
ಬೆಂಗಳೂರು (ಜು. 14): ಕನ್ನಡದ ಹೆಸರಾಂತ ಖಳನಟ ‘ವಜ್ರುಮುನಿ’ ಅವರ ಹೆಸರಲ್ಲೊಂದು ಸಿನಿಮಾ ಸೆಟ್ಟೇರಿದೆ. ನಿರ್ದೇಶಕ ಭರತ್ ಚಕ್ರವರ್ತಿ ನೇತೃತ್ವದ ಹೊಸಬರ ತಂಡ ಮೊನ್ನೆಯಷ್ಟೇ ಆ ಚಿತ್ರಕ್ಕೆ ಮುಹೂರ್ತವೂ ಮುಗಿಸಿದೆ.
ಆದರೆ ಮುಹೂರ್ತ ಕಂಡ ಮೂರೇ ದಿವಸದಲ್ಲಿ ಆ ಚಿತ್ರದ ಟೈಟಲ್ ವಿವಾದಕ್ಕೆ ಸಿಲುಕಿದೆ. ವಜ್ರಮುನಿ ಹೆಸರಲ್ಲಿ ಸಿನಿಮಾ ಮಾಡಲು ನಾವು ಯಾರಿಗೂ ಅನುಮತಿ ಕೊಟ್ಟಿಲ್ಲ. ಅವರ ಹೆಸರು ಬಳಸಿಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ. ಹಾಗೇನಾದರೂ ಬಳಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ವಜ್ರಮುನಿ ಪತ್ನಿ ಲಕ್ಷ್ಮೀ ಹಾಗೂ ಮಗ ಜಗದೀಶ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಜತೆಗೇ ನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಲಾಗಿದೆ.
‘ನಮ್ಮ ಕುಟುಂಬದ ಅನುಮತಿ ಇಲ್ಲದೆ ವಜ್ರಮುನಿ ಅವರನ್ನು ಚಿತ್ರದ ಟೈಟಲ್ಗೆ ಬಳಸಿಕೊಳ್ಳಲಾಗಿದೆ. ಆ ಕಾರಣಕ್ಕಾಗಿ ನಮ್ಮ ತಕರಾರು. ಅದನ್ನು ಮೀರಿ ವಜ್ರುಮುನಿ ಟೈಟಲ್ ಬಳಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲೂ ಮನವಿ ಮಾಡಿದ್ದೇವೆ’ ಎಂದು ಜಗದೀಶ್ ವಜ್ರಮುನಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.