
ಬಾಗಲಕೋಟೆ (ಜು. 16): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟ ಸಾವರ್ವಭೌಮ ಚಿತ್ರವನ್ನು ಮಹಾಕೂಟದ ಪುಷ್ಕರಣೆಯಲ್ಲಿ ಚಿತ್ರೀಕರಣ ಮಾಡಲು ಅಪಸ್ವರ ಕೇಳಿ ಬಂದಿತ್ತು. ಕೊನೆಗೂ ಹೋರಾಟಗಾರರ ಮನವೊಲಿಸಿ ಪುಷ್ಕರಣೆಯಲ್ಲಿ ನಟ ಸಾರ್ವಭೌಮ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ಮುಕ್ತಾಯಗೊಂಡಿದೆ.
ನಿನ್ನೆ ರಾತ್ರಿಯಿಂದ ನಸುಕಿನ ಐದು ಗಂಟೆಯವರೆಗೂ ನಡೆದ ಚಿತ್ರೀಕರಣ ನಡೆದಿದೆ. ನಟ ಪುನೀತ್ ರಾಜ್ ಕುಮಾರ್, ರವಿಶಂಕರ್, ಹಾಗೂ ಸಹಕಲಾವಿದರು ಚಿತ್ರೀಕರಣ ದಲ್ಲಿ ಭಾಗಿಯಾಗಿದರು.
ಬಾದಾಮಿ ಬಳಿಯ ಐತಿಹಾಸಿಕ ಮಹಾಕೂಟ ಕ್ಷೇತ್ರ ಪುಷ್ಕರಣೆಯಲ್ಲಿ ನಟ ಸಾರ್ವಭೌಮ ಸೆಟ್ ಹಾಕಿದ್ದಕ್ಕೆ ಹೋರಾಟಗಾರರು ವಿರೋಧಿಸಿದ್ದರು. ಹೋರಾಟಗಾರರ ಮನವೊಲಿಸಿದ ಬಳಿಕ 5 ಗಂಟೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. 1 ಪಿಎಸ್ ಐ, 15 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ನಿರಾಂತಕವಾಗಿ ಚಿತ್ರೀಕರಣ ನಡೆಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.