
ಖ್ಯಾತ ನಿರ್ದೇಶಕ ರಾಜಮೌಳಿ ಅವರಿಗೆ ಇಡೀ ಜಗತ್ತೇ ಅಭಿಮಾನಿಯಾಗಿದೆ. ಆದರೆ ರಾಜಮೌಳಿ ಅವರನ್ನೇ ಬೆರಗುಗೊಳಿಸಿದ ಕೆಲವು ನಿರ್ದೇಶಕರಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ ಒಬ್ಬ ನಿರ್ದೇಶಕ ಚಿತ್ರೀಕರಿಸಿದ ದೃಶ್ಯದ ಬಗ್ಗೆ ರಾಜಮೌಳಿ ಆಸಕ್ತಿಕರ ಮಾತುಗಳನ್ನಾಡಿದ್ದಾರೆ.
ಖ್ಯಾತ ನಿರ್ದೇಶಕ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ 'ವಾರಣಾಸಿ' ಎಂಬ ಸಿನಿಮಾ ಮಾಡುತ್ತಿದ್ದಾರೆ. ರಾಜಮೌಳಿ ಒಂದು ಸಂದರ್ಶನದಲ್ಲಿ ತಮಗೆ ಇಷ್ಟವಾದ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ. ಟಾಲಿವುಡ್ನಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಸುಕುಮಾರ್ ತಮಗೆ ಇಷ್ಟವಾದ ನಿರ್ದೇಶಕರು ಅಂತ ರಾಜಮೌಳಿ ಹೇಳಿದ್ದಾರೆ.
ಹಲವು ಸಿನಿಮಾಗಳನ್ನು ನೋಡಿ, 'ಇಂತಹ ಸಿನಿಮಾ ನಾನೇಕೆ ಮಾಡಲಿಲ್ಲ' ಎಂದುಕೊಂಡಿದ್ದೇನೆ. ಹಾಗೆಯೇ, 'ಇಂತಹ ದೃಶ್ಯ ತೆಗೆಯುವ ಐಡಿಯಾ ನನಗೇಕೆ ಬರಲಿಲ್ಲ' ಎಂದೂ ಅನಿಸಿದ ಸಂದರ್ಭಗಳಿವೆ. ಸುಕುಮಾರ್ ನಿರ್ದೇಶನದ 'ಜಗಡಂ' ಚಿತ್ರದಲ್ಲಿನ ಒಂದು ದೃಶ್ಯ ನನಗಿನ್ನೂ ತುಂಬಾ ಇಷ್ಟ.
ರಾಮ್ ಪೋತಿನೇನಿ ಒಂದು ಗ್ಯಾಂಗ್ ಸೇರುತ್ತಾರೆ. ಆದರೆ ಆ ಗ್ಯಾಂಗ್ನವರು ಅವರನ್ನು ಕೊನೆಯಲ್ಲಿ ನಿಲ್ಲಿಸುತ್ತಾರೆ. ಎದುರಾಳಿ ಗ್ಯಾಂಗ್ ತುಂಬಾ ಬಲವಾಗಿರುತ್ತದೆ. ಇದರಿಂದ ರಾಮ್ ಇರುವ ಗ್ಯಾಂಗ್ನವರೆಲ್ಲಾ ಹೆದರಿ ಹಿಂದಕ್ಕೆ ಸರಿಯುತ್ತಾರೆ. ಆದರೆ ಕೊನೆಯಲ್ಲಿದ್ದ ರಾಮ್ ಮಾತ್ರ ಅಲ್ಲೇ ನಿಲ್ಲುತ್ತಾರೆ. ಹೀಗಾಗಿ ಅವರು ಗ್ಯಾಂಗ್ನ ಮುಂದೆ ಬಂದು ನಿಲ್ಲುತ್ತಾರೆ. ಆ ದೃಶ್ಯ ತುಂಬಾ ಸ್ಟೈಲಿಶ್ ಆಗಿದ್ದು, ಮೈ ಜುಮ್ಮೆನಿಸುವಂತಿತ್ತು ಎಂದು ರಾಜಮೌಳಿ ಹೇಳಿದ್ದಾರೆ.
ಅಂತಹ ಐಡಿಯಾ ನನಗೇಕೆ ಬರಲಿಲ್ಲ ಎಂದುಕೊಂಡಿದ್ದೆ ಎಂದು ರಾಜಮೌಳಿ ತಿಳಿಸಿದ್ದಾರೆ. ಒಂದು ದಿನ ಸುಕುಮಾರ್ ಅವರನ್ನು ಕರೆದು, 'ಸಿನಿಮಾ ಹೇಗೇ ಇರಲಿ, ಆ ಒಂದು ದೃಶ್ಯವನ್ನು ಪವನ್ ಕಲ್ಯಾಣ್ ಜೊತೆ ಮಾಡಿದ್ದರೆ, ನೀವೇ ಟಾಲಿವುಡ್ನ ನಂಬರ್ 1 ನಿರ್ದೇಶಕರಾಗುತ್ತಿದ್ದಿರಿ' ಎಂದು ಹೇಳಿದ್ದಾಗಿ ರಾಜಮೌಳಿ ತಿಳಿಸಿದ್ದಾರೆ.
ಸುಕುಮಾರ್ ಮತ್ತು ರಾಮ್ ಪೋತಿನೇನಿ ಕಾಂಬಿನೇಷನ್ನಲ್ಲಿ ಬಂದ 'ಜಗಡಂ' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಆದರೆ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಮೂಲತಃ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಬೇಕಿತ್ತು, ಆದರೆ ಕೊನೆಗೆ ರಾಮ್ ಪಾಲಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.