ನಾಳೆ ದೇವಶಯನಿ ಏಕಾದಶಿ: ಯಾವ ರಾಶಿಯವರು ಏನು ದಾನ ಮಾಡಬೇಕು?

By Sushma HegdeFirst Published Jun 28, 2023, 6:25 PM IST
Highlights

ಆಷಾಢ ಏಕಾದಶಿಯಂದು ರಾಶಿಚಕ್ರದ ಪ್ರಕಾರ ಕೆಲವು ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಬರಲಿದೆ.

ಆಷಾಢ ಏಕಾದಶಿಯಂದು ರಾಶಿಚಕ್ರದ ಪ್ರಕಾರ ಕೆಲವು ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಬರಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಆಷಾಢ ಮಾಸದ ಶುದ್ಧ ಪಕ್ಷದ ಏಕಾದಶಿಯನ್ನು ಆಷಾಢ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ವಿಠ್ಠಲನನ್ನು ನೋಡಲು ರಾಜ್ಯದ ವಿವಿಧ ಭಾಗಗಳಿಂದ ಜನರು ಪಂಢರಪುರಕ್ಕೆ ಹೋಗುತ್ತಾರೆ. ಆಷಾಧಿ ಏಕಾದಶಿಯನ್ನು ದೇವಶಯನಿ ಏಕಾದಶಿ ಅಥವಾ ಪದ್ಮನಾಭ ಏಕಾದಶಿ ಎಂದೂ ಕರೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ ಆಷಾಢ ಏಕಾದಶಿಯ ಪ್ರಾಮುಖ್ಯತೆ ತುಂಬಾ ವಿಭಿನ್ನವಾಗಿದೆ. ಆದ್ದರಿಂದ ಈ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಬಗ್ಗೆ ಇಲ್ಲಿದೆ ಡೀಟೇಲ್ಸ್.

Latest Videos

ನಾಳೆ ಆಷಾಢ ಏಕಾದಶಿ ಇದೆ. ಇದು ವಿಷ್ಣುವಿಗೆ ತುಂಬಾ ಪ್ರಿಯವಾದ ದಿನ. ಆಷಾಢ ಏಕಾದಶಿಯಂದು ರಾಶಿ ಪ್ರಕಾರ ದಾನ ಮಾಡಬೇಕು. ದೇವಶಯನಿ ಅಂದರೆ ಆಷಾಢ ಏಕಾದಶಿಯ ದಿನದಂದು ನಿಮ್ಮ ರಾಶಿಯ ಪ್ರಕಾರ ದಾನ ಮಾಡಿದರೆ ನಿಮಗೆ ಹಲವಾರು ಲಾಭಗಳು ಸಿಗುತ್ತವೆ. ಪ್ರತಿಯೊಬ್ಬರೂ ತಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಏನನ್ನು ದಾನ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ (Aries)

ಈ ರಾಶಿಯವರು ಏಕಾದಶಿಯಂದು ಅನ್ನದಾನ ಮಾಡಬೇಕು. ಯಾವುದೇ ಧಾರ್ಮಿಕ ಸ್ಥಳದಿಂದ ತಂದ ಸಸಿಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಗೋಧಿ, ಸಿಹಿತಿಂಡಿಗಳನ್ನು ಸಹ ದಾನ ಮಾಡಬಹುದು. ನೀವು ಆಸ್ಪತ್ರೆಯ ರೋಗಿಗಳಿಗೆ ಖಿಚಡಿ ಮತ್ತು ಹಣ್ಣುಗಳನ್ನು ದಾನ ಮಾಡಬಹುದು.

ವೃಷಭ ರಾಶಿ (Taurus) 

ವೃಷಭ ರಾಶಿಯವರು ಅನ್ನ ದಾನ ಮಾಡಬೇಕು. ಧಾರ್ಮಿಕ ಸ್ಥಳದಲ್ಲಿ ಪುರೋಹಿತರಿಗೆ ಬಿಳಿ ಬಟ್ಟೆಗಳನ್ನು ದಾನ ಮಾಡಬೇಕು. ಹಾಗೆಯೇ ಹಸುವಿಗೆ ಮೇವು, ಚಪಾತಿ ಅಥವಾ ಬೆಲ್ಲವನ್ನು ತಿನ್ನಿಸಿ.

ಮಿಥುನ ರಾಶಿ (Gemini)

ಈ ರಾಶಿಯ ಜನರು ಹಸಿರು ಬಟ್ಟೆಗಳನ್ನು ದಾನ ಮಾಡಬೇಕು. ಹಸುವಿಗೆ ಹಸಿರು ಮೇವು ನೀಡಬೇಕು. ಧಾರ್ಮಿಕ ಪುಸ್ತಕಗಳನ್ನು ಕೊಟ್ಟರೆ ಇದು ಈ ರಾಶಿಯವರಿಗೆ ಮಂಗಳಕರವಾಗಿರುತ್ತದೆ.

ಕರ್ಕ ರಾಶಿ (Cancer) 

ಈ ರಾಶಿಯವರು ಅಕ್ಕಿಯನ್ನು ದಾನ ಮಾಡಬೇಕು. ಬಿಳಿ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಲಾಭದಾಯಕ. ಹಸುವಿಗೆ ಆಹಾರ ನೀಡಿ.

ಸಿಂಹ ರಾಶಿ (Leo) 

ಸಿಂಹ ರಾಶಿಯವರು ಗೋಧಿಯನ್ನು ದಾನ ಮಾಡಬೇಕು. ಅಲ್ಲದೆ ತಾಮ್ರದ ಸೂರ್ಯನನ್ನು ಮಾಡಿ ದೇವಸ್ಥಾನಕ್ಕೆ ದಾನ ಮಾಡಿ. ಶ್ರೀ ಹನುಮಂತನ ದೇವಸ್ಥಾನದಲ್ಲಿ ಕೆಂಪು ಬಟ್ಟೆಯನ್ನು ಅರ್ಪಿಸಬೇಕು.

ನಾಳೆ ಆಷಾಢ ಏಕಾದಶಿ: ಪೂಜೆ ವಿಧಾನ ಯಾವುದು? ಏನು ಮಾಡಬೇಕು?

 

ಕನ್ಯಾ ರಾಶಿ (Virgo) 

ಈ ರಾಶಿಯ ಜನರು ಹಸಿರು ಬಟ್ಟೆಗಳನ್ನು ಧರಿಸಬೇಕು. ಹಸುವಿಗೆ ಆಹಾರ ನೀಡಬೇಕು. ದೇವಸ್ಥಾನಗಳಲ್ಲಿ ಗಂಟೆ ಬಾರಿಸಬಹುದು ಮತ್ತು ಆಸ್ಪತ್ರೆಗಳಿಗೆ ಹಣ್ಣುಗಳನ್ನು ದಾನ ಮಾಡಬಹುದು.

ತುಲಾ ರಾಶಿ (Libra) 

ಈ ರಾಶಿಯವರು ದೇವಸ್ಥಾನಕ್ಕೆ ಧೂಪದ್ರವ್ಯ, ಕರ್ಪೂರ, ಬಿಳಿ ಬಟ್ಟೆಗಳನ್ನು ದಾನ ಮಾಡಬೇಕು. ನೀವು ಪರಿಮಳಯುಕ್ತ ಅಗರಬತ್ತಿಗಳನ್ನು ಸಹ ದಾನ ಮಾಡಬಹುದು.

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿಯವರು ಗೋಧಿ, ಉದ್ದಿನಬೇಳೆಯನ್ನು ದಾನ ಮಾಡಬೇಕು. ಕೆಂಪು ವಸ್ತ್ರವನ್ನು ದಾನ ಮಾಡುವುದರಿಂದ ಅನೇಕ ರೋಗಗಳು ದೂರವಾಗುತ್ತವೆ.

ಧನು ರಾಶಿ (Sagittarius)

ಧನು ರಾಶಿಯವರು ಬೇಳೆ ಮತ್ತು ಬಾಳೆಹಣ್ಣುಗಳನ್ನು ದಾನ ಮಾಡಿದರೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ನೀವು ಧಾರ್ಮಿಕ ಪುಸ್ತಕಗಳನ್ನು ಸಹ ವಿತರಿಸಬಹುದು. ದೇವಸ್ಥಾನಕ್ಕೆ ಸಿಹಿಯನ್ನೂ ದಾನ ಮಾಡಬೇಕು.

ಮಕರ ರಾಶಿ (Capricorn) 

ಈ ರಾಶಿಯವರು ಎಳ್ಳು ಮತ್ತು ಉದ್ದಿನ ಬೇಳೆಯನ್ನು ದಾನ ಮಾಡಬೇಕು. ಕಪ್ಪು ಬಟ್ಟೆ ಮತ್ತು ಕಬ್ಬಿಣದ ಕಡಾಯಿ ದಾನವು ಉತ್ತಮವಾಗಿರುತ್ತದೆ. ಹಾಗೆಯೇ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ಹಾಕಬೇಕು.

ಕುಂಭ ರಾಶಿ (Aquarius)

ಈ ರಾಶಿಯ ಜನರು ಉಡಿ ದಾಲ್ ಮತ್ತು ಕಪ್ಪು ಎಳ್ಳನ್ನು ದಾನ ಮಾಡಬೇಕು. ಬಡವರಿಗೆ ಕಪ್ಪು ಬಟ್ಟೆ ವಿತರಿಸಿ. ವಿಷ್ಣು ದೇವಾಲಯಕ್ಕೆ ಅನ್ನ ಮತ್ತು ಹಳದಿ ಬಟ್ಟೆಗಳನ್ನು ದಾನ ಮಾಡಿ.

ಸಂಬಂಧ ಹಾಳು ಮಾಡುವ ರಾಶಿ ಯಾವುದು ...?

ಮೀನ ರಾಶಿ (Pisces)

ಈ ರಾಶಿಯವರು ಹಣ್ಣುಗಳನ್ನು ದಾನ ಮಾಡಬೇಕು. ಅಥವಾ ಶ್ರೀ ವಿಷ್ಣು ದೇವಸ್ಥಾನಕ್ಕೆ ಹಳದಿ ಬಟ್ಟೆಯನ್ನು ನೀಡಬೇಕು....

click me!