ಅಬ್ಬಬ್ಬಾ! ಮನೆಯಂಗಳದಲ್ಲೇ ತೆಂಗಿನಮರವಿದ್ದರೆ ಎಷ್ಟೆಲ್ಲ ಲಾಭಗಳು!

By Suvarna NewsFirst Published Aug 18, 2022, 10:43 AM IST
Highlights

ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಮನೆ ಎಂದ ಮೇಲೆ ಅಂಗಳ, ಹಿತ್ತಲು ಎಲ್ಲೆಡೆ ಕನಿಷ್ಠ ಎರಡಾದರೂ ತೆಂಗಿನಮರವಿರುತ್ತದೆ. ಇದು ಮನೆಯ ಭಾಗವೇ ಎನ್ನುವಷ್ಟು ಸಾಮಾನ್ಯವಾಗಿದೆ. ತೆಂಗಿನ ಮರ ಬೆಳೆಸುವುದಕ್ಕೆ ವಾಸ್ತು ಮತ್ತು ಜ್ಯೋತಿಷ್ಯ ಎರಡರಲ್ಲೂ ಮಹತ್ವವಿದೆ. ಆರ್ಥಿಕವಾಗಿಯೂ ಇದರ ಲಾಭಗಳು ಹೆಚ್ಚು..

ಮನೆಯಲ್ಲಿ ತೆಂಗಿನ ಮರವನ್ನು ಬೆಳೆಸುವುದನ್ನು ಜ್ಯೋತಿಷ್ಯ ಮತ್ತು ವಾಸ್ತುವಿನಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ ತೆಂಗಿನ ಮರಗಳು ಸರ್ವೇ ಸಾಮಾನ್ಯ. ಯಾವುದೇ ದೇವಸ್ಥಾನಕ್ಕೆ ಹೋದರೂ, ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಒಡೆದು ಪೂಜಿಸಲಾಗುತ್ತದೆ. ಏಕೆಂದರೆ, ಮನುಷ್ಯ ದೇವರಿಗೆ ಮುಟ್ಟದೆ, ಗಲೀಜಾಗಿಸದೇ ಕೊಡಬಹುದಾದ ಏಕೈಕ ಫಲ ಇದಾಗಿದೆ. ಹಾಗಾಗಿ, ತೆಂಗಿನಕಾಯಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿ, ಮರ, ಅದರ ಇತರ ಎಲ್ಲ ಭಾಗಗಳು, ರೂಪಗಳು ಕೂಡಾ ಅತ್ಯಂತ ಪ್ರಯೋಜನಕಾರಯಾಗಿವೆ. ಹಾಗಾಗಿಯೇ ಇದನ್ನು ಕಲ್ಪವೃಕ್ಷ ಎನ್ನುವುದು. 

ಮನೆಯಲ್ಲಿ ಐಶ್ವರ್ಯಕ್ಕಾಗಿ ವಾಸ್ತು ಹೇಳಿದಂತೆ ಹಲವು ಬಗೆಯ ಮರಗಳನ್ನು ನೆಡುತ್ತೇವೆ. ಅಂತೆಯೇ ಮನೆಯಲ್ಲಿ ತೆಂಗಿನ ಮರಗಳನ್ನು ನೆಡುವುದರಿಂದ ನಾವು ಯಾವ ರೀತಿಯ ಪ್ರಯೋಜನ ಪಡೆಯಬಹುದು ಎಂಬುದನ್ನು ನೋಡೋಣ. 

ತೆಂಗಿನ ತೊಗಟೆಯು ಮನೆ ನಿರ್ಮಿಸಲು ಸಹಾಯ ಮಾಡುತ್ತದೆ. ತೆಂಗಿನಕಾಯಿ ತೊಗಟೆ ಒಣಗಿದಾಗ ಅದನ್ನು ಕತ್ತರಿಸಿ ಮನೆಯ ಮೇಲ್ಛಾವಣಿ ಮಾಡುತ್ತಾರೆ. ಇದರೊಂದಿಗೆ ತೆಂಗಿನ ಮರ ಮತ್ತು ಅದರ ತೊಗಟೆಯಿಂದಲೂ ಗುಡಿಸಲುಗಳನ್ನು ತಯಾರಿಸಲಾಗುತ್ತದೆ.

Zodiac Sign: ಈ ರಾಶಿಗಳ ಜನರಿಗೆ ಪ್ರೀತಿಯ ಆರಂಭದಲ್ಲಿರೋ ಉಮೇದಿ ಮುಂದೆ ಇರೋದಿಲ್ಲ, ಎಚ್ಚರಿಕೆ

ಎಳನೀರು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಎಳನೀರನ್ನು ಕುಡಿಯುವುದರಿಂದ, ಅದರ ಕಾಯನ್ನು ತಿನ್ನುವ ಮೂಲಕ ನಮ್ಮ ಹಸಿವನ್ನು ತಗ್ಗಿಸಿಕೊಳ್ಳಬಹುದು. ಕಾಯಿಯಿಂದ ಸಾಕಷ್ಟು ಅಡುಗೆ ಪದಾರ್ಥ ಕೂಡಾ ತಯಾರಿಸಬಹುದು. ಪೊಟ್ಯಾಸಿಯಮ್, ಖನಿಜಗಳು, ಫೈಬರ್ ತೆಂಗಿನಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ತೆಂಗಿನ ಹಣ್ಣನ್ನು ಒಣಗಿದ ಅಥವಾ ಮೃದು ರೂಪದಲ್ಲಿ ಬಳಸಬಹುದು. ಒಣ ಕೊಬ್ಬರಿ ಎಣ್ಣೆ ತಯಾರಿಸಿ ಅಡುಗೆಗೂ, ಕೂದಲು, ಚರ್ಮಕ್ಕೂ ಬಳಸಬಹುದು.

ಅಗತ್ಯಕ್ಕೆ ತಕ್ಕಂತೆ ತೆಂಗಿನ ಮರದಿಂದ ಮನೆಗೆ ಬೇಕಾದ ಪೀಠೋಪಕರಣಗಳನ್ನೂ ತಯಾರಿಸಿಕೊಳ್ಳಬಹುದು. ಅವುಗಳ ಒಣಗಿದ ಎಲೆಗಳಿಂದ ಚಾಪೆ, ಫ್ಯಾನ್, ಬುಟ್ಟಿ ಇತ್ಯಾದಿಗಳನ್ನು ತಯಾರಿಸಬಹುದು. ಇದರೊಂದಿಗೆ, ಅದರ ಒಣಗಿದ ನಾರಿನಿಂದ ಹಗ್ಗವನ್ನು ಮಾಡಬಹುದು. ತೆಂಗಿನಕಾಯಿಯ ಒಣಗಿದ ತೊಗಟೆಯಿಂದ ಬ್ರಷ್ ಮತ್ತು ಚೀಲಗಳನ್ನು ಸಹ ತಯಾರಿಸಲಾಗುತ್ತದೆ. ಗುಡಿಸುವ ಪೊರಕೆ ಮಾಡಿಕೊಳ್ಳಬಹುದು.

ಜ್ಯೋತಿಷ್ಯ ಪರಿಹಾರಗಳು
ವ್ಯವಹಾರದಲ್ಲಿ ನಷ್ಟ

ನೀವು ವ್ಯವಹಾರದಲ್ಲಿ ನಿರಾಶೆಗೊಂಡಿದ್ದರೆ, ಸಾಲು ಸಾಲು ಸೋಲು ನೋಡುತ್ತಿದ್ದರೆ, ಮನೆಯ ಅಂಗಳದಲ್ಲಿ ತೆಂಗಿನ ಮರವನ್ನು ನೆಡಬೇಕು. ಹೀಗೆ ಮಾಡುವುದರಿಂದ ವ್ಯವಹಾರದಲ್ಲಿನ ಅಡೆತಡೆಗಳು ದೂರವಾಗುತ್ತವೆ. ತೆಂಗಿನಕಾಯಿ ಪ್ರತಿಯೊಂದು ರೂಪದಲ್ಲೂ ಬಹಳ ಪ್ರಯೋಜನಕಾರಿಯಾಗಿದೆ.

ದೃಷ್ಟಿ ಅಥವಾ ಮಾಟವಾಗಿದ್ದರೆ
ನಿಮ್ಮ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಪ್ರಯೋಗಿಸಲಾಗಿದ್ದರೆ, ದೇವಸ್ಥಾನಕ್ಕೆ  ಹೋಗಿ ತೆಂಗಿನಕಾಯಿಯನ್ನು ತೆಗೆದುಕೊಂಡು 21 ಬಾರಿ ಸುಡಬೇಕು. ಆದರೆ ಒಂದು ವಿಷಯ ಗಮನದಲ್ಲಿರಲಿ, ತೆಂಗಿನಕಾಯಿಯಲ್ಲಿ ನೀರಿರಬೇಕು ಮತ್ತು ಯಾವುದೇ ಮಂಗಳವಾರ ಮತ್ತು ಶನಿವಾರದಂದು ಮಾತ್ರ ಈ ಪರಿಹಾರ ಆಚರಿಸಬೇಕು. ಬೇರೆ ಯಾವುದೇ ದಿನ ಮಾಡಿದರೆ ಫಲ ಸಿಗುವುದಿಲ್ಲ.

ಭಾವನೆಗಳನ್ನು ಮುಚ್ಚಿಡೋದ್ರಲ್ಲಿ ಈ ರಾಶಿಯವ್ರು ಎಕ್ಸ್‌ಪರ್ಟ್ಸ್!

ಸಾಲಬಾಧೆ
ಸಾಲದಿಂದ ಮುಕ್ತಿ ಹೊಂದಲು ಸಾಧ್ಯವಾಗದಿದ್ದರೆ ಮನೆಯ ಅಂಗಳದಲ್ಲಿ ತೆಂಗಿನ ಮರವನ್ನು ನೆಡಬಹುದು. ತೆಂಗಿನ ಮರವನ್ನು ನೆಡುವಾಗ, ತೆಂಗಿನ ಮರವನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು ಎಂಬುದನ್ನು ನೆನಪಿನಲ್ಲಿಡಿ. ತೆಂಗಿನ ಮರವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬೇಕು. ಇದು ಮನೆಯಲ್ಲಿ ಸ್ಥಿರತೆ ಮತ್ತು ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತದೆ.

click me!