ಯಶ್'ರ ಹೊಸ ಬ್ರೇಕಿಂಗ್ ನ್ಯೂಸ್

Published : Dec 26, 2017, 09:59 PM ISTUpdated : Apr 11, 2018, 12:39 PM IST
ಯಶ್'ರ ಹೊಸ ಬ್ರೇಕಿಂಗ್ ನ್ಯೂಸ್

ಸಾರಾಂಶ

ನರ್ತನ್‌ಗೆ ‘ಮಾಸ್ಟರ್‌ಪೀಸ್’ ಚಿತ್ರದಲ್ಲಿ ಯಶ್ ಜೊತೆ ಕೆಲಸ ಮಾಡಿದ್ದರು. ನರ್ತನ್ ಕೆಲಸ ಯಶ್ ಮೆಚ್ಚಿಕೊಂಡಿದ್ದರು.

ವರ್ಷದ ಕೊನೆಯಲ್ಲಿ ಚಿತ್ರರಂಗದಲ್ಲಿ ಸಂಭ್ರಮ ಹುಟ್ಟಿಸಿದ ಚಿತ್ರ ‘ಮಫ್ತಿ’. ಶಿವಣ್ಣನ ಖದರ್, ಶ್ರೀಮುರಳಿಯ ಪವರ್ ನೋಡಿದ ಪ್ರೇಕ್ಷಕ ಫಿದಾ ಆಗಿದ್ದಾನೆ. ‘ಮಫ್ತಿ’ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಂದರ್ಭ ಹೀಗಿರುವಾಗ ಚೊಚ್ಛಲ ಚಿತ್ರದಲ್ಲಿ ಸೆಂಚುರಿ ಬಾರಿಸಿರುವ ನಿರ್ದೇಶಕ ನರ್ತನ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅವರ ಮುಂದಿನ ಚಿತ್ರ ಯಾರಿಗಾಗಿ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆಯಾದರೂ ಅದಕ್ಕೆ ಉತ್ತರ ಸಿಕ್ಕಿದೆ.

ನರ್ತನ್ ಮುಂದಿನ ಚಿತ್ರಕ್ಕೆ ಹೀರೋ ಬೇರೆ ಯಾರೂ ಅಲ್ಲ ಮಾಸ್ಟರ್ ಪೀಸ್ ಯಶ್. ಈ ಹೊತ್ತಿನಲ್ಲಿ ನರ್ತನ್ ಜೊತೆ ನಿರ್ಮಾಪಕ ಜಯಣ್ಣ ಮತ್ತೊಂದು ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಆ ಚಿತ್ರಕ್ಕೆ ಯಶ್ ನಾಯಕನಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಯಶ್‌ರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನರ್ತನ್ ಕತೆ ರೆಡಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ನರ್ತನ್‌ಗೆ ‘ಮಾಸ್ಟರ್‌ಪೀಸ್’ ಚಿತ್ರದಲ್ಲಿ ಯಶ್ ಜೊತೆ ಕೆಲಸ ಮಾಡಿದ್ದರು. ನರ್ತನ್ ಕೆಲಸ ಯಶ್ ಮೆಚ್ಚಿಕೊಂಡಿದ್ದರು. ಹೀಗಾಗಿ ಈ ಸ್ನೇಹ ಕೆಲಸ ಮಾಡುವ ಸಾಧ್ಯತೆ ಇದ್ದು, ಅಲ್ಲದೇ ಜಯಣ್ಣ ಮತ್ತು ಯಶ್ ಬಾಂಧವ್ಯವೂ ಚೆನ್ನಾಗಿರುವುದರಿಂದ ನರ್ತನ್ ನಿರ್ದೇಶನದಲ್ಲಿ ಯಶ್ ಮುಂದಿನ ಚಿತ್ರ ಸೆಟ್ಟೇರುವ ಲಕ್ಷಣ ಕಾಣುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೋದಿ ಜೀವನಾಧರಿತ ‘ಮಾ ವಂದೇ’ ಸಿನಿಮಾ ಚಿತ್ರೀಕರಣ ಆರಂಭ
ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ: ಮಾರ್ಕ್‌ ಸಿನಿಮಾದ ವೇದಿಕೆಯಲ್ಲಿ ಗರ್ಜಿಸಿದ್ಯಾಕೆ ಕಿಚ್ಚ ಸುದೀಪ್‌?