ರಾಧಿಕಾ ಬಿಟ್ಟು ಯಶ್ ಹೃದಯ ಕದ್ದಿದ್ದ ಮೊತ್ತೊಬ್ಬಳು ಕನ್ನಡದ ಸ್ಟಾರ್ ನಟಿ ಯಾರು ಗೊತ್ತೆ ?

Published : Nov 20, 2017, 06:43 PM ISTUpdated : Apr 11, 2018, 12:54 PM IST
ರಾಧಿಕಾ ಬಿಟ್ಟು ಯಶ್ ಹೃದಯ ಕದ್ದಿದ್ದ ಮೊತ್ತೊಬ್ಬಳು ಕನ್ನಡದ ಸ್ಟಾರ್ ನಟಿ ಯಾರು ಗೊತ್ತೆ ?

ಸಾರಾಂಶ

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಪತ್ನಿ ರಾಧಿಕಾರ ಜೊತೆಗೆ ಅಭಿನಯಿಸಿದ್ದಾರೆ. ಹಾಗಿರೋವಾಗ ಇವರೇ ಅಲ್ಲವೇ ಯಶ್ ಹೃದಯ ಕದ್ದದ್ದು.ರಾಕಿಂಗ್ ಸ್ಟಾರ್​ ರನ್ನೇ ತಮ್ಮ ಅಭಿಮಾನಿಯಾಗಿಸಿಕೊಂಡದ್ದು....? ಅಂತ ನೀವೂ ಗೆಸ್ ಮಾಡಿದ್ರೆ ನಿಮ್ಮ ಊಹಿ ಖಂಡಿತಾ ಸುಳ್ಳು.

ರಾಕಿಂಗ್ ಸ್ಟಾರ್ ಯಶ್. ನೇರ ನುಡಿಯ ಸೂಪರ್ ಸ್ಟಾರ್. ಗತ್ತು ಗೈರತ್ತು. ಸಿಟ್ಟು-ಸೆಡವು ಎಲ್ಲವೂ ಇದೆ. ಆದರೆ, ಅದು ತೆರೆ ಮೇಲೆ ಕಾಣೋ ಪಾತ್ರದಲ್ಲಿ ಮಾತ್ರ ಕಾಣೋದು. ತೆರೆ ಹಿಂದೆ ಈ ಸೂಪರ್ ಸ್ಟಾರ್ ಕೂಡ ಸಾಮಾನ್ಯ ಅಭಿಮಾನಿ. ಶ್ರೀಸಾಮಾನ್ಯ ವ್ಯಕ್ತಿ. ಈ ಚೆಲುವನ ಹೃದಯವೂ ಮಿಡಿಯುತ್ತದೆ.ಸುಂದರಿಯನ್ನ ಕಂಡಾಗ ಕನಲುತ್ತದೆ. ಮೆಚ್ಚುತ್ತದೆ. ಅಭಿಮಾನಿನೂ ಆಗಿಬಿಡುತ್ತದೆ.

ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಗಜಕೇಸರಿ ಚಿತ್ರದಲ್ಲಿ ಅಮೂಲ್ಯ ಅಭಿನಯಿಸಿದ್ದಾರೆ. ಗೂಗ್ಲಿ ಚಿತ್ರ್ರದಲ್ಲಿ ಕೃತಿ ಈ ಚೆಲುವನ ನಾಯಕಿ. ಮಾಸ್ಟರ್ ಪೀಸ್ ನಲ್ಲಿ ಮೋಹಕ ಸುಂದರಿ ಶಾನ್ವಿ ಶ್ರೀವಾತ್ಸವ್ ಇದ್ದಾರೆ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಪತ್ನಿ ರಾಧಿಕಾರ ಜೊತೆಗೆ ಅಭಿನಯಿಸಿದ್ದಾರೆ. ಹಾಗಿರೋವಾಗ ಇವರೇ ಅಲ್ಲವೇ ಯಶ್ ಹೃದಯ ಕದ್ದದ್ದು.ರಾಕಿಂಗ್ ಸ್ಟಾರ್​ ರನ್ನೇ ತಮ್ಮ ಅಭಿಮಾನಿಯಾಗಿಸಿಕೊಂಡದ್ದು....? ಅಂತ ನೀವೂ ಗೆಸ್ ಮಾಡಿದ್ರೆ ನಿಮ್ಮ ಊಹಿ ಖಂಡಿತಾ ಸುಳ್ಳು.ಯಾಕೆಂದ್ರೆ ಇವರ್ಯಾರೂ ಅಲ್ಲವೇ ಅಲ್ಲ.

ಬಂಗಾರದ ಮನುಷ್ಯ ಚಿತ್ರದ ನಾಯಕಿ

ಹೌದು..! ರಾಕ್ಕಿಂಗ್ ಸ್ಟಾರ್ ಮೆಚ್ಚಿದ ನಾಯಕಿ ಭಾರತಿಯಮ್ಮ.ಭಾರತಿಯಮ್ಮ ಅಂದ್ರೆ ಯಶ್'ಗೆ ತುಂಬಾ ಇಷ್ಟ. ಅಷ್ಟೇ ಪ್ರೀತಿ ತುಂಬಿದ ಗೌರವವೂ ಇದೆ.ಭಾರತಿಯಮ್ಮ ಇಡೀ ಸಿನಿಮಾ ಹಿಸ್ಟರಿಯಲ್ಲಿಯೇ ಅತ್ಯಂತ ಸುಂದರವಾದ ನಾಯಕಿ ನಟಿ. ಹಿಂದೆ ಇಲ್ಲ. ಮುಂದೆ ಬರೋದಿಲ್ಲ ಅನ್ನೋ ಮಟ್ಟಿಗೆ ಭಾರತಿ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ಈ ರಾಕ್ಕಿಂಗ್ ಸ್ಟಾರ್ ಯಶ್.

ರಾಕಿಂಗ್ ಸ್ಟಾರ್ ತಮ್ಮ ಈ ನೆಚ್ಚಿನ ನಾಯಕಿಯನ್ನ ತುಂಬಾ ಇಷ್ಟ ಪಡ್ತಾರೆ. ಅಷ್ಟೇ ಗೌರವದಿಂದಲೂ ಕಾಣುತ್ತಾರೆ. ತಮ್ಮ ಈ ಅಭಿಮಾನವನ್ನ ಮೆಚ್ಚುಗೆಯನ್ನ ಭಾರತಿಯವರ ಎದುರೇ ವೇದಿಕೆ ಮೇಲೆ ಮಾಧ್ಯಮಗಳ ಕ್ಯಾಮೆರಾ ಮುಂದೇನೆ ಹೇಳಿರೋದು. ಅದು ಭಾರತಿಯವರು ಮತ್ತು ಅನಿರುದ್ಧ ಅಭಿನಯದ ರಾಜಾಸಿಂಹ ಚಿತ್ರದ ಆಡಿಯೋ ರಿಲೀಸ್ ಟೈಮ್​' ನಲ್ಲಿಯೇ ಅನ್ನೋದು ವಿಶೇಷ. ಏನೇ ಆಗಲಿ ಭಾರತಿ ವಿಷ್ಣುವರ್ಧನ್ ಎವರ್ ಬ್ಯೂಟಿಫುಲ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!