ ಆಫ್ ಹಂತ ತಲುಪುವುದರ ಬಗ್ಗೆ ಯಾವುದೇ ರೀತಿಯ ಒತ್ತಡಕ್ಕೆ ಸಿಲುಕಿಲ್ಲ. ಜಯ ಗಳಿಸಿದರೆ ನಾವು ಪ್ಲೇ ಆಫ್ ಹತ್ತಿರಕ್ಕೆ ತಲಪುವೆವು. ಕೇವಲ ಜಯ ಗಳಿಸಬೇಕೆಂಬ ಹತಾಶೆಯು ಕೆಲವೊಮ್ಮೆ ಯೋಜನೆಗಳನ್ನು ಹಾಳು ಮಾಡುತ್ತದೆ. ನಾವು ತಾಳ್ಮೆಯಿಂದ ನಮ್ಮ ಆಟದ ಕಡೆಗೆ ಗಮನಹರಿಸಲಿದ್ದೇವೆ ಎಂದು ಮೂಸಾ ಹೇಳಿದರು.

ಬಿಎಫ್ ಸಿ ತಂಡ ನಾಳೆ ಎದುರಿಸಲಿರುವ ತಂಡ ಲೀಗ್ ನಲ್ಲೇ ಉತ್ತಮ ದಾಳಿ ಮಾಡಬಲ್ಲ ತಂಡ. ಗೋವಾ ಗಳಿಸಿರುವ 26 ಗೋಲುಗಳಲ್ಲಿ  16 ಗೋಲುಗಳು ದ್ವಿತಿಯಾರ್ಧದಲ್ಲಿ ದಾಖಲಾಗಿರುವುದು, ಕೊನೆಯ 15 ನಿಮಿಷಗಳಲ್ಲಿ ಗೋವಾ 10 ಗೋಲುಗಳನ್ನು ಗಳಿಸಿದೆ. “ಅವರು ಚೆಂಡನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಬಲ್ಲರು. ಅದು ನಮಗೆ ಸುಲಭವಾದುದಲ್ಲ. ಅವರು ಕೊನೆಯ ಕ್ಷಣದಲ್ಲಿ ಗೋಲು ಗಳಿಸುತ್ತಿದ್ದಾರೆ, ಈ ಬಗ್ಗೆ ನಾವು ಎಚ್ಚರವಹಿಸಬೇಕು,” ಎಂದು ಮೂಸಾ ಹೇಳಿದರು.

ಒಡಿಶಾ ವಿರುದ್ಧದ ಜಯದ ಮೂಲಕ ಲಯ ಕಂಡುಕೊಂಡ ಗೋವಾ ಅದೇ ರೀತಿಯಲ್ಲಿ ಮುಂದುವರಿಯುವ ಗುರಿ ಹೊಂದಿದೆ. ಇದಕ್ಕೂ ಮುನ್ನ ಗೋವಾ ಸತತ ಆರು ಪಂದ್ಯಗಳಲ್ಲಿ ಡ್ರಾ ಕಂಡಿತ್ತು. ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗ, ಗೋವಾ ತಂಡ ನಾರ್ಥ್ ಈಸ್ಟ್ ಮತ್ತು ಹೈದರಾಬಾದ್ ಜತೆ ಸಮಾನ ರೀತಿಯಲ್ಲಿ ಅಂಕ ಹಂಚಿಕೊಂಡಿದೆ.

ತಂಡದ ಚಿಂತೆಯ ವಿಷಯವೆಂದರೆ ಕಳೆದ ಏಳು ಪಂದ್ಯಗಳಲ್ಲಿ ತಂಡ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಜಯಕ್ಕಿಂತ ಬೇರೆ ಯಾವುದೇ ಫಲಿತಾಂಶ ತಂಡದ ಪ್ಲೇ ಆಫ್ ಆಸೆಯನ್ನು ಕಸಿದುಕೊಳ್ಳಲಿದೆ. ಎರಡೂ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡಿರುವುದರಿಂದ ಗೋವಾದ ಕೋಚ್ ಜುವಾನ್ ಫೆರಾಂಡೋ ಹಲವಾರು ಅಂಶಗಳ ಕಡೆಗೆ ಗಮನ ಹರಿಸಿದ್ದಾರೆ,

“ಅವರಿಗೂ ಮತ್ತು ನಮಗೂ ನಾಳೆಯ ಪಂದ್ಯ ಕಠಿಣವೆನಿಸಿದೆ. ಮೂರು ಅಂಕಗಳನ್ನು ಗಳಿಸುವುದು ಪ್ರಮುಖವಾಗಿದೆ. ಮೂರು ಅಂಕಗಳಿಂದ ನಮಗೆ ಪ್ಲೇ ಆಫ್ ತಲುಪಲು ಸಾಕಷ್ಟು ಅವಕಾಶ ಸಿಗುತ್ತದೆ. ಬೆಂಗಳೂರಿಗೆ ಮುಂದಿನ  ಎರಡು ಪಂದ್ಯಗಳಲ್ಲಿ ಆರು ಅಂಕ ಬೇಕಾಗಿದೆ. ಸಮಾನ ಮನಸ್ಕ ತಂಡಗಳಾದ ಕಾರಣ ನಾಳೆಯ ಪಂದ್ಯ ಉತ್ತಮ ಪಂದ್ಯವಾಗಲಿದೆ. ಇದೊಂದು ಭಾವನಾತ್ಮಕ ಪಂದ್ಯವಾಗಲಿದೆ,” ಎಂದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?