Vijayapura: ರಂಜಾನ್‌ ಹಿನ್ನೆಲೆ ಪ್ರಯುಕ್ತ ಗುಮ್ಮಟನಗರಿಯಲ್ಲಿ ನಂದಿನಿ‌ ಹಾಲಿಗೆ ಹೆಚ್ಚಿದ ಬೇಡಿಕೆ!

Published : May 01, 2022, 08:14 PM IST
Vijayapura: ರಂಜಾನ್‌ ಹಿನ್ನೆಲೆ ಪ್ರಯುಕ್ತ ಗುಮ್ಮಟನಗರಿಯಲ್ಲಿ ನಂದಿನಿ‌ ಹಾಲಿಗೆ ಹೆಚ್ಚಿದ ಬೇಡಿಕೆ!

ಸಾರಾಂಶ

⦁ ಹಾಲಿನ ಬೇಡಿಕೆ ಪೂರೈಸಲು ಕ್ರಮ ಕೈಗೊಂಡ ಕೆಎಂಎಫ್..! ⦁ ‌ಹೆಚ್ಚುವರಿ 1.75 ಲಕ್ಷ ಲೀಟರ್‌ ಹಾಲು ಆಮದು.! ⦁ ಕೋವಿಡ್‌ ಸಮಯದಲ್ಲೂ ಲಾಭದಲ್ಲಿದ್ದ ಕೆಎಂಎಫ್..!

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯಪುರ

ವಿಜಯಪುರ (ಮೇ.01): ರಂಜಾನ್‌ ಹಬ್ಬದಂದು (Ramadan Festival) ಮುಸ್ಲಿಂ (Muslim) ಸಮುದಾಯದವರು ಸುರುಕುಂಬಾ ಮಾಡೋದು ಕಾಮನ್.‌ ಈ ಸುರಕುಂಬಾವನ್ನ ಹಾಲಿನಲ್ಲೆ ಮಾಡೋದ್ರಿಂದ ರಂಜಾನ್‌ ದಿನ ಹಾಲಿಗೆ (Milk) ಬಹುಬೇಡಿಕೆ ಉಂಟಾಗುತ್ತೆ. ಇದನ್ನ ಅರಿತ ವಿಜಯಪುರ (Vijayapura) ಕೆ.ಎಂ.ಎಫ್‌ (KMF) ಸಂಸ್ಥೆ ಹೆಚ್ಚಿನ ಪ್ರಮಾಣದ ಹಾಲನ್ನ ಆಮದು ಮಾಡಿಕೊಂಡಿದೆ.

1.75 ಲಕ್ಷ ಲೀಟರ್‌ ಹಾಲು ಆಮದು: ವಿಜಯಪುರದಲ್ಲಿ ಮುಸ್ಲಿಂ ಸಮಾಜದವರು ರಂಜಾನ್‌ ಹಬ್ಬವನ್ನ ಅದ್ದೂರಿಯಾಗಿ ಆಚರಿಸ್ತಾರೆ. ಈ ಹಬ್ಬದ ಹಿನ್ನೆಲೆ ಪ್ರತಿಯೊಬ್ಬ ಮುಸ್ಲಿಂರ ಮನೆಯಲ್ಲಿ ಸುರಕುಂಬ ಮಾಡುತ್ತಾರೆ. ಇದನ್ನು ಮನಗಂಡ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ KMF ಸಂಸ್ಥೆಯವರು ಹೆಚ್ಚಿನ ಹಾಲನ್ನು ಬೇರೆ ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಂಡಿದ್ದಾರೆ. ವಿಜಯಪುರದ ಕೆಎಂಎಫ್ ಸಂಸ್ಥೆ ಪ್ರತಿ ದಿನ 1 ಲಕ್ಷ 70 ಸಾವಿರ ಲೀಟರ್ ದಷ್ಟು ಹಾಲನ್ನು ಮಾರಾಟ ಮಾಡುತ್ತೆ. ಆದರೆ ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಹಾಲಿನ ಬೇಡಿಕೆ ಹೆಚ್ಚಾಗುವದನ್ನು ಮನಗಂಡು ಶಿವಮೊಗ್, ಮೈಸೂರು, ಮಂಡ್ಯ, ಧಾರವಾಡ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಿಂದ 1 ಲಕ್ಷ 70 ಸಾವಿರ್ ಲೀಟರ ಹಾಲನ್ನು ಆಮದು ಮಾಡಿಕೊಂಡಿದ್ದಾರೆ.

Basava Jayanti 2022: ಬಸವನ ಬಾಗೇವಾಡಿಯಲ್ಲಿ ಮೂರು ದಿನಗಳ ಕಾಲ ಬಸವ ಜಯಂತಿ ಆಚರಣೆ!

ಕೋವಿಡ್‌ ವೇಳೆಯು ಹಬ್ಬದಲ್ಲಿ ಹಾಲಿಗೆ ಬೇಡಿಕೆ ಇತ್ತು: ಕೋವಿಡ್ ಸಂದರ್ಭದಲ್ಲಿ ಕಳೆದ ಎರಡು ವರ್ಷವೂ ಸಹಿತ ಹಾಲಿನ ಬೇಡಿಕೆ ಕಡಿಮೆಯಾಗಿರಲಿಲ್ಲ. ಆಗಲು ಸಹಿತ 2 ಲಕ್ಷ 25 ರಿಂದ 2 ಲಕ್ಷ 30 ಸಾವಿರ ಲಿಟರ್ ಹಾಲು ಮಾರಾಟ ಮಾಡಲಾಗಿತ್ತು. ಹಬ್ಬವನ್ನ ಸಿಂಪಲ್ಲಾಗಿಯೇ ಆಚರಣೆ ಮಾಡಿದ್ದರು. ಮನೆಗಳಲ್ಲಿ ಹಬ್ಬದ ಅದ್ದೂರಿಗೆ ಕಡಿಮೆ ಇರಲಿಲ್ಲ. ಪ್ರತಿ ವರ್ಷದಂತೆ ಕೋವಿಡ್‌ ಸಮಯದಲ್ಲು ಸುರಕುಂಬಾ ಮಾಡಿದ್ದರು. ಹೀಗಾಗಿ ಹಾಲಿನ ಬೇಡಿಕೆ ತಗ್ಗಿರಲಿಲ್ಲ.

3 ಲಕ್ಷ ಲೀಟರ್‌ ಹಾಲು ಮಾರಾಟವಾಗೋ ಗುರಿ: ಈ ಬಾರಿ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ 3 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಖಾಸಗಿಯಾಗಿ ಹಾಲಿನ ದರ ಹೆಚ್ಚಾದ ಕಾರಣ ಈ ಬಾರಿ 2 ಲಕ್ಷ 70 ಸಾವಿರ ಲಿಟರ್ ದಿಂದ 3 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಇನ್ನೂ 1 ಲಕ್ಷ 70 ಸಾವಿರ ಲೀಟರ್ ಹಾಲನ್ನು ನಾವು ವಿಜಯಪುರ ಜಿಲ್ಲೆಯಲ್ಲಿಯೇ ಶೇಖರಣೆ ಮಾಡುತ್ತಿದ್ದು, ಇನ್ನೂಳಿದ ಹಾಲನ್ನು ಬೇರೆ ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಎಮ್‌ಎಫ್‌ ಎಂ ಡಿ ದಿಕ್ಷೀತ್‌ ಮಾಹಿತಿ ನೀಡಿದ್ದಾರೆ.

ವಿಜಯಪುರ: ಪ್ರಾಣದ ಹಂಗು ತೊರೆದು ರಾಷ್ಟ್ರ ಪಕ್ಷಿಯ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ...!

ಬಾರಿ ಲಾಭ ಗಳಿಸುವ ನಿರೀಕ್ಷೆಯಲ್ಲಿ ಕೆಎಂಎಫ್: ಕೋವಿಡ್‌ ಸಂದರ್ಭದಲ್ಲಿ ಹಬ್ಬಗಳು ಡಲ್‌ ಆಗಿದ್ದವು. ಬೇರೆ ವ್ಯಾಪಾರ ಉದ್ಯಮಗಳ ಮೇಲೆ ಬಾರಿ ಹೊಡೆತ ಬಿದ್ದಿತ್ತು. ಆದ್ರೆ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿರುವ ಕೆ.ಎಂ.ಎಫ್ ಸಂಸ್ಥೆ ಕೋವಿಡ್ ಸಂದರ್ಭದಲ್ಲಿ ಸಹಿತ ಲಾಭದಲ್ಲಿತ್ತು ಅನ್ನೋದೆ ವಿಶೇಷ.

PREV
Read more Articles on
click me!

Recommended Stories

ಆದಿತ್ಯ ಮಂಗಳ ಯೋಗದಿಂದ ಫುಲ್‌ ಅದೃಷ್ಟ, ಫೆಬ್ರವರಿ 26 ರವರೆಗೆ 4 ರಾಶಿಗೆ ರಾಜಯೋಗ
ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ