MahaShivratri 2023ಯಂದೇ ಶನಿ ಪ್ರದೋಷ ವ್ರತ; ಶನಿ ದೋಷ ನಿವಾರಣೆಗೆ ಸುದಿನ

By Suvarna NewsFirst Published Feb 15, 2023, 10:52 AM IST
Highlights

ಈ ವರ್ಷ, ಶಿವರಾತ್ರಿಯಂದು ಅಪರೂಪದ ಯೋಗವು ರೂಪುಗೊಳ್ಳುತ್ತಿದೆ. ಹೌದು, ಮಹಾಶಿವರಾತ್ರಿಯ ದಿನವೇ ಶನಿ ಪ್ರದೋಷ ವ್ರತವೂ ಬರಲಿದೆ. ಶನಿಯ ದೋಷಗಳಿಂದ ಬಳಲುತ್ತಿರುವವರಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಅತ್ಯುತ್ತಮ ದಿನವಾಗಿದೆ. 

ಮಹಾಶಿವರಾತ್ರಿಯ ದಿನವನ್ನು ಭೋಲೆನಾಥನ ಆರಾಧನೆಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಶಿವ ಭಕ್ತರು ವರ್ಷವಿಡೀ ಮಹಾಶಿವರಾತ್ರಿಗಾಗಿ ಕಾತರದಿಂದ ಕಾಯುತ್ತಾರೆ. ಈ ವರ್ಷ ಮಹಾಶಿವರಾತ್ರಿಯ ಹಬ್ಬವನ್ನು 18 ಫೆಬ್ರವರಿ 2023ರಂದು ಆಚರಿಸಲಾಗುತ್ತದೆ. ಈ ವರ್ಷ ಶಿವರಾತ್ರಿಯಂದು ವರ್ಷಗಳ ನಂತರ ಅಪರೂಪದ ಯೋಗವು ರೂಪುಗೊಳ್ಳುತ್ತಿದೆ, ಇದರಲ್ಲಿ ಶಿವನನ್ನು ಆರಾಧಿಸುವ ಮೂಲಕ ಶನಿದೇವನ ವಿಶೇಷ ಆಶೀರ್ವಾದವೂ ದೊರೆಯುತ್ತದೆ. ಮಹಾಶಿವರಾತ್ರಿಯಂದು(Mahashivratri 2023) ಶನಿದೇವನನ್ನು ಪೂಜಿಸುವ ಕಾಕತಾಳೀಯ ಏನೆಂದು ತಿಳಿಯೋಣ.

ಮಹಾಶಿವರಾತ್ರಿಯಂದು ಶನಿ ಪ್ರದೋಷ ವ್ರತ(Shani Pradosh Vrat)
ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕ ಅಂದರೆ ಮಹಾಶಿವರಾತ್ರಿ ಈ ವರ್ಷ ಫೆಬ್ರವರಿ 18, 2023 ರಂದು. ಈ ದಿನ ಶನಿ ತ್ರಯೋದಶಿ ತಿಥಿ ಅಂದರೆ ಶನಿ ಪ್ರದೋಷ ವ್ರತ ಕೂಡ ಸೇರಿಕೊಳ್ಳುತ್ತದೆ. ಪ್ರದೋಷ ವ್ರತ ಮತ್ತು ಶಿವರಾತ್ರಿ ಎರಡೂ ಶಿವನಿಗೆ ಬಹಳ ಪ್ರಿಯ. ಮತ್ತೊಂದೆಡೆ, ಈ ವರ್ಷ ಮಹಾಶಿವರಾತ್ರಿಯಂದು, ಶನಿದೇವನು ತನ್ನದೇ ಆದ ರಾಶಿಚಕ್ರ ಕುಂಭದಲ್ಲಿ ಕುಳಿತಿದ್ದಾನೆ. ಈ ಎರಡೂ ಸಂಯೋಜನೆಗಳಲ್ಲಿ, ಶನಿದೇವನ ಆರಾಧಕನು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ.

Latest Videos

Mahashivratri 2023: ಶಿವನ ನೆಚ್ಚಿನ ಈ ಹೂವಿನಿಂದ ಪೂಜಿಸಿದರೆ ಪಾಪ ದೋಷಗಳಿಂದ ಮುಕ್ತಿ

ಶಿವನನ್ನು ಶನಿದೇವನ ಗುರು ಎಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿ ಮತ್ತು ಶನಿ ಪ್ರದೋಷ ವ್ರತದ ಜೊತೆಯಲ್ಲಿ  ಬಂದಿರುವುದರಿಂದ ಅಂದು ಶನಿ- ಶಿವನನ್ನು ಪೂಜಿಸುವುದರಿಂದ ಜಾತಕದಿಂದ ಶನಿ ದೋಷ ನಿವಾರಣೆಯಾಗುತ್ತದೆ. ಶನಿಯನ್ನು ಮೆಚ್ಚಿಸಲು, ಮಹಾಶಿವರಾತ್ರಿಯಂದು ಶಿವಲಿಂಗದ ಮೇಲೆ ಶಮಿ ಪತ್ರವನ್ನು ಅರ್ಪಿಸಿ ಮತ್ತು ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ. ಇದರಿಂದ ಶನಿ ಮಹಾದಶಾ, ಸಾಡೇ ಸಾತಿ ಮತ್ತು ಧೈಯದ ನಕಾರಾತ್ಮಕ ಪರಿಣಾಮಗಳಿಂದ ಮುಕ್ತಿ ದೊರೆಯುತ್ತದೆ.

ಮಾಘ ಕೃಷ್ಣ ಪಕ್ಷ ತ್ರಯೋದಶಿ ದಿನಾಂಕ ಪ್ರಾರಂಭ - 17 ಫೆಬ್ರವರಿ 2023, ರಾತ್ರಿ 11.36
ಮಾಘ ಕೃಷ್ಣ ಪಕ್ಷ ತ್ರಯೋದಶಿ ದಿನಾಂಕ ಕೊನೆ- 18 ಫೆಬ್ರವರಿ 2023, 08.02 pm
ಶನಿ ಪ್ರದೋಷ ವ್ರತ ಪೂಜೆಯ ಮುಹೂರ್ತ - ಸಂಜೆ 06.21 - ರಾತ್ರಿ 08.02 (18 ಫೆಬ್ರವರಿ 2023)

Mahashivratri 2023: ಶಿವನಿಗೆ ತುಳಸಿ, ಅರಿಶಿನ, ಕುಂಕುಮ ಬಳಸಿ ಪೂಜಿಸಬಾರದು, ಇಲ್ಲಿದೆ ಕಾರಣ..

ಮಹಾ ಶಿವರಾತ್ರಿಯಂದು ಶನಿ ದೋಷ ನಿವಾರಣೆಗೆ ಪರಿಹಾರಗಳು(Shani dosh remedies) 
ಮಹಾಶಿವರಾತ್ರಿಯಂದು ಶನಿಯನ್ನು ಒಲಿಸಿಕೊಳ್ಳಲು ಗಂಗಾನದಿಯ ನೀರಿನಲ್ಲಿ ಕಪ್ಪು ಎಳ್ಳನ್ನು ಹಾಕಿ ಮಹಾದೇವನಿಗೆ ರುದ್ರಾಭಿಷೇಕ ಮಾಡಿ. ಅಭಿಷೇಕದ ಸಮಯದಲ್ಲಿ ಶಿವ ಸಹಸ್ರನಾಮ ಪಠಿಸಿ. ಇದು ಶನಿಯ ದೋಷವನ್ನು ಕಡಿಮೆ ಮಾಡುತ್ತದೆ ಮತ್ತು ಸಾಧಕರು ಶಿವನ ಅನುಗ್ರಹಕ್ಕೆ ಅರ್ಹರಾಗುತ್ತಾರೆ.
ಶನಿಯ ಕೋಪವನ್ನು ತಪ್ಪಿಸಲು, ಮಹಾಶಿವರಾತ್ರಿಯ ದಿನ, ಶುಭ ಸಮಯದಲ್ಲಿ ಬೇಲ್ಪತ್ರ ಮರದ ಕೆಳಗೆ ಖೀರ್ ಅನ್ನು ಬಡವರಿಗೆ ತಿನ್ನಿಸಿ. ಶಿವ ಚಾಲೀಸಾ ಪಠಿಸಿ.
ಶಿವಲಿಂಗದ ಮೇಲೆ ಬೇಲ್ಪತ್ರ ಮತ್ತು ಶಮಿ ಹೂವನ್ನು ಅರ್ಪಿಸಿ. ಶನಿ ದೋಷದ ಋಣಾತ್ಮಕ ಪರಿಣಾಮಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ.
ಮಹಾಶಿವರಾತ್ರಿಯ ದಿನದಂದು ಶಿವಾಲಯದಲ್ಲಿ ಭೋಲೇನಾಥನಿಗೆ ತನ್ನ ನೆಚ್ಚಿನ ಆಯುಧವಾದ ತ್ರಿಶೂಲವನ್ನು ಅರ್ಪಿಸಿ. ಇದು ಕಬ್ಬಿಣದ್ದಾಗಿರಲಿ. ಇದರೊಂದಿಗೆ ಶನಿಗೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ. ವಿಶೇಷವಾಗಿ ಕಪ್ಪು ಉದ್ದಿನ ಬೇಳೆ, ಕಪ್ಪು ಎಳ್ಳು, ಸಾಸಿವೆ ಎಣ್ಣೆಯನ್ನು ಈ ದಿನ ದಾನ ಮಾಡಬೇಕು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!