ಧಾರವಾಡದ ಯುವತಿ ದೇಹ ಹೊಕ್ಕ ಎಂಟು ಆತ್ಮ: ಕೂದಲು ಒರೆಸುವಾಗ ನಡೆದ ಭಯಾನಕ ಘಟನೆ ವಿವರಿಸಿದ ಘೋಸ್ಟ್​ ಹಂಟರ್​

By Suchethana DFirst Published Oct 26, 2024, 4:41 PM IST
Highlights

ಸ್ಮಶಾನದ ಎದುರೇ ನೆಲೆಸಿದ್ದ ಯುವತಿಯ ಕುಟುಂಬದ ಭಯಾನಕ ಸ್ಟೋರಿ ತೆರೆದಿಟ್ಟಿದ್ದಾರೆ ಘೋಸ್ಟ್​ ಹಂಟರ್​ ಮೊಹಮ್ಮದ್​ ಇಮ್ರಾನ್​. ಎಂಟು ಆತ್ಮದ ಘಟನೆಯಿದು...
 

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಆದರೆ ಇದೀಗ ಖ್ಯಾತ ಘೋಸ್ಟ್​ ಹಂಟರ್​ ಮೊಹಮ್ಮದ್​ ಇಮ್ರಾನ್​ ಅವರು ತಮಗಾಗಿರುವ ಭಯಾನಕ ಅನುಭವವನ್ನು ರಾಜೇಶ್​ ಗೌಡ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. 

ಅವರ ಬಾಯಲ್ಲೇ ಕೇಳಿ... 
ಇದು ಹಲವು ವರ್ಷಗಳ ಹಿಂದೆ ನಡೆದ ಘಟನೆ. ಧಾರವಾಡದ ಮನೆಯೊಂದರ ಘಟನೆ ಇದು. ಆ ಮನೆಯ ಎದುರು ಸ್ಮಶಾನ ಇತ್ತು. ಆ ಮನೆಯ ಯುವತಿ ನನಗೆ ಕಾಲ್​ ಮಾಡಿ, ಸರ್​  ನಮ್ಮ ಮನೆಯಲ್ಲಿ ಚಿಕ್ಕಮ್ಮಂಗೆ ಸಮಸ್ಯೆ ಇದೆ, ಬಂದು ನೋಡಿ ಅದನ್ನು ಬಗೆಹರಿಸಿ ಎಂದು ಫೋಟೋ ಕಳಿಸಿದಳು. ಚಿಕ್ಕಮ್ಮನ ಫೋಟೋ ನೋಡಿದಾಗ ಆಕೆಯ ಮೇಲೆ  ಬ್ಲ್ಯಾಕ್​ ಮ್ಯಾಜಿಕ್​ ಆಗಿದ್ದು ಗೊತ್ತಾಯಿತು. ಅದನ್ನು ಕ್ಲಿಯರ್​ ಮಾಡೋಣ ಎಂದು ಅವರ ಮನೆಗೆ ಹೋದ್ವಿ. ಈ ಸಮಯದಲ್ಲಿ ನಾವು ಕೆಲವೊಂದು ಶೂಟಿಂಗ್​ ಮಾಡಬೇಕಾಗುತ್ತದೆ. ಸ್ಮಶಾನದ ಒಳಗೂ ಹೋಗಿ ಎಲ್ಲಾ ಶೂಟಿಂಗ್​ ಮಾಡಿ ಆ ಮನೆಯವರ ಬಗ್ಗೆ ಎಲ್ಲಾ ಡಿಟೇಲ್ಸ್​ ಕಲೆಕ್ಟ್​ ಮಾಡಿ ಬಂದ್ವಿ. 

Latest Videos

ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?

ಅದರ ಬಗ್ಗೆ ಸ್ಟಡಿ ಮಾಡುವಾಗ ಗೊತ್ತಾಗಿದ್ದು ಏನೆಂದ್ರೆ, ಆ ಮನೆಯಲ್ಲಿ ಸಮಸ್ಯೆ ಆಗ್ತಿರೋದು ಚಿಕ್ಕಮ್ಮನಿಂದ ಅಲ್ಲ, ಬದಲಿಗೆ ಅದೇ ಯುವತಿಯಿಂದ ಎಂದು. ಚಿಕ್ಕಮ್ಮನಿಗೆ ಆಗಿದ್ದ ಸ್ವಲ್ಪ ಬ್ಲ್ಯಾಕ್​ ಮ್ಯಾಜಿಕ್​ ಎಲ್ಲಾ ತೆಗೆದ್ವಿ. ಆದರೆ ಆ ಯುವತಿ ಮಾತ್ರ ಏನು ಮಾಡಿದ್ರೂ ತನಗೆ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳಲಿಲ್ಲ. ಹಾಗೂ ಹೀಗೂ ಮಾಡಿ ಆಕೆಯನ್ನು ಒಪ್ಪಿಸಿಯಾಯ್ತು.  ಮೊದಲಿಗೆ ಹೀಲಿಂಗ್​ ಬಾತ್​ ಮಾಡಿಸಿದ್ವಿ. ಪೂಜೆಗೆ ಕೂರಿಸಿ ಆಕೆಯ ಬಗ್ಗೆ ಸ್ಟಡಿ ಮಾಡಿದ್ರೆ ಒಬ್ಬರಲ್ಲ,  ಎಂಟು ಆತ್ಮ ಆಕೆಯ ಮೈಮೇಲೆ ಇತ್ತು. ನೋಡಲು ತೀರಾ ಸಣ್ಣಗೆ ಇದ್ದ ಆಕೆಯ ಮೈಮೇಲೆ ಎಂಟು ಆತ್ಮ ಇತ್ತು.  ಅದರಲ್ಲಿ ಒಂದು ಆತ್ಮ ಸಿಕ್ಕಾಪಟ್ಟೆ ಶಕ್ತಿಯುತ ಆಗಿತ್ತು. ಆ ಆತ್ಮವನ್ನು ತೆಗೆಯಲು ಹೋದಾಗ ಚಿಕ್ಕಪುಟ್ಟ ಆತ್ಮಕ್ಕೆ ಕಳುಹಿಸಿ ಆತ ಎಸ್ಕೇಪ್​ ಆಗುತ್ತಿದ್ದ. ದಿನಪೂರ್ತಿ ಅಲ್ಲೇ ಇದ್ದರೂ ಆ ದೊಡ್ಡ ಆತ್ಮವನ್ನು ತೆಗೆಯಲು ಆಗಲೇ ಇಲ್ಲ ಎಂದು ಅಂದು ನಡೆದ ಘಟನೆ ವಿವರಿಸಿದ್ದಾರೆ ಮೊಹಮ್ಮದ್​ ಇಮ್ರಾನ್​..

ಅಷ್ಟಕ್ಕೂ ಇಷ್ಟೂ ಆತ್ಮ ಅವಳ ಮೇಲೆ ಬರಲು ಕಾರಣ ಎಂದರೆ, ಆಕೆಗೆ ಪಿರಿಯಡ್ಸ್​ ಆದ ದಿನ, ಮದುವೆಗೆ ಎಲ್ಲೋ ಹೋಗಬೇಕು ಎಂದು ತಲೆ ಸ್ನಾಮ ಮಾಡಿ ಕೂದಲು ಬಿಟ್ಟುಕೊಂಡು ಗೇಟ್​ ಬಳಿ ಕೂದಲು ಒರೆಸಿಕೊಳ್ಳುತ್ತಿದ್ದಳು. ಒಂದು ಬಿಟ್ಟ ಕೂದಲು, ಇನ್ನೊಂದು ಪಿರಿಯಡ್ಸ್​ ಟೈಮ್​. ಮನೆಯ ಎದುರು ಇದ್ದ ಸ್ಮಶಾನದ ಆತ್ಮಗಳಿಗೆ ಅದು ಅಟ್ರಾಕ್ಟ್​ ಆಗಿಬಿಟ್ಟಿದೆ. ಅದರಲ್ಲಿ ಹೆವ್ವಿ ಶಕ್ತಿ ಅಂದೆನಲ್ಲ, ಆ ಆತ್ಮಕ್ಕೆ ಇವಳ ಮೇಲೆ ಲವ್​ ಆಗಿ ಈಕೆಯ ಶರೀರದೊಳಗೆ ಬಂದು ಸೇರಿಕೊಂಡಿದ್ದ. ನಾವು ಏನೇ ಮಾಡಿದರೂ ಆತ ಹೋಗುತ್ತಿರಲಿಲ್ಲ. ಕೊನೆಗೆ ನನ್ನ ಗುರುಗಳಿಗೆ ಕಾಲ್​ ಮಾಡಿ ಅಲ್ಲಿಂದಲೇ ಆ ಆತ್ಮವನ್ನು ಕಟ್ಟಿಹಾಕುವ ಯತ್ನ ಮಾಡಲಾಯಿತು.

ಆಕೆಯನ್ನು ನಮ್ಮ ಜಾಗಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಅಂದುಕೊಂಡ್ವಿ. ಆದರೆ ಮೊದಲು ಒಪ್ಪಿದ ಮನೆಯವರು ವಿಚಿತ್ರ ರೀತಿಯಲ್ಲಿ ಬೇಡ್ವೇ ಬೇಡ ಎಂದರು. ಇದ್ಯಾಕೋ ಆಗದ ಕೆಲಸ ಎಂದು ಬಂದು ಬಿಟ್ಟೆ. ಸುಮಾರು 15 ದಿನಗಳ ಬಳಿಕ ಅದೇ ಯುವತಿ ಕಾಲ್​  ಮಾಡಿದಳು. ಆಗ ನಾನು ಐಟಿಸಿನಲ್ಲಿ ಮಾರ್ಕೆಂಟಿಂಗ್​ನಲ್ಲಿ ಕೆಲಸ ಮಾಡುತ್ತಿದ್ದರಿಂದ ಫೀಲ್ಡ್​ನಲ್ಲಿ ಇದೆ. ಯುವತಿ ಅದೂ ಇದೂ ಮಾತಾಡಿದ್ಲು. ಆಗ ನಾನು ನಾನು ಆಕೆಗೆ ತಮಾಷೆ ಮಾಡಲು ಎಲ್ಲಿ ನಿಮ್ಮ ಅಣ್ಣ ಎಂದು ಕೇಳಿಬಿಟ್ಟೆ. ಅವಳು ಯಾವ ಅಣ್ಣ ಎಂದು ಕೇಳಿದಳು. ಆತ್ಮದ ಬಗ್ಗೆ ಹೇಳಿದೆ. ಆ ಆತ್ಮ ಇವಳನ್ನು ಲವ್ ಮಾಡುತ್ತಿತ್ತು. ಅಣ್ಣ ಎಂದು ಹೇಳಿದ್ದು ಕೇಳಿ ಸಿಟ್ಟು ಬಂದು, ಫೋನ್​ನಲ್ಲಿಯೇ ಆ ಹುಡುಗಿಯೇ ವಿಚಿತ್ರವಾಗಿ ನನಗೆ ಬೈಯಲು ಶುರು ಮಾಡಿ ನಿನಗೆ ಏನು ಮಾಡ್ತೇನೆ ನೋಡಿ ಎಂದಳು. ಏನು ಮಾಡ್ತಿ ಎಂದು ನಾನು ಪ್ರಶ್ನಿಸ್ತಿರೋಷ್ಟರಲ್ಲಿಯೇ  ರಪ್​ ಎಂದು ಒಂದು ಆಟೋ ಎಲ್ಲಿಂದಲೋ ಬಂದು ನನ್ನ ಕೈಯನ್ನು ಗುದ್ದಿ ಹೊರಟೇ ಹೋಯಿತು. ಕೈ ಸಿಕ್ಕಾಪಟ್ಟೆ ಊದಿಕೊಂಡು ತೊಂದರೆ ಪಟ್ಟೆ. ಅತ್ತ ಫೋನ್​ನಿಂದ ಜೋರಾದ ನಗು ಬಂದು, ನೋಡಿದ್ಯಾ ಏನು ಮಾಡ್ತೇನೆಂದು ಕೇಳಿದ್ಯಲ್ಲಾ ಎಂದು ಪ್ರಶ್ನಿಸಿದ.

ಅಮೃತಧಾರೆ ಮೂಡ್​ನಲ್ಲೇ ರಿಯಲ್​ ಹೆಂಡ್ತಿಯನ್ನೂ ಕನ್​ಫ್ಯೂಸ್​ ಮಾಡ್ಕೋತಾರಾ ರಾಜೇಶ್​? ದಂಪತಿ ಹೇಳಿದ್ದು ಕೇಳಿ

ಕೊನೆಗೆ ಮನೆಗೆ ಬಂದು ಪೂಜಾ ಮನೆಯಲ್ಲಿ ಕುಳಿತು ಮತ್ತೆ ಫೋನ್​ ಮಾಡಿ, ಕೊನೆಗೂ ಆ ಹೆವ್ವಿ ಶಕ್ತಿ ಲವರ್​ ಅನ್ನು ಫೋನ್​ನಲ್ಲಿಯೇ ಕಟ್ಟಿ ಹಾಕಿದೆ ಎಂದು ನೆನಪಿಸಿಕೊಂಡಿದ್ದಾರೆ ಅವರು.  ಈಗ ಯುವತಿ ಮದುವೆಯಾಗಿ ಚೆನ್ನಾಗಿದ್ದಾಳೆ. ಆಗಲೇ  ಮನೆ ಚೇಂಜ್​ ಮಾಡಲು ಹೇಳಿದ್ದೆ ಎಂದು ಸ್ಮರಿಸಿಕೊಂಡಿದ್ದಾರೆ. 
 

click me!