ನಿಮ್ಮ ರಾಶಿಗೆ ಯಾವುದರಿಂದ ಮೃತ್ಯುಭಯ? ಪರಿಹಾರವೇನು?

By Suvarna NewsFirst Published Aug 3, 2021, 4:53 PM IST
Highlights

ನಿಮ್ಮ ರಾಶಿಗೆ ತಕ್ಕಂತೆ ಮೃತ್ಯುಭಯ ನಿಮಗಿದ್ದೇ ಇರುತ್ತದೆ. ಆದರೆ ಇಷ್ಟದೇವರ ಆರಾಧನೆಯಿಂದ, ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ, ನಿಮ್ಮನ್ನು ಅಪಮೃತ್ಯು, ಅಕಾಲಮೃತ್ಯುಗಳಿಂದ ರಕ್ಷಿಸಿಕೊಳ್ಳಬಹುದು.

ಪ್ರತಿಯೊಬ್ಬನಿಗೂ ಒಂದು ಜನನರಾಶಿ, ಅದಕ್ಕೆ ಒಬ್ಬ ರಾಶ್ಯಾಧಿಪತಿ ಇರುತ್ತಾನೆ. ಹಾಗೇ ಆ ರಾಶಿಗೆ ಹೊಂದುವ ಗುಣ ಕೂಡ ಇರುತ್ತದೆ. ಬೆಂಕಿ, ಗಾಳಿ, ನೀರು, ಭೂಮಿ, ಆಕಾಶ- ಈ ಪಂಚಭೂತಗಳಲ್ಲಿ ಒಂದು ನಿಮ್ಮದಾಗಿರುತ್ತೆ. ನಿಮ್ಮ ರಾಶಿಗೆ ತಕ್ಕಂತೆ ಮೃತ್ಯುಭಯ ನಿಮಗಿದ್ದೇ ಇರುತ್ತದೆ. ಆದರೆ ಇಷ್ಟದೇವರ ಆರಾಧನೆಯಿಂದ, ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ, ನಿಮ್ಮನ್ನು ಅಪಮೃತ್ಯು, ಅಕಾಲಮೃತ್ಯುಗಳಿಂದ ರಕ್ಷಿಸಿಕೊಳ್ಳಬಹುದು. ಶನಿ ಹಾಗೂ ಗುರುವಿನಂಥ ಗ್ರಹಗಳು ಸೂಕ್ತ ಸ್ಥಾನದಲ್ಲಿದ್ದು ನಿಮ್ಮನ್ನು ರಕ್ಷಿಸಿದರೆ, ನೀವು ಬಹುಕಾಲ ಆರೋಗ್ಯಕರವಾಗಿ ಬದುಕುವಿರಿ.

ಮೇಷ ರಾಶಿ

ಈ ರಾಶಿಗೆ ಅಪಾಯ ಬೆಂಕಿಯಿಂದ. ನಿಮಗೆ ಬೆಂಕಿ ಆಕಸ್ಮಿಕದ ಆತಂಕವಿದೆ. ಇದು ನಿಮ್ಮ ಇತರ ಗ್ರಹಗಳ ಸ್ಥಾನ, ಜೀವನಶೈಲಿಯನ್ನು ಅವಲಂಬಿಸಿರುತ್ತೆ. ನೀವು ಮಹಾವಿಷ್ಣುವನ್ನು ಆರಾಧಿಸಬೇಕು. ಓಂ ನಮೋ ಭಗವತೇ ವಾಸುದೇವಾಯ ಎಂಬ ಅಷ್ಟಾಕ್ಷರಿ ಮಂತ್ರವನ್ನು ಪ್ರತಿದಿನ ನೂರೆಂಟು ಬಾರಿ ಪಠಿಸಿದರೆ ಬಹುಕಾಲ ಆರೋಗ್ಯವಂತರಾಗಿರುವಿರಿ.

ವೃಷಭ ರಾಶಿ

ನಿಮ್ಮ ರಾಶಿಯ ಗುಣ ಭೂಮಿ. ಸಾಮಾನ್ಯವಾಗಿ ನೀವು ಹೃದಯಾಘಾತದ ಆತಂಕ ಹೊಂದಿರುವಿರಿ. ಅದೂ ಕೂಡ ತುಂಬು ಬಾಳನ್ನು ಬದುಕಿದ ನಂತರವೇ. ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರಬೇಕು. ಗಣೇಶ ನಿಮ್ಮ ರಾಶಿಯ ಆರಾಧ್ಯ ದೈವ. ಆತನನ್ನು ಆರಾಧಿಸಿ.

ಮಿಥುನ ರಾಶಿ

ನಿಮ್ಮ ಗುಣ ಗಾಳಿ. ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ಒನ್ಸ್ ಎಗೇಯ್ನ್, ಲೈಫ್‌ಸ್ಟೈಲ್‌ ಆರೋಗ್ಯಕರವಾಗಿ ಇದ್ದರೆ ಲಿವರ್‌ಗೆ ಏನೂ ಸಮಸ್ಯೆ ಆಗದು. ಆದರೆ ಔಷಧಗಳ ಓವರ್‌ಡೋಸ್‌ ಬಗ್ಗೆ ಎಚ್ಚರ ಅಗತ್ಯ. ಸರಸ್ವತಿ, ತಾರಾ, ಲಕ್ಷ್ಮಿ ಮುಂತಾದ ದೇವಿಯರನ್ನು ಆರಾಧಿಸಿ.

ಕಟಕ ರಾಶಿ

ನಿಮಗೆ ನೀರಿನಿಂದ ಅಪಾಯ ಹೆಚ್ಚು. ಮೂತ್ರಕೋಶ ಸಂಬಂಧಿತ ಕಾಯಿಲೆ, ಕಿಡ್ನಿ ಪ್ರಾಬ್ಲೆಮ್‌ಗಳು ನಿಮ್ಮನ್ನು ಕಾಡಬಹುದು. ಚೆನ್ನಾಗಿ ನೀರು, ದ್ರವಪದಾರ್ಥ ಕುಡಿಯುವುದು ಅಗತ್ಯ. ಆರಂಭದಿಂದಲೂ ಕಿಡ್ನಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು. ಹನುಮಾನ್ ಚಾಲೀಸ್ ಸದಾ ಪಠಿಸಿ.

ಸಿಂಹ ರಾಶಿ

ಬೆಂಕಿಯಿಂದ ಅಪಾಯ. ಮಾರಕ ರೋಗವೊಂದು ನಿಮ್ಮನ್ನು ಕಾಡಬಹುದು. ಧೂಮಪಾನ, ಮಧ್ಯಪಾನದಂಥ ಅಭ್ಯಾಸಗಳು ಇದ್ದರೆ ಅವುಗಳಿಂದ ದೂರ ಉಳಿಯಲು ಮನಸ್ಸು ಮಾಡಿ. ಶಿವನು ನಿಮ್ಮ ರಾಶಿಗೆ ಆರಾಧ್ಯ. ಅವನು ಸ್ಮಶಾನ ಭೈರವ. ನಂಬಿದವರನ್ನು ಕಾಪಾಡದೇ ಇರಲಾರದ ಭೋಳೇಶಂಕರ.

ಕನ್ಯಾ ರಾಶಿ

ನೀವು ಬಹಳ ಕಾಲ ಈ ಭೂಮಿಯ ಮೇಲೆ ಬದುಕಿರುತ್ತೀರಿ. ಸಹಜವಾಗಿಯೇ ನೀವು ಆಯುಷ್ಯಪೂರ್ತಿಯಾಗಿ ಬದುಕಬಹುದು. ಬಂಧುಬಳಗದ ಜೊತೆಗೆ ಕೊನೆಯ ಕಾಲವನ್ನು ಕಾಣುವ ಸುಯೋಗ ಇದೆ. ಹನುಮಾನ್ ಮತ್ತು ಕಾಳಿ ದೇವತೆಯರ ಆರಾಧನೆಯಿಂದ ತುಂಬು ಬದುಕು.

ತುಲಾ ರಾಶಿ

ನಿಮ್ಮ ಅಂತ್ಯಕಾಲದಲ್ಲಿ ಅತ್ಯಂತ ಆಪ್ತರು, ನಿಮ್ಮ ಜೀವನದಲ್ಲಿ ಸದಾ ಕಾಲ ನಿಮ್ಮ ಜೊತೆಗೆ ಇದ್ದವರು ಇಲ್ಲದೇ ಹೋಗುವಂಥ ಸನ್ನಿವೇಶ ಬರಬಹುದು. ಅವರಿದ್ದರೆ ನಿಮ್ಮನ್ನು ಉಳಿಸಿಕೊಳ್ಳಬಹುದು. ಹೀಗಾಗಿ ಸಂಗಾತಿಗಳನ್ನು ಪ್ರೀತಿಸಿ. ಆಂಜನೇಯನನ್ನು ಆರಾಧಿಸಿ.

ವೃಶ್ಚಿಕ ರಾಶಿ

ಉಸಿರುಗಟ್ಟಿ ಸಾಯುವ ಭಯವಿದೆ. ಇದು ಬಹಳ ಕಾರಣಗಳಿಂದ ಉಂಟಾಗಬಹುದು. ಕೆಲವೊಮ್ಮೆ ಸಹಜ ಸಾವು ಕೂಡ ಉಸಿರುಗಟ್ಟಿಯೇ ನಡೆಯುವುದಾಗಿರುತ್ತದೆ. ಇಕ್ಕಟ್ಟಾದ ಪ್ರದೇಶಗಳಲ್ಲಿ ಹುಷಾರಾಗಿರಬೇಕು. ಈಶ್ವರನನ್ನು ಆರಾಧಿಸಿ. ಶಿವಪಂಚಾಕ್ಷರಿ ಮಂತ್ರ ಪಠಿಸಿ.

ಧನು ರಾಶಿ

ಆತ್ಮಹತ್ಯೆಯ ಲಕ್ಷಣಗಳು ಇವೆ. ಆದರೆ ಇವರು ಉತ್ತಮ ಕುಟುಂಬ, ಹಣಕಾಸು ಹಾಗೂ ಒಳ್ಳೆಯ ಸಂಬಂಧಗಳನ್ನು ಹೊಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆಗಳಿಂದ ಜರ್ಝರಿತಗೊಂಡಾಗ ಈ ರಾಶಿಯವರು ಆತ್ಮಹತ್ಯೆ ಬಗ್ಗೆ ಯೋಚಿಸಲೇಬಾರದು. ಮಹಾಕಾಳಿಯನ್ನು ಆರಾಧಿಸಿ.

ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

ಮಕರ ರಾಶಿ

ಭೂಮಿ ಗುಣವನ್ನು ಹೊಂದಿರುವ ನಿಮಗೆ ಶತ್ರುಗಳಿಂದ ಸಾವು ಬರುವ ಸಾಧ್ಯತೆ ಇದೆ, ಇದಕ್ಕೆ ಸಿಂಪಲ್‌ ಪರಿಹಾರ ಎಂದರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ. ಸಿಟ್ಟು, ದುಡುಕು, ಮುಂಗೋಪ, ಬಾಯಿಚಪಲ, ಚಾಡಿಯಂಥ ಗುಣಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡರೆ ಒಳಿತು, ಹಿತಶತ್ರುಗಳೂ ಗಮನದಲ್ಲಿರಲಿ. ಸ್ಮಶಾನಭೈರವನನ್ನು ಪೂಜಿಸಿ.

ಕುಂಭ ರಾಶಿ

ಆಹಾರದಿಂದಲೇ ನಿಮಗೆ ತೊಂದರೆ. ಯಾವ ಆಹಾರ ಎಂದು ಚಿಂತಿಸಿ ಫಲವಿಲ್ಲ. ಅದು ನಿಮ್ಮ ಪ್ರೀತಿಯ ಆಹಾರವೇ ಆಗಿರಬಹುದು, ಅನಿಷ್ಟದ ಆಹಾರ ಕೂಡ ಇರಬಹುದು. ಆದರೆ ಹೊಟ್ಟೆಯ ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ. ದುರ್ಗಾದೇವಿಯನ್ನು ಸತತ ಆರಾಧಿಸುವುದರಿಂದ ಆರೋಗ್ಯಭಾಗ್ಯ.

ಯುಗಯುಗಾಂತರಗಳಷ್ಟು ಹಿರಿಯಾಕೆಯನ್ನು ಬಲರಾಮ ಮದುವೆಯಾಗಿದ್ದೇಕೆ?

ಮೀನ ರಾಶಿ

ಬದುಕನ್ನು ಪೂರ್ತಿಯಾಗಿ ರುಚಿ ನೋಡಿರುತ್ತೀರಿ. ಸಾಕಷ್ಟು ಹೆಸರು, ಹೊಗಳಿಕೆ ಸಿಕ್ಕಿರುತ್ತದೆ. ಬಂಧುಮಿತ್ರರು ಅಕ್ಕಪಕ್ಕದಲ್ಲಿರುವ ಚಾನ್ಸ್ ಇದೆ. ನೆಮ್ಮದಿಯ ಸಾವನ್ನು ಕಾಣುವ ಸಾಧ್ಯತೆ ಇದೆ. ತುಂಬು ಬಾಳನ್ನು ಬದುಕಬೇಕಿದ್ದರೆ ಗಳಿಸಿದ್ದನ್ನು ಹತ್ತಿರದವರಿಗೆ ಹಂಚುವ ಜೊತೆಗೆ ದೈವಕಾರ್ಯಕ್ಕೂ ದೇಣಿಗೆಯಾಗಿ ನೀಡಿ.

click me!