
ಬೆಂಗಳೂರು (ಡಿ.21): ರಾಕಿಂಗ್ ಸ್ಟಾರ್ ಯಶ್ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ರಿಲೀಸಾಗಿದೆ. 4 ವರ್ಷದ ಯಶ್ ಕನಸು ನನಸಾಗಿದೆ. ತೆರೆಮೇಲೆ ಯಶ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಚಿತ್ರ ನೋಡಿದವರೆಲ್ಲಾ ಯಶ್ ಅಭಿನಯಕ್ಕೆ ಮನ ಸೋತಿದ್ದಾರೆ. ಥಿಯೇಟರ್ನಿಂದ ಹೊರ ಬಂದಾಗ ಸಂತೃಪ್ತಿಯ ನಗೆ. ಅಲ್ಲಿಗೆ ಚಿತ್ರ ಅರ್ಧ ಗೆದ್ದಂತೆ.
ಎರಡೂವರೆ ಗಂಟೆ ಚಿತ್ರಿದಾಗಿದ್ದು ಎಲ್ಲಿಯೂ ಬೋರ್ ಹೊಡೆಸಲ್ಲ. ಕೆಜಿಎಫ್ ಸಿನಿಮಾದುದ್ದಕ್ಕೂ ಡೈನಾಮಿಕ್ ಡೈಲಾಗ್ ಗಳದ್ದೇ ಅಬ್ಬರ ಹೆಚ್ಚಾಗಿದೆ. ಸಿನಿಮಾ ಶುರುವಾಗೋದು ಅನಂತ್ನಾಗ್ ಅವರಿಂದ. ಟಿವಿ ಆ್ಯಂಕರ್ ಮಾಳವಿಕಾ ಕೆಜಿಎಫ್ ಕಥೆ ಕೇಳ್ತಾರೆ. ಆಗ ಅನಂತ್ ನಾಗ್ ಹೇಳುತ್ತಾ ಹೋಗುತ್ತಾರೆ. ಅಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಕೆಜಿಎಫ್ ನಲ್ಲಿ ಹುಟ್ಟೋ ಯಶ್ ಮುಂಬೈ ಸೇರಿಕೊಂಡು ಡಾನ್ ಆಗಿ ಬೆಳೆಯುತ್ತಾರೆ. ಹನ್ನೆರಡನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ತಾಯಿ ಸಾಯುವಾಗ ‘ಹೇಗಾದ್ರೂ ಬದುಕು ಆದ್ರೆ ಸಾಯುವಾಗ ಶ್ರೀಮಂತನಾಗಿ ಸಾಯಿ’ ಅಂತಾರೆ. ಅಲ್ಲಿಂದ ಮುಂಬೈ ಕಡೆ ಬದುಕು ಹೊರಳುತ್ತದೆ. ಅಲ್ಲಿಂದ ಅನೇಕ ತಿರುವು ಪಡೆಯುತ್ತದೆ.
1981 ರಲ್ಲಿ ಮುಂಬೈಯಿಂದ ಬೆಂಗಳೂರಿಗೆ ಶಿಫ್ಟ್ ಆಗುತ್ತಾನೆ ಯಶ್. ಅಲ್ಲಿನ ಪಬ್ ಒಂದರಲ್ಲಿ ಹಿರೋಯಿನ್ ಎಂಟ್ರಿ ಆಗುತ್ತಾಳೆ. ಆಕೆಯ ಜೊತೆ ಲವ್ವಲ್ಲಿ ಬೀಳ್ತಾರೆ ರಾಕಿ ಭಾಯ್..!
ಚಿತ್ರದ ಸೆಕೆಂಡ್ ಹಾಫಲ್ಲಿ ಟ್ವಿಸ್ಟ್ ಇಟ್ಟಿದ್ದಾರೆ ಪ್ರಶಾಂತ್ ನೀಲ್. ಕೆಜಿಎಫ್ ಗಣಿ ಧಣಿ ಮಗನನ್ನು ಎತ್ತಲು ಬಂದ ಯಶ್ ತಮ್ಮ ಕೆಲಸ ಮಾಡಿ ಮುಗಿಸ್ತಾರಾ? ಜನರನ್ನು ರಕ್ಷಿಸ್ತಾರಾ? ತಿಳಿದುಕೊಳ್ಳಲು ಒಮ್ಮೆ ಹೋಗಿ ಕೆಜಿಎಫ್ ನೋಡಿಕೊಂಡು ಬನ್ನಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.